SHIVAMOGGA LIVE | 1 AUGUST 2023
SAGARA : ನಿವೃತ್ತ ನೌಕರರೊಬ್ಬರನ್ನು (Retired Employee) ತಮ್ಮ ಕಾರಿನಲ್ಲಿ ಮನೆವರೆಗೆ ಕರೆದೊಯ್ದು ಹಿರಿಯ ಅಧಿಕಾರಿಯೊಬ್ಬರು ಬೀಳ್ಕೊಡುಗೆ ನೀಡಿದ್ದಾರೆ. ಸಾಗರ ಉಪ ವಿಭಾಗೀಯ ಕಚೇರಿಯಲ್ಲಿ ಈ ವಿಭಿನ್ನ ಬೀಳ್ಕೊಡುಗೆ ನಡೆಯಿತು.
ಯಾರಿಗೆ ಬೀಳ್ಕೊಡುಗೆ?
ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿದ್ದ ಕೃಷ್ಣಪ್ಪ ಅವರು ಜು.31ರಂದು ನಿವೃತ್ತರಾದರು. ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಸನ್ಮಾನ ಮಾಡಿ, ಗೌರವ ಸಲ್ಲಿಸಿದರು. ಅಲ್ಲದೆ ಎಲ್ಲರು ನಿಂತು ಸಾಮೂಹಿಕ ಫೋಟೊ ಕ್ಲಿಕ್ಕಿಸಿಕೊಂಡರು. ತಮ್ಮ ಕಚೇರಿ ಸಿಬ್ಬಂದಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಕೂಡ ಪಾಲ್ಗೊಂಡಿದ್ದರು.
ಕಾರಿನಲ್ಲಿ ಮನೆವರೆಗೆ ಕರೆದೊಯ್ದರು
ಸಮಾರಂಭದ ಬಳಿಕ ಮನೆಗೆ ತೆರಳಲು ಸಿದ್ದವಾಗುತ್ತಿದ್ದ ಕೃಷ್ಣಪ್ಪ ಅವರಿಗೆ ಅಚ್ಚರಿ ಕಾದಿತ್ತು. ಕಚೇರಿಯಿಂದ ಹೊರ ಬರುತ್ತಿದ್ದಂತೆ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ಕಾರಿನಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರು. ಕೃಷ್ಣಪ್ಪ ಅವರು ಸಂಕೋಚದಿಂದಲೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತರು. ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ಹಿಂಬದಿ ಸೀಟಿನಲ್ಲಿ ಕುಳಿತರು. ಕೃಷ್ಣಪ್ಪ ಅವರ ಮನೆವರೆಗೆ ಕರೆದೊಯ್ದು ಬೀಳ್ಕೊಡುಗೆ ನೀಡಿದರು.
ಪಲ್ಲವಿ ಸಾತೇನಹಳ್ಳಿ ಅವರ ಈ ನಡೆ ಕಚೇರಿ ಸಿಬ್ಬಂದಿಯ ಮನ ಗೆದ್ದಿತು. ಅಲ್ಲದೆ ಕೃಷ್ಣಪ್ಪ ಅವರು ಕುಟುಂಬದವರಿಗು ಖುಷಿ ನೀಡಿತು.
ಇದನ್ನೂ ಓದಿ – ದಾರಿ ಮಧ್ಯೆ ಅಜ್ಜಿ ಜೊತೆ MLA ಮಾತು, ಮುಗ್ಧ ಉತ್ತರಗಳಿಗೆ ನೆಟ್ಟಿಗರು ಫಿದಾ, ವಿಡಿಯೋಗೆ ಮೆಚ್ಚುಗೆ
ಕಚೇರಿ ಸಿಬ್ಬಂದಿ ಮಂಜುಳಾ ಭಜಂತ್ರಿ, ಕಲ್ಲಪ್ಪ ಮೆಣಸಿನಹಾಳ್, ದೇವರಾಜ್, ಪ್ರಶಾಂತ್, ಗುರು, ಮಂಜುನಾಥ್ ಸೇರಿದಂತೆ ಹಲವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200