ಆನಂದಪುರ ಸಮೀಪ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ, ಮುಂದೇನಾಯ್ತು? ಇಲ್ಲಿದೆ ಪ್ರಮುಖ 10 ಬೆಳವಣಿಗೆಯ ಮಾಹಿತಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | ANANDAPURA NEWS | 24 ನವೆಂಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಾಲೆ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ತನೆ ವಿರುದ್ಧ ಸಿಡಿದೆದ್ದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಸಾಗರ ತಾಲೂಕಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಳಿಕ ಹಲವು ರಾಜಕೀಯ ತಿರುವುಗಳನ್ನು ಪಡೆದು, ಆರೋಪ, ಪ್ರತ್ಯಾರೋಪಗಳು ಕೇಳಿ ಬಂದವು. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ನಂತರ ನಡೆದ ಹತ್ತು ಬೆಳವಣಿಗೆಯ ವಿವರ ಇಲ್ಲಿದೆ.

AVvXsEhukSpxMutW2NK9VKGYCJZbo5D pjw3GRDkWyD3QT v 5zYVwEgeYE3aEDsovr8qrBA UQyz9AQDDex3S4rTo4az0PahRQVwBlAZyMtGiVPmjIGkU LSlNTwwcQIsaKN5pfZRF1fn83VRNvDL6sSTDmd1NurZc7

ಬೆಳವಣಿಗೆ 1

ಸಾಗರ ತಾಲೂಕು ಇರುವಕ್ಕಿಯ ಇಂದಿರಾ ಗಾಂಧಿ ವಸತಿ ನಿಲಯದ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು. ವಸತಿ ನಿಲಯದಿಂದ ಘೋಷಣೆ ಕೂಗುತ್ತ ಆನಂದಪುರ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ, ಪ್ರತಿಭಟಿಸಲು ನಿರ್ಧರಿಸಿದ್ದರು. ಕೊನೆಗೆ ಯಡೇಹಳ್ಳಿ ಗಣಪತಿ ದೇವಾಲಯದ ಆವರಣದಲ್ಲಿ ಮುಷ್ಕರ ನಡೆಸಿದರು.

ಇದನ್ನೂ ಓದಿ | ವಸತಿ ಶಾಲೆ ಮಕ್ಕಳಿಂದ ದಿಢೀರ್ ಪ್ರತಿಭಟನೆ, ಮೈ, ಕೈ ಮೇಲೆ ಬಾಸುಂಡೆ ಪ್ರದರ್ಶನ, ಶಾಸಕರು, ಡಿಸಿ ಸ್ಥಳಕ್ಕೆ ಬರುವಂತೆ ಪಟ್ಟು

ಬೆಳವಣಿಗೆ 2

ಪ್ರಾಚಾರ್ಯ ಡಿ.ಕೆ.ಚಂದ್ರಪ್ಪ ಅವರು ಮದ್ಯಪಾನ ಮಾಡಿ ಬಂದು ವಿದ್ಯಾರ್ಥಿಗಳನ್ನು ಥಳಿಸುತ್ತಾರೆ. ಬಾಸುಂಡೆ ಬರುವಂತೆ ಹೊಡೆಯುತ್ತಾರೆ. ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ. ದುರ್ವತನೆ ತೋರುತ್ತಿರುವ ಪ್ರಾಚಾರ್ಯರು ಮತ್ತು ಕೆಲವು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಶಾಸಕರು, ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಬೆಳವಣಿಗೆ 3

ವಿದ್ಯಾರ್ಥಿಗಳ ನೋವು ಆಲಿಸಿದ ಗ್ರಾಮಸ್ಥರು ಅಧಿಕಾರಿಗಳು, ಶಾಸಕರಿಗೆ ಮಾಹಿತಿ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪ್ರಾಚಾರ್ಯ ಡಿ.ಕೆ.ಚಂದ್ರಪ್ಪ. ‘ತನ್ನದೇನೂ ತಪ್ಪಿಲ್ಲ. ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಹೀಗೆ ಹೇಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

AVvXsEhYW2 2FXlT5ure YmyaRvT1quF3ex8f8VoVm ZfPs1Dn1sCVhwp3F5aL 9KVHnWRQ roLUby NluqZnD5Wy225De 2knDI0ajZ4p78oCfkW1uwFJuIQ8mvxsfsoi9Jeq NMAlmskEWCjb47mXPwgBNGPXrthIutgqeeXvZ37fJjonnplU2GOrC5Bs1rw=s926

ಬೆಳವಣಿಗೆ 4

ವಿಚಾರ ತಿಳಿದು ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನೋಟ್ ಪುಸ್ತಕದ ಹಾಳೆಯಲ್ಲಿ ಬರೆದು ಕೊಟ್ಟ ಮನವಿ ಸ್ವೀಕರಿಸಿದರು. ಮಕ್ಕಳ ಪ್ರತಿಭಟನೆ ವಿಚಾರ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಉಪ ವಿಭಾಗಾಧಿಕಾರಿ ಜೊತೆಗೆ ಚರ್ಚೆ ನಡೆಸಿದರು. ಬಳಿಕ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

AVvXsEhzLZCLKxQmtdVXMEGlNn4WibbyJ2Z26zYj6AuMmKI6xF6eVe7Y1ooByZ CVR8kiETJ7JIC v1UmsygrQrCPKAohzJjvYNeCzyQsg6SEEO1 AY2OdMSCAQ1nor0YF69u5duAbdgquPw9cA3yPVZ2MDWqK21EdTqXhPiGRIuMktfdGWNXTd0wDNvNUvnvQ=s926

ಬೆಳವಣಿಗೆ 5

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ನಂತರ ಗಣಪತಿ ದೇವಸ್ಥಾನದ ಆವರಣದಿಂದ ಯಡೇಹಳ್ಳಿ ವೃತ್ತಕ್ಕೆ ಪ್ರತಿಭಟನೆ ಸ್ಥಳಾಂತರವಾಯಿತು. ಯಡೇಹಳ್ಳಿಯಲ್ಲಿ ರಸ್ತೆ ತಡೆ ನಡೆಸಲಾಯಿತು. ಪ್ರಾಚಾರ್ಯರನ್ನು ಕೂಡಲೆ ಅಮಾನತು ಮಾಡಬೇಕು ಎಂದು ಆಗ್ರಹಿಸಲಾಯಿತು.

shivamogga live subscribe band

ಬೆಳವಣಿಗೆ 6

ವಿದ್ಯಾರ್ಥಿಗಳ ಪ್ರತಿಭೆಟನೆಯಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬೇಳೂರು ಗೋಪಾಲಕೃಷ್ಣ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಯಕರ್ತರು ಆರೋಪಿಸಿದರು. ಪ್ರಾಚಾರ್ಯರ ಅಮಾನತು ಮಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಒಂದು ವರ್ಷದಿಂದ ಸಮಸ್ಯೆಯ ಕುರಿತು ಮಕ್ಕಳು ತಿಳಿಸಿದರೂ ಕ್ರಮ ಕೈಗೊಳ್ಳದಿರುವುದು ಏಕೆ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

AVvXsEjqMSA2uRAsiGNadVeIs0kuwyK9NKxXjP1G93BTbJp9ySKDa9yRhZkdlZoXRozKsTm9opoDvxsJAbk99Hz80cycMdrXvl2dQ006h8LEGiMOjWjI4qcZB1h2tdCLbDXcHQgSlM1nwQaAf1

ಬೆಳವಣಿಗೆ 7

ಘಟನೆ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ‘ಶಾಸಕ ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾನು ಕೂಡ ಡಿಡಿಪಿಐ ಮತ್ತು ಸಿಇಓ ಅವರಿಗೆ ಈ ವಿಚಾರದ ಕುರಿತು ಗಮನ ಹರಿಸುವಂತೆ ತಿಳಿಸಿದ್ದೇನೆ’ ಎಂದರು.

ಬೆಳವಣಿಗೆ 8

ಶಿವಮೊಗ್ಗದಲ್ಲಿ ಶಾಸಕ ಹಾಲಪ್ಪ ಪ್ರತಿಕ್ರಿಯೆ ನೀಡಿ, ‘ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈಗ ಉರಿ ಬಿಸಿಲಿನಲ್ಲಿ ಯಾರೋ ಕರೆದುಕೊಂಡು ಹೋಗಿ ಸರ್ಕಲ್’ನಲ್ಲಿ ಕೂರಿಸಿಕೊಂಡಿದ್ದಾರಂತೆ. ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುವಂತೆ ನಡೆದುಕೊಳ್ಳಬಾರದು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.

AVvXsEiEcOBBPD5 1baA6Sf74 NnpeBRPihMU phU2Ff qTa2jF EbjpBEsnkCF6PPUquMOrjexOs I1P142Qq4N2d4HaFstk2X5oPIPO6jy79pR7211edm6W mDNryZwYzmgfGIX97ui2OCJMIJnyAviE9URVVz6K 5pcIV2P2ZOJlwZd eG4Iozo9SXcIUPA=s926

ಬೆಳವಣಿಗೆ 9

ಸ್ಥಳಕ್ಕೆ ಸಾಗರ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಭೇಟಿ ನೀಡಿದರು. ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಕರೆತಂದರು. ಮಕ್ಕಳ ಸಮಸ್ಯೆ ಆಲಿಸಿದರು.

ಬೆಳವಣಿಗೆ 10

ಪ್ರಾಚಾರ್ಯ ಡಿ.ಕೆ.ಚಂದ್ರಪ್ಪ ಅವರ ಬದಲಿಗೆ ಬಂದಗದ್ದೆ ಶಾಲೆಯ ಪ್ರಾಚಾರ್ಯರಿಗೆ ಪ್ರಭಾರ ಅಧಿಕಾರ ವಹಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment