ಇವತ್ತು ರಾತ್ರಿವರೆಗೂ ಕುಂಸಿ ರೈಲ್ವೆ ಗೇಟ್ ಬಂದ್, ಪರ್ಯಾಯ ಮಾರ್ಗ ಯಾವುದು ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನೈಋತ್ಯ ರೈಲ್ವೆಯ ಶಿವಮೊಗ್ಗ ವಿಭಾಗದ ರೈಲ್ವೆ ಲೆವೆಲ್ ಕ್ರಾಸ್-79(ಕುಂಸಿ ರೈಲ್ವೆ ಗೇಟ್)ರಲ್ಲಿ ತಾಂತ್ರಿಕ ಪರಿಶೀಲನೆ ನಿಮಿತ್ತ ಡಿ.22ರ ರಾತ್ರಿ 7ರವರೆಗೆ ಗೇಟ್ ಬಂದ್ ಮಾಡಲಾಗಿದೆ. ಕುಂಸಿ – ಆನಂದಪುರ ನಡುವೆ ಲಘು ಮತ್ತು ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ಯಾವುದು ಪರ್ಯಾಯ ಮಾರ್ಗ?

ಶಿವಮೊಗ್ಗದಿಂದ ತೆರಳುವ ಭಾರಿ ವಾಹನಗಳು ಆಯನೂರು, 5ನೇ ಮೈಲಿಗಲ್ಲು, ಸೂಡೂರು, ಶೆಟ್ಟಿಕೆರೆ ಮಾರ್ಗವಾಗಿ ಚೋರಡಿ ತಲುಪಬಹುದು. ಸಾಗರದಿಂದ ಬರುವ ವಾಹನಗಳು ಚೋರಡಿ, ಶೆಟ್ಟಿಕೆರೆ, ಸೂಡೂರು, 5ನೇ ಮೈಲಿಗಲ್ಲು, ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಸಂಚರಿಸಬಹುದು.

ಶಿವಮೊಗ್ಗದಿಂದ ಸಾಗರಕ್ಕೆ ತೆರಳುವ ಲಘು ವಾಹನಗಳು ಕುಂಸಿ, ಹುಬ್ಬನಹಳ್ಳಿ, ಬಾಳೆಕೊಪ್ಪ, ಚಿಕ್ಕಮರಸ, ಕುಂಸಿ ಹಾಗೂ ಸಾಗರದಿಂದ ಶಿವಮೊಗ್ಗಕ್ಕೆ ತೆರಳುವ ವಾಹನಗಳು ಕೆರೆಕೋಡಿಯಿಂದ ಚಿಕ್ಕಮರಸ, ಬಾಳೆಕೊಪ್ಪ, ಹುಬ್ಬನಹಳ್ಳಿ, ಕುಂಸಿ ಮುಖಾಂತರ ರಾಷ್ಟ್ರೀಯ ಹೆದ್ದಾರಿ 206ಕ್ಕೆ ತಲುಪುವುದು. ಸೋಮವಾರ ರಾತ್ರಿಯಿಂದಲೇ ಮಾರ್ಗ ಬದಲಾವಣೆ ಆಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ABOUT ME NEW FINAL FINAL

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment