ಶಿವಮೊಗ್ಗ ಲೈವ್
THIRTHAHALLI NEWS, 17 NOVEMBER 2024 : ಪೆಟ್ರೋಲ್ ಹಾಕುವಾಗ ದಿಢೀರ್ ಬೆಂಕಿ ಕಾಣಿಸಿಕೊಂಡು ಓಮ್ನಿ (Omni) ಕಾರು ಹೊತ್ತಿ ಉರಿದಿದೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ ಹೊನ್ನಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ.
ಮೊಹಮ್ಮದ್ ಸನಾವುಲ್ಲಾ ಎಂಬುವವರಿಗೆ ಸೇರಿದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಂಗಳೂರು ಆಸ್ಪತ್ರೆಯಿಂದ ಶಿವಮೊಗ್ಗಕ್ಕೆ ಮರಳುವಾಗ ಪೆಟ್ರೋಲ್ ಖಾಲಿ ಆಗಿತ್ತು. ಪೆಟ್ರೋಲ್ ಹಾಕುವಾಗ ದಿಢೀರ್ ಬೆಂಕಿ ಹೊತ್ತಿಕೊಂಡು ಓಮ್ನಿ ಕಾರು ಸುಟ್ಟು ಕರಕಲಾಗಿದೆ.

ಕಾರಿನಲ್ಲಿ ಐವರು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಸೊರಬ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್, ಕಾರಣವೇನು?
