SHIVAMOGGA LIVE NEWS | 18 DECEMBER 2022
ತೀರ್ಥಹಳ್ಳಿ : ರಾಜ್ಯಾದ್ಯಂತ 45 ಡಿವೈಎಸ್ಪಿಗಳ (dysp transfer) ವರ್ಗಾವಣೆ ಮಾಡಲಾಗಿದೆ. ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿಯಾಗಿದ್ದ ಶಾಂತವೀರ ಅವರನ್ನು ವರ್ಗಾಯಿಸಲಾಗಿದೆ. ತೀರ್ಥಹಳ್ಳಿಗೆ ಗಜಾನನ ವಾಮನ ಸುತಾರ್ ಅವರು ನೂತನ ಡಿವೈಎಸ್ಪಿಯಾಗಿದ್ದಾರೆ.
ಡಿವೈಎಸ್ಪಿ ಶಾಂತವೀರ ಅವರನ್ನು ಜಮಖಂಡಿಗೆ ವರ್ಗಾಯಿಸಲಾಗಿದೆ (dysp transfer). ಸಿಐಡಿಯಲ್ಲಿ ಪ್ರೊಬೆಷನರಿ ಡಿವೈಎಸ್ಪಿಯಾಗಿದ್ದ ಗಜಾನನ ವಾಮನ ಸುತಾರ್ ಅವರನ್ನು ತೀರ್ಥಹಳ್ಳಿಗೆ ನಿಯೋಜಿಸಲಾಗಿದೆ.
ಗಜಾನನ ಸುತಾರ್ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಸಿಐಡಿಗೆ ವರ್ಗವಾಗಿದ್ದರು.