ಶಿವಮೊಗ್ಗ ಲೈವ್.ಕಾಂ | HOSANAGARA NEWS | 1 ಅಕ್ಟೋಬರ್ 2020
ಹುಲಿಕಲ್ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಸುಮಾರು 400 ಅಡಿ ಪ್ರಪಾತಕ್ಕೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಬದುಕುಳಿದಿದ್ದಾನೆ.
ಹೇಗಾಯ್ತು ಘಟನೆ?
ಮಂಗಳೂರಿನಿಂದ ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕೋಕ್ ತುಂಬಿಕೊಂಡು ಲಾರಿ ಬರುತ್ತಿತ್ತು. ಬೆಳಗಿನ ಜಾವ ಘಾಟಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಲಾರಿ ಪ್ರಪಾತಕ್ಕೆ ಉರುಳಿದೆ.
ಲಾರಿ ಚಾಲಕ ಪಾರು
ಅಪಘಾತದ ದೃಶ್ಯ ಗಮನಿಸಿದರೆ ಒಳಗಿದ್ದವರು ಬದುಕುವ ಸಾಧ್ಯತೆ ಕಡಿಮೆ. ಆದರೆ ಚಾಲಕ ಯೋಗೇಶ್ ಅದೃಷ್ಟವಶಾತ್ ಬದುಕುಳಿದಿದ್ದಾರೆ. 400 ಅಡಿ ಪ್ರಪಾತದಿಂದ ರಸ್ತೆಗೆ ಬಂದಿದ್ದಾರೆ. ಚಾಲಕ ಯೋಗೇಶ್ ಸೊರಬ ತಾಲೂಕಿನ ಮಾಗಡಿಯವರು. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]