SHIVAMOGGA LIVE NEWS | 5 ಏಪ್ರಿಲ್ 2022
ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿ ಭದ್ರಾವತಿಯಲ್ಲಿ ಶಾಂತಿ ಕದಡುವ ಯತ್ನ ನಡೆಸಿದ ಆರೋಪ ಸಂಬಂಧ ಸಿ.ಎಂ.ಖಾದರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಡಿವೇಲು ಎಂಬುವವರು ಸಿ.ಎಂ.ಖಾದರ್ ಅವರ ವಿರುದ್ಧ ಭದ್ರಾವತಿ ಹಳೆ ನಗರ ಠಾಣೆಗೆ ದೂರು ನೀಡಿದ್ದರು.
ಸಿ.ಎಂ.ಖಾದರ್ ಕಮೆಂಟ್ ಏನು?
ಸುವರ್ಣ ನ್ಯೂಸ್ ಫೇಸ್ ಬುಕ್ ಖಾತೆಯಲ್ಲಿ ಹಲಾಲ್ ಬೇಡ ಎಂಬ ವಿಚಾರ ಸಂಬಂಧ ಹಿಂದೂ ಜನಜಾಗೃತಿ ಸಮಿತಿಯ ಮನವಿ ಕುರಿತು ಸುದ್ದಿ ಪ್ರಕಟಿಸಲಾಗಿತ್ತು. ಇದರ ಕೆಳಗೆ ಸಿ.ಎಂ.ಖಾದರ್ ಅವರ ಫೇಸ್ ಬುಕ್ ಖಾತೆಯ ಮೂಲಕ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಿ.ಎಂ.ಖಾದರ್ ಅವರ ಕಮೆಂಟ್’ನಿಂದಾಗಿ ಭದ್ರಾವತಿಯಲ್ಲಿ ಶಾಂತಿ ಕದಡುವ ಲಕ್ಷಣ ಕಂಡು ಬರುತ್ತಿದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭದ್ರಾವತಿ ಓಲ್ಡ್ ಟೌನ್ ಠಾಣೆಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200