ಶಿವಮೊಗ್ಗ ಸಿಟಿಯಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ ಸುದ್ದಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE CITY NEWS, 5 DECEMBER 2024

ಶಿವಮೊಗ್ಗ : ಇಡೀ ದಿನ ನಗರದಲ್ಲಿ ಏನೇನಾಯ್ತು. ಇಲ್ಲಿದೆ ಫಟಾಫಟ್‌ ನ್ಯೂಸ್‌ ಅಪ್‌ಡೇಟ್‌. ಸುದ್ದಿಯ ಮುಂದಿನ 23 ಪ್ಯಾರಾಗಳು ಕೆಳಗಿವೆ.

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಲೋಕಾಯುಕ್ತ ಪರಿಶೀಲನೆ

FATAFAT-NEWS-1ಮೆಗ್ಗಾನ್‌ ಆಸ್ಪತ್ರೆ : ಲೋಕಾಯುಕ್ತ ಪೊಲೀಸರು ಮೆಗ್ಗಾನ್‌ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಔಷಧ ಉಪ ಉಗ್ರಾಣ, ಮುಖ್ಯ ಉಗ್ರಾಣ ಮತ್ತು ಡಿಹೆಚ್‌ಒ ಕಚೇರಿಗೆ ಭೇಟಿ ನೀಡಿದ್ದರು. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಿಗೆ ಸರ್ಕಾರದ ಆದೇಶದ ಮೇರೆಗೆ ಈ ಪರಿಶೀಲನೆ ನಡೆಯಿತು.

ಇದನ್ನೂ ಓದಿ : ವಿಐಎಸ್‌ಎಲ್‌, ಭದ್ರಾವತಿಯಲ್ಲಿ ಬಿ.ವಿ.ಶ್ರೀನಿವಾಸ್‌ಗೆ ಮನವಿ

ಮೂರು ಶಾಖೆ ಆರಂಭ

FATAFAT-NEWS-2ಡಿಸಿಸಿ ಬ್ಯಾಂಕ್‌ : ಇದೇ ತಿಂಗಳು ಜಿಲ್ಲೆಯಲ್ಲಿ ಮೂರು ಹೊಸ ಶಾಖೆಗಳನ್ನು ಆರಂಭಿಸಲಾಗುತ್ತಿದೆ. ಇನ್ನು, ಬೆಳೆ ವಿಮೆ ನೀತಿ ಅವೈಜ್ಞಾನಿಕವಾಗಿದ್ದು ಪರಿಷ್ಕರಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಆರ್‌.ಎಂ.ಮಂಜುನಾಥ ಗೌಡ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇದನ್ನೂ ಓದಿ : ಡಿಸಿಸಿ ಬ್ಯಾಂಕ್‌ನಿಂದ ಮೂರು ಹೊಸ ಶಾಖೆ, ಎಲ್ಲೆಲ್ಲಿ? ಯಾವಾಗ ಆರಂಭ?

ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಚಾಲನೆ

FATAFAT-NEWS-3ನೆಹರು ಕ್ರೀಡಾಂಗಣ : ಡಿವಿಎಸ್‌ ಶಿಕ್ಷಣ ಸಂಸ್ಥೆ, ಕುವೆಂಪು ವಿಶ್ವವಿದ್ಯಾಲಯದ ಆ‍ಶ್ರಯದಲ್ಲಿ ಮೂರು ದಿನಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್‌.ಎಂ.ಗೋಪಿನಾಥ್‌ ಚಾಲನೆ ನೀಡಿದರು. ಮೂರು ದಿನ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಲಿದೆ.

ಇದನ್ನೂ ಓದಿ : ‘ನಾನೇನು ಸನ್ಯಾಸಿಯಲ್ಲ, ಮೂರು ಬಾರಿ ಶಾಸಕನಾಗಿದ್ದೇನೆʼ

Complete-ShivamoggaCity News

ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

FATAFAT-NEWS-4ಜಿಲ್ಲಾಧಿಕಾರಿ ಕಚೇರಿ : ಬೀದಿ ಬದಿ ವ್ಯಾಪಾರಸ್ಥರಿಗೆಂದೇ ಗುರುತಿಸಿದ ವ್ಯಾಪಾರದ ಜಾಗ, ಟಿವಿಸಿ ಕಮಿಟಿಯಲ್ಲಿ ಅನುಮೋದನೆಗೊಂಡ ವ್ಯಾಪಾರ ವಲಯಗಳನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ : ಸಿಲಿಂಡರ್‌ ಸ್ಪೋಟ, ಭದ್ರಾವತಿ ಗೋಬಿ ಮಂಚೂರಿ ಅಂಗಡಿ ಮಾಲೀಕ ಸಾವು

ಸಹ್ಯಾದ್ರಿ ಕಾಲೇಜಿನಲ್ಲಿ ಕಾರ್ಯಾಗಾರ

FATAFAT-NEWS-5ಸಹ್ಯಾದ್ರಿ ಕಾಲೇಜು : ಹಿರಿಯ ವಿದ್ಯಾರ್ಥಿಗಳ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಚಾಮರಾಜ ಒಡೆಯರ್‌ ಸಭಾಂಗಣದಲ್ಲಿ ಬೆಂಗಳೂರಿನ ಮಲೆನಾಡು ಕೋಚಿಂಗ್‌ ಸೆಂಟರ್‌ ಸಹಕಾರದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಸಲಾಯಿತು. ಮಾಜಿ ಸಂಸದ ಆಯನೂರು ಮಂಜುನಾಥ್‌ ಉದ್ಘಾಟಿಸಿದರು.

ಇದನ್ನೂ ಓದಿ : ಶಕ್ತಿ ಯೋಜನೆ, ಶಿವಮೊಗ್ಗದಲ್ಲಿ ಈವರೆಗೂ ಉಚಿತವಾಗಿ ಓಡಾಡಿದ ಮಹಿಳೆಯರೆಷ್ಟು?

ಶಿವಮೊಗ್ಗದಲ್ಲಿ ಪೊಲೀಸ್‌ ಕ್ರೀಡಾಕೂಟ

FATAFAT-NEWS-6ಡಿಎಆರ್‌ ಮೈದಾನ : ಜಿಲ್ಲಾ ಪೊಲೀಸ್‌ ಕ್ರೀಡಾಕೂಟಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್‌ ಚಾಲನೆ ನೀಡಿದರು. ಸಶಸ್ತ್ರ ಮೀಸಲು ಪಡೆ ಕವಾಯತ್‌ ಮೈದಾನದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಎಲ್ಲ ತಾಲೂಕಿನ ಪೊಲೀಸರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ಬೆಳೆ ವಿಮೆ, ಪರಿಷ್ಕರಣೆಗೆ ಆರ್‌ಎಂಎಂ ಆಗ್ರಹ, ಕಾರಣವೇನು?

ಸಾಧಕ ಮಹಿಳೆಯರಿಗೆ ಸನ್ಮಾನ

FATAFAT-NEWS-7.ಕೃಷಿ ಕಾಲೇಜು : ಕೃಷಿ ನಿರತ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸನ್ಮಾನಿಸಲಾಯಿತು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ : ಅಡಿಕೆ ಧಾರಣೆ | 4 ಡಿಸೆಂಬರ್‌ 2024 | ಶಿವಮೊಗ್ಗದಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್‌?

ಏಡ್ಸ್‌ ದಿನಾಚರಣೆ ಜಾಥಾ

FATAFAT-NEWS-8ಶಿವಮೊಗ್ಗ : ಏಡ್ಸ್‌ ದಿನಾಚರಣೆ ಪ್ರಯುಕ್ತ ಜಿಲ್ಲಾ ಕೋರ್ಟ್‌ ಆವರಣದಿಂದ ಐಎಂಎ ಸಭಾಂಗಣದವರೆಗೆ ಜಾಥಾ ನಡೆಸಲಾಯಿತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್‌ ನಾಯಕ್‌ ಜಾಥಾಗೆ ಚಾಲನೆ ನೀಡಿದರು.

Shimoga City news

Leave a Comment