ಶಿವಮೊಗ್ಗದ ನಾಗಸುಬ್ರಹ್ಮಣ್ಯ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ, ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮ ಇರಲಿದೆ?

ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.22ರಿಂದ ಅ.1ರವರೆಗೆ ಶರನ್ನವರಾತ್ರ್ಯೋತ್ಸವ (Navaratri) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿ ದಿನ ಹೋಮ, ಪೂಜಾ ಕೈಂಕರ್ಯಗಳು ನಡೆಯಲಿವೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾದ್ಯಾಯ, ಈ ಭಾರಿ ಶೈಲಪುತ್ರಿ ಅವತಾರದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಶಿಲ್ಪಿ ಪ್ರವೀಣ್‌ ಕವೇಡ್ಕರ್‌ ಅವರು ಮೂರ್ತಿಯನ್ನು ಸಿದ್ದಪಡಿಸಿದ್ದಾರೆ. ಸೆ.22ರಂದು ಸಂಜೆ 6 ಗಂಟೆಗೆ ನ್ಯಾಯಾಧೀಶರಾದ ಎಂ.ಎಸ್.ಸಂತೋಷ್‌ ಕುಮಾರ್‌ ಅವರು ಶರನ್ನವರಾತ್ರ್ಯೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ನಗರದ ವಿವಿಧ ಭಜನಾ ಮಂಡಳಿಗಳಿಂದ ಪ್ರತಿದಿನ ಸಂಜೆ 5.30ರಿಂದ ಭಜನೆ ಇರಲಿದೆ. ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಚಕ ಸಂದೇಶ ಉಪಾದ್ಯಾಯ ತಿಳಿಸಿದರು.

ಯಾವ್ಯಾವ ದಿನ ಏನೇನು ಕಾರ್ಯಕ್ರಮ?

ಸೆ.22ರಂದು ಅನುಶ್ರೀ ಅರ್ಪಿತ್‌ ಅಗಜೆ ಸಂಗೀತಾ ವಿದ್ಯಾಲಯದಿಂದ ಸಂಗೀತ ಕಾರ್ಯಕ್ರಮ, ಸೆ.23ರಂದು ಶೃಂಗೇರಿಯ ಭಗವತಿ ಆರ್ಟ್‌ ಸೆಂಟರ್‌ ವತಿಯಿಂದ ಭರತನಾಟ್ಯ, ಸೆ.24ರಂದು ಪುಷ್ಪಾ ಕೃಷ್ಣಮೂರ್ತಿ ಅವರಿಂದ ಭರತನಾಟ್ಯ, ಸೆ.25ರಂದು ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದಿಂದ ನವ ದುರ್ಗ ವೈಭವ ನೃತ್ಯ ರೂಪಕ, ಸೆ.26ರಂದು ಮಯೂರಿ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ.

Sandesh-Upadaya-Sri-nagasubramanya-temple-shimoga.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ ಜನ, ಏನಿದು ಅಭಿಯಾನ?

ಸೆ.27ರಂದು ಸದ್ಯೋಜಾತ ಗುರುಕುಲದ ಮಕ್ಕಳಿಂದ ದೇವಿ ಕೃತಿಗಳ ಗಾಯನ ಸ್ತೋತಗಳ ಪಠಣ, ಸೆ.28ರಂದು ಪೂಜಾರ್‌ ಅಕಾಡೆಮಿ ಆಫ್‌ ಮ್ಯೂಸಿಕ್‌ ವತಿಯಿಂದ ಹಿಂದೂಸ್ಥಾನಿ ಸಂಗೀತ, ಸೌಮ್ಯಾ ಪ್ರವೀಣ್‌ ತಂಡದಿಂದ ಕಥಕ್‌ ನೃತ್ಯ, ಸೆ.29ರಂದು ಆರ್ಟ್‌ ಆಫ್‌ ಲಿವಿಂಗ್‌ ವತಿಯಿಂದ ಸತ್ಸಂಗ, ಶಬರೀಶ್‌ ಕಣ್ಣನ್‌ ತಂಡದಿಂದ ಸಾಮೂಹಿಕ ಗಾನ ಧ್ಯಾನ ಜ್ಞಾನ ಕಾರ್ಯಕ್ರಮ, ಸೆ.30ರಂದು ಯಕ್ಷ ಸಂವರ್ಧನ ತಂಡದಿಂದ ಯಕ್ಷಗಾನ, ಅ.1ರಂದು ಮಹಿಳೆಯರಿಂದ ನಾಟಕ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಅಧ್ಯಕ್ಷ ಹೆಚ್‌.ರಾಮಲಿಂಗಪ್ಪ, ಕಾರ್ಯದರ್ಶಿ ಕೆ.ಎ.ರಮೇಶ್‌ ಇದ್ದರು.

JNNCE-Admission-Advt-scaled

#news, #Shivamogga, #Navaratri, #Sharannavaratri, #festival, #temple, #Hindu festival, #cultural events, #puja, #bhajans, #celebrations.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : September 19, 2025 at 7:20 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 19, 2025

Leave a Comment