ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್‌ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

Nandini-Milk-Theft-at-Savalanga-road-in-Shimoga

ಶಿವಮೊಗ್ಗ: ನಗರದ ವಿವಿಧೆಡೆ ಹಾಲಿನ ಪ್ಯಾಕೆಟ್‌ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಬೆಳಗಿನ ಜಾವ ಶಿಮುಲ್‌ ಸಿಬ್ಬಂದಿ ಲಾರಿಯಿಂದ ಹಾಲಿನ ಕ್ರೇಟ್‌ಗಳನ್ನು ಇಳಿಸಿ ಹೋದ ನಂತರ ಕಳ್ಳರು ಹಾಲಿನ ಪ್ಯಾಕೆಟ್‌ಗಳನ್ನು (Nandini milk) ಕದಿಯತ್ತಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆ ಸವಳಂಗ ರಸ್ತೆಯ ನಂದಿನಿ ಹಾಲಿನ ಪಾಯಿಂಟ್‌ನಲ್ಲಿ ಹಾಲಿನ ಪ್ಯಾಕೆಟ್‌ಗಳು ಕಳ್ಳತನ ಮಾಡಲಾಗಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನವರಿ 25ರ ಬೆಳಗ್ಗೆ 5.30ರ ಹೊತ್ತಿಗೆ ಹಾಲಿನ ಪ್ಯಾಕೆಟ್‌ಗಳನ್ನು ಕಳವು ಮಾಡಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ಸಮೀಪ ಧಗಧಗ ಹೊತ್ತಿ … Read more

KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

THIRTHAHALLI-BREAKING-NEWS

ಶಿವಮೊಗ್ಗ: ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (KFD) ಸೋಂಕಿತರೊಬ್ಬರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್‌ ಬಸ್ಸು, ಅದೃಷ್ಟವಶಾತ್‌ ಪ್ರಯಾಣಿಕರು ಪಾರು, ಆಗಿದ್ದೇನು? ಯುವಕ ಜನವರಿ 20 ರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಸ್ಥಳೀಯವಾಗಿ ಚಿಕಿತ್ಸೆ ಪಡೆದರೂ ಜ್ವರದ ತೀವ್ರತೆ ಕಡಿಮೆಯಾಗಿರಲಿ. ಕಳೆದ ಭಾನುವಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ … Read more

ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್‌ ಬಸ್ಸು, ಅದೃಷ್ಟವಶಾತ್‌ ಪ್ರಯಾಣಿಕರು ಪಾರು, ಆಗಿದ್ದೇನು?

Private-Bus-catches-fire-between-suduru-and-arasalu

ರಿಪ್ಪನ್‌ಪೇಟೆ: ಚಲಿಸುತ್ತಿದ್ದ ಖಾಸಗಿ ಸ್ಲೀಪರ್‌ ಬಸ್ಸಿನಲ್ಲಿ (Sleeper Bus) ಬೆಂಕಿ ಕಾಣಿಸಿಕೊಂಡಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ ಅರಸಾಳು – ಸೂಡೂರು ಸಮೀಪದ 9ನೇ ಮೈಲಿಗಲ್ಲು ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಖಾಸಗಿ ಬಸ್‌ ಹೊಸನಗರದಿಂದ ಶಿವಮೊಗ್ಗ ಮೂಲಕ ಬೆಂಗಳೂರಿಗೆ ತೆರಳುತಿತ್ತು. ದಿಢೀರ್‌ ಕಾಣಿಸಿಕೊಂಡ ಬೆಂಕಿ ಶ್ರೀ ಅನ್ನಪೂರ್ಣೇಶ್ವರಿ ಸಂಸ್ಥೆಯ … Read more

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? | 27 ಜನವರಿ 2026 | ಅಡಿಕೆ ಧಾರಣೆ

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. (Adike Rate) ಭದ್ರಾವತಿ ಮಾರುಕಟ್ಟೆ ಇತರೆ 30821 54475 ಸಿಪ್ಪೆಗೋಟು 11000 11000 ಶಿಕಾರಿಪುರ ಮಾರುಕಟ್ಟೆ ರಾಶಿ 52845 54800 ಸಾಗರ ಮಾರುಕಟ್ಟೆ ಕೆಂಪುಗೋಟು 33599 38599 ಚಾಲಿ 41299 45299 ಬಿಳೆ ಗೋಟು 30666 36025 ರಾಶಿ 51089 56370 ಸಿಪ್ಪೆಗೋಟು 18599 24599 ಶಿವಮೊಗ್ಗ ಮಾರುಕಟ್ಟೆ ಸರಕು 58100 97520 ಬೆಟ್ಟೆ 52700 66300 ರಾಶಿ 48366 57009 ಗೊರಬಲು … Read more

ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

Dr-ambedkar-residential-school-student-admitted-to-mc-gann-hospital

ಶಿವಮೊಗ್ಗ: ತೀವ್ರ ಕೆಮ್ಮಿನಿಂದ ಬಳಲುತ್ತಿದ್ದ ವಸತಿ ಶಾಲೆಯ (Residential School) 17 ವಿದ್ಯಾರ್ಥಿನಿಯರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಲು, ಚಿಕಿತ್ಸೆ ಕುರಿತು ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಕರ್ಷಕ ಪಥಸಂಚಲನ, ಹೇಗಿತ್ತು? ಯಾವೆಲ್ಲ ತುಕಡಿ ಪಾಲ್ಗೊಂಡಿದ್ದವು? ರಾಗಿಗುಡ್ಡದಲ್ಲಿರುವ ಡಾ. ಅಂಬೇಡ್ಕರ್‌ ವಿದ್ಯಾರ್ಥಿನಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಶಾಲೆ ಸಿಬ್ಬಂದಿ ಕೂಡಲೆ ವಿದ್ಯಾರ್ಥಿನಿಯರನ್ನು ಮೆಗ್ಗಾನ್‌ ಆಸ್ಪತ್ರೆಗೆ … Read more

ಹೊಳೆಹೊನ್ನೂರಿನಲ್ಲಿ ಹುಚ್ಚು ನಾಯಿ ಭೀತಿ, 11 ಜನರು ಆಸ್ಪತ್ರೆಗೆ

Community-Health-Center-at-Holehonnuru-in-Bhadravathi-taluk

ಹೊಳೆಹೊನ್ನೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 11 ಜನರು ನಾಯಿ ಕಡಿತಕ್ಕೆ (dog bite) ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ – ತೀರ್ಥಹಳ್ಳಿ ವ್ಯಕ್ತಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಕಾರಣವೇನು? ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಒಟ್ಟು 11 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ದಾಳಿ ಮಾಡಿದ ನಾಯಿಯು ಹುಚ್ಚು ನಾಯಿ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಎಲ್ಲರಿಗೂ ತಕ್ಷಣವೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ … Read more

ತೀರ್ಥಹಳ್ಳಿ ವ್ಯಕ್ತಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಕಾರಣವೇನು?

Shivamogga-Court-Balaraja-Urs-Road

ತೀರ್ಥಹಳ್ಳಿ: ಸುರಳ್ಳಿ ಬಾಳೆಬೈಲ್ ನಿವಾಸಿ ಮಹಮ್ಮದ್ ಮುತಿಬ್ (32) ಎಂಬುವವರು ತಮಗೆ ಮೊದಲೇ ಮದುವೆಯಾಗಿ (Marriage) ಮಗಳಿದ್ದರೂ, ಆ ವಿಷಯವನ್ನು ಮುಚ್ಚಿಟ್ಟು ಸುಳ್ಳು ದಾಖಲೆಗಳನ್ನು ನೀಡಿ ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎರಡನೇ ಮದುವೆಯಾಗಿದ್ದರು. ಈ ಸಂಬಂಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ – ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಅಪಘಾತ, ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಪ್ರಕರಣದ ತನಿಖೆ ನಡೆಸಿದ್ದ ಆಗಿನ ಪಿ.ಎಸ್.ಐ ಶಾಂತಲಾ ಅವರು ನ್ಯಾಯಾಲಯಕ್ಕೆ … Read more

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಲ್ಲಿ ಇವತ್ತು ಎಷ್ಟಿದೆ ನೀರು?

Tunga-Dam-Gajanuru.

ಜಲಾಶಯ ಮಾಹಿತಿ: ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌ (Dam Level) ಲಿಂಗನಮಕ್ಕಿ ಜಲಾಶಯ ಲಿಂಗನಮಕ್ಕಿ ಡ್ಯಾಮ್‌ನಲ್ಲಿ ಗರಿಷ್ಠ ಸಂಗ್ರಹ ಮಟ್ಟ 1819 ಅಡಿ. ಇವತ್ತಿನ ನೀರಿನ ಮಟ್ಟ 1798.40 ಅಡಿ. ಜಲಾಶಯದಲ್ಲಿ ಸದ್ಯ 92.02 ಟಿಎಂಸಿ ನೀರಿನ ಸಂಗ್ರಹವಿದೆ. ಒಟ್ಟು 7046 ಕ್ಯೂಸೆಕ್‌ ಹೊರ ಹರಿವು ಇದೆ. ಈ ಪೈಕಿ ಪೆನ್‌ಸ್ಟಾಕ್‌ ಮೂಲಕ 4090.60 ಕ್ಯೂಸೆಕ್‌, ಸ್ಲೂಯೆಸ್‌ ಮೂಲಕ 2958 ಕ್ಯೂಸೆಕ್‌ ಹೊರ ಹರಿವು ಇದೆ. ತುಂಗಾ ಜಲಾಶಯ … Read more

BREAKING NEWS – ವಿದ್ಯಾನಗರದ ಗೋಡೌನ್‌ ಮೇಲೆ ದಾಳಿ, ಪರಿಶೀಲನೆ ವೇಳೆ ದಂಗಾದ ಅಧಿಕಾರಿಗಳು

adc-AND-AC-RAID-ON-FOOD-GOWDOWN-AT-VIDYANAGARA-IN-SHIMOGA-CITY.

ಶಿವಮೊಗ್ಗ: ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ (food godown) ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಅವಧಿ ಮೀರಿದ ಭಾರಿ ಪ್ರಮಾಣದ ತಿಂಡಿ ತಿನಿಸು ಪತ್ತೆಯಾಗಿವೆ. ಇದನ್ನೂ ಓದಿ – ಶಿವಮೊಗ್ಗದ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷ ಲಕ್ಷ ಜನ, ಮೈಸೂರು ಸಿಲ್ಕ್‌ ಸೀರೆ ದಾಖಲೆ ಮಾರಾಟ ಅಪರ ಜಿಲ್ಲಾಧಿಕಾರಿ ಅಭಿಷೇಕ್, ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಶಿವಮೊಗ್ಗದಲ್ಲಿ ಮಾರಾಟ ಮಾಡಲು ಬೆಂಗಳೂರಿನಿಂದ … Read more

ಶಿವಮೊಗ್ಗದಲ್ಲಿ ಆಕರ್ಷಕ ಪಥಸಂಚಲನ, ಹೇಗಿತ್ತು? ಯಾವೆಲ್ಲ ತುಕಡಿ ಪಾಲ್ಗೊಂಡಿದ್ದವು?

Republic-Day-parade-in-Shivamogga-Nehru-Stadium

ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಇಂದು ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ವಿವಿಧ ಪೊಲೀಸ್, ಶಾಲಾ-ಕಾಲೇಜು ಹಾಗೂ ವಿವಿಧ ಸ್ಕ್ವಾಡ್‌ಗಳ ಒಟ್ಟು 26 ತುಕಡಿಗಳು ಪಾಲ್ಗೊಂಡಿದ್ದವು (Shivamogga parade). ಪ್ರೊಬೆಷನರಿ ಐಪಿಎಸ್‌ ಐಧಿಕಾರಿ ಮೇಘಾ ಅಗರ್‌ವಾಲ್‌ ಪಥಸಂಚಲನದ ಮುಖ್ಯ ದಂಡನಾಯಕರಾಗಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಥಸಂಚಲನ ಮುನ್ನಡೆಸಿದ ಮಹಿಳಾ ಐಪಿಎಸ್‌ ಅಧಿಕಾರಿ, ಗಮನ ಸೆಳೆದ ಕನ್ನಡದ ಕಮಾಂಡ್‌ ಯಾವೆಲ್ಲ ತುಕಡಿಗಳಿದ್ದವು? ಆರ್.ಎಸ್.ಐ. ಹನುಮರೆಡ್ಡಿ ನೇತೃತ್ವದಲ್ಲಿ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ. 08 ನೇ ಪಡೆ, ಆರ್.ಎಸ್.ಐ. ರಾಘವೇಂದ್ರ ಎಸ್. ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ … Read more