SHIMOGA | ಕಲ್ಲಗಂಗೂರು ಸ್ಪೋಟ ಕೇಸ್, ಸ್ಪೋಟಕ ಪೂರೈಕೆ ಮಾಡಿದ್ದ ಅಪ್ಪ, ಮಗ ಮುಂಬೈನಲ್ಲಿ ಅರೆಸ್ಟ್

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021 ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಸಂಬಂಧ ಸ್ಪೋಟಕ ಪೂರೈಕೆ ಮಾಡಿದ್ದ ಆಂಧ್ರ ಪ್ರದೇಶದ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಆಂಧ್ರ ಪ್ರದೇಶದ ಅನಂತಪುರದ ಪಿ.ಶ್ರೀರಾಮುಲು (68), ಆತನ ಪುತ್ರ ಪಿ.ಮಂಜುನಾಥ ಸಾಯಿ (36), ಕಲ್ಲಗಂಗೂರಿನ ಕ್ರಷರ್ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ (76), ಆತನ ಪುತ್ರ ಅವಿನಾಶ್ ಕುಲಕರ್ಣಿ (43) ಬಂಧಿತರು. ಮುಂಬೈನಲ್ಲಿ ಸಿಕ್ಕಿಬಿದ್ದ … Read more

SHIKARIPURA | ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ, ಬೆಲ್ಲದ ಕೊಳೆ ವಶಕ್ಕೆ

040221 Kallabatti Seized at Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 04 FEBRUARY 2021 ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 315 ಲೀಟರ್‍ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರದ ಚಿಕ್ಕಮಾಗಡಿ ತಾಂಡ ಸಮೀಪದ ಜವಳಕಟ್ಟೆ ಕೆರೆ ಮತ್ತು ಕರೇಕಟ್ಟೆ ಕೆರೆಯ ದಡದಲ್ಲಿ ಕಳ್ಳಭಟ್ಟಿ ತಯಾರಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ  ಅಬಕಾರಿ ಇಲಾಖೆ ಅಧಿಕಾರಿಗಳು ಎರಡು ಕಡೆ ದಾಳಿ ನಡೆಸಿದ್ದರು. ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, … Read more

SHIMOGA CRIME | ಮಹಿಳೆಯರೆ ಎಚ್ಚರ, ಕೊರಳಲ್ಲಿರುವ ಸರ, ಮಾಂಗಲ್ಯ ಭದ್ರ, ನಗರಕ್ಕೆ ಮತ್ತೆ ಬಂತಾ ಪಲ್ಸರ್ ಗ್ಯಾಂಗ್?

041019 Chain Snatchers In Shimoga 1

(FILE PHOTO) ಶಿವಮೊಗ್ಗ ಲೈವ್.ಕಾಂ | SHIMOGA NEWS | 04 FEBRUARY 2021 ಶಿವಮೊಗ್ಗದಲ್ಲಿ ಮತ್ತೆ ಪಲ್ಸರ್ ಗ್ಯಾಂಗ್ ಭೀತಿ ಶುರುವಾಗಿದೆ. ಮಹಿಳೆಯರ ಕೊರಳಿಗೆ ಕೈ ಹಾಕಿ ಚಿನ್ನದ ಸರ, ಮಾಂಗಲ್ಯ ಕದ್ದೊಯ್ಯುವ ಗ್ಯಾಂಗ್ ಪುನಃ ರಸ್ತೆಗಿಳಿದ ಶಂಕೆ ಇದೆ. ಸಾಲು ಸಾಲು ಸರಗಳ್ಳತನ ಸ್ಥಳ : ವಿದ್ಯಾನಗರ | ದಿನಾಂಕ ಫೆಬ್ರವರಿ 2 | ಸಮಯ ಸಂಜೆ 7ಕ್ಕೆ ಸಿಗರೇಟ್ ಕೇಳಿಕೊಂಡು ವ್ಯಕ್ತಿಯೊಬ್ಬ ಅಂಗಡಿಗೆ ಬಂದಿದ್ದ. ಅಂಗಡಿಯಲ್ಲಿದ್ದ ಮಹಿಳೆಯ ಕೊರಳಲ್ಲಿದ್ದ 1.50 ಲಕ್ಷ ಮೌಲ್ಯದ … Read more

SHIMOGA CRIME | ಡಾನ್ಸ್ ಮಾಸ್ಟರ್ ಜೀವನ್ ಹತ್ಯೆ ಕೇಸ್, ಮತ್ತೆ ಮೂವರು ಅರೆಸ್ಟ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 FEBRUARY 2021 ಡಾನ್ಸ್ ಮಾಸ್ಟರ್ ಜೀವನ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಈ ಕೇಸ್‍ನಲ್ಲಿ ಈತನಕ ಏಳು ಮಂದಿಯ ಬಂಧನವಾಗಿದೆ. ಈ ಸುದ್ದಿಯನ್ನೂ ಓದಿ | ಯುವಕನ ಬರ್ಬರ ಹತ್ಯೆ, ಮತ್ತೊಬ್ಬನಿಗೆ ಗಂಭೀರ ಗಾಯ, ತಡರಾತ್ರಿ ಕೃತ್ಯ ಆರ್‍ಎಂಎಲ್‍ ನಗರದ ಮುಜೀಬ್ ಉರ್ ರೆಹಮಾನ್, ಸಗೀರ್ ಮತ್ತು ಮಾರ್ನಮಿ ಬೈಲಿನ ಫರಾಜ್ ಎಂಬುವವರನ್ನು ಬಂಧಿಸಲಾಗಿದೆ. ಈ ಸುದ್ದಿಯನ್ನೂ ಓದಿ | ಬಾರ್‌ನಲ್ಲಿ ಕಿರಿಕ್ ಕೇಸ್, … Read more

SHIMOGA | ರೌಡಿ ಪರೇಡ್, 170ಕ್ಕೂ ಹೆಚ್ಚು ರೌಡಿಗಳಿಗೆ ಖಡಕ್ ವಾರ್ನಿಂಗ್, ಏನೆಲ್ಲ ಸೂಚನೆ ಕೊಟ್ರು ಎಸ್ಪಿ?

040221 Rowdy Parade In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 FEBRUARY 2021 ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಖಡಕ್ ವರ್ನಿಂಗ್ ನೀಡಲು ಶಿವಮೊಗ್ಗ ಪೊಲೀಸರು ರೌಡಿ ಪರೇಡ್ ನಡೆಸಿದರು. 170ಕ್ಕೂ ಹೆಚ್ಚು ರೌಡಿಗಳು ಪರೇಡ್‍ನಲ್ಲಿದ್ದರು. ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ ಖಡಕ್ ವಾರ್ನಿಂಗ್ ಕೊಟ್ಟ ಎಸ್‍ಪಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ರೌಡಿಗಳ ಕೇಸ್‍ಗಳ ಮಾಹಿತಿ ಪಡೆದು, ಚಟುವಟಿಕೆ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.  ಯಾವುದೆ ರೀತಿಯ ರೌಡಿ … Read more

SORABA | ವಿದ್ಯುತ್ ಶರ್ಟ್ ಸರ್ಕಿಟ್, ಭತ್ತದ ಬಣವೆ, ಹುಲ್ಲು, ಕಬ್ಬಿನ ಹೊಲ ಭಸ್ಮ

ಶಿವಮೊಗ್ಗ ಲೈವ್.ಕಾಂ | SORABA NEWS | 04 FEBRUARY 2021 ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಭತ್ತದ ಬಣವೆ, ಹುಲ್ಲು, ಕಬ್ಬಿನ ಹೊಲ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿವೆ. ಸೊರಬ ತಾಲೂಕು ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಗಳಲೆ ಮತ್ತು ಮಂಡ್ಲಿಕೊಪ್ಪ ಗ್ರಾಮದಲ್ಲಿ  ಘಟನೆ ಸಂಭವಿಸಿದೆ. ವಿದ್ಯುತ್ ಶರ್ಟ್ ಸರ್ಕಿಟ್ ಸಂಭವಿಸಿ, ಕುಂಟಗಳಲೆ ತಿಮ್ಮಪ್ಪ ಅವರ 40 ಕ್ವಿಂಟಾಲ್ ಭತ್ತದ ಬಣವೆ, ಮಂಡ್ಲಿಕೊಪ್ಪದ ಭದ್ರಪ್ಪ ಅವರ ಅರ್ಧ ಎಕರೆ ಕಬ್ಬಿನ ಹೊಲ ಮತ್ತು … Read more

BHADRAVATHI | ದೊಡ್ಡೇರಿ ಬಳಿ ಭೀಕರ ಅಪಘಾತ, ಹೊಸಮನೆಯ ಯುವಕ ಸೇರಿ ಇಬ್ಬರ ಸಾವು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 03 FEBRUARY 2021 ಟ್ರಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಭದ್ರಾವತಿಯ ಹೊಸಮನೆ ನಿವಾಸಿ ರಘು (32) ಮತ್ತು ತರೀಕೆರೆಯ ಇಟಿಗಿ ಗ್ರಾಮದ ಶಿವು (30) ಮೃತರು. ಭದ್ರಾವತಿಯಿಂದ ಶಿವನಿ ಗ್ರಾಮಕ್ಕೆ ತೆರಳುತ್ತಿದ್ದ ಟ್ರಾಕ್ಟರ್ ಮತ್ತು ದೊಡ್ಡೇರಿ ಗ್ರಾಮದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್‍ನಲ್ಲಿದ್ದ ರಘು ಮತ್ತು ಶಿವು ಮೃತಪಟ್ಟಿದ್ದಾರೆ. … Read more

SAGARA | ಕ್ರಿಮಿನಾಶಕ ಸೇವಿಸಿ ಮರೂರು ಗ್ರಾಮದ ರೈತ ಆತ್ಮಹತ್ಯೆ

farmer suicide poison

ಶಿವಮೊಗ್ಗ ಲೈವ್.ಕಾಂ | SAGARA NEWS | 02 FEBRUARY 2021 ಸಾಲ ಹಿಂತಿರುಗಿಸಲಾಗಿದೆ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಸಾಗರ ತಾಲೂಕು ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ರೈತ ಎಂ.ಆರ್.ಉಮೇಶ್ ಗೌಡ (60) ಆತ್ಮಹತ್ಯೆ ಮಾಡಿಕೊಂಡವರು. ಉಮೇಶ್ ಗೌಡ ಅವರು ಬಹುಹೊತ್ತು ಮನೆಯಲ್ಲಿ ಕಾಣಿಸದ ಹಿನ್ನೆಲೆ, ಮನೆಯವರು ಎಲ್ಲೆಡೆ ಹುಡುಕಾಡಿದ್ದಾರೆ. ಮನೆ ಹಿಂಭಾಗ ಖಾಲಿ ಜಾಗದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದು ಕಂಡು … Read more

THIRTHAHALLI | ಕೋಳಿ ಅಂಕದ ಮೇಲೆ ಪೊಲೀಸರ ದಾಳಿ, ವಶಕ್ಕೆ ಪಡೆದ ಬೈಕ್‌ಗಳನ್ನು ಠಾಣೆಗೆ ತರುತ್ತಿದ್ದಾಗ ಬೆಂಕಿ

010221 Bike Caught Fire at Konandur 1

ಶಿವಮೊಗ್ಗ ಲೈವ್.ಕಾಂ | THIRTHAHALLI CRIME NEWS | 01 FEBRUARY 2021 ಕೋಳಿ ಅಂಕ (ಕೋಳಿ ಜೂಜು) ನಡೆಯುತ್ತಿದ್ದ ಸ್ಥಳದ ಮೇಲೆ ತೀರ್ಥಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕದಲ್ಲಿ ಪಾಲ್ಗೊಂಡಿದ್ದವರ ಬೈಕುಗಳನ್ನು ವಶಕ್ಕೆ ಪಡೆದು, ಠಾಣೆಗೆ ತರುತ್ತಿದ್ದಾಗ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ನಾಲ್ಕು ಬೈಕುಗಳು ಸುಟ್ಟು ಕರಕಲಾಗಿದೆ. ಏನಿದು ಕೋಳಿ ಅಂಕ? ಎಲ್ಲಿ ನಡೀತಿತ್ತು? ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಅರಳಸುರಳಿ ವ್ಯಾಪ್ತಿಯ ಅರಣ್ಯದಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಕೋಳಿಯ ಕಾಲಿಗೆ ಚಾಕು ಕಟ್ಟಿ, … Read more

SHIMOGA CRIME | ಸಾಲ ಹಿಂತಿರುಗಿಸೋದಾಗಿ ನಂಬಿಸಿ ಸಾಲ ಕೊಟ್ಟವರ ಅಕೌಂಟ್‌ನಿಂದಲೇ ಹತ್ತು ಸಾವಿರ ಲಪಟಾಯಿಸಿದ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 01 FEBRUARY 2021 ಸಾಲದ ಹಣ ಹಿಂತಿರುಗಿಸುವುದಾಗಿ ನಂಬಸಿ ಸಾಲ ಕೊಟ್ಟವರ ಖಾತೆಯಿಂದಲೇ ಹತ್ತು ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು  ವಂಚನೆ? ಬೆಂಗಳೂರಿನ ಮುರ್ತುಜಾ ಅಲಿಸ್ ಎಂಬುವವರು ಶಿವಮೊಗ್ಗದ ಫಿರೋಜ್ ಖಾನ್ ಎಂಬುವವರಿಂದ 80 ಸಾವಿರ ರೂ. ಸಾಲ ಪಡೆದಿದ್ದರು. ಹಣ ಹಿಂತಿರುಗಿಸುವಂತೆ ಫಿರೋಜ್ ಖಾನ್ ಅವರು ತಿಳಿಸಿದ್ದರು. ಹಣ ಹಿಂತಿರುಗಿಸುವುದಾಗಿ ನಂಬಿಸಿ ಫಿರೋಜ್ … Read more