ಲಕ್ಷ ಲಕ್ಷ ಮೌಲ್ಯದ ಮಾಂಗಲ್ಯ ಸರ ಖರೀದಿಸಿ ಮನೆಗೆ ಹೋಗಿ ನೋಡಿದಾಗ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

ಶಿವಮೊಗ್ಗ : ಬಂಗಾರದ ಸರ (Gold Chain) ಖರೀದಿಸಿ ಸಿಟಿ ಬಸ್‌ನಲ್ಲಿ ಮನೆಗೆ ಮರಳುವ ಹೊತ್ತಿಗೆ ಕಳ್ಳತನವಾಗಿದೆ. ಮಹಿಳೆಯ ಬ್ಯಾಗಿನಿಂದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಖರೀದಿಸಿದ ಕೆಲವೇ ಹೊತ್ತಿಗೆ ಕಳವು ನಾಗರತ್ನಮ್ಮ ಎಂಬುವವರು ಗೋಪಿ ಸರ್ಕಲ್‌ ಸಮೀಪ ಆಭರಣ ಜ್ಯೂವೆಲರ್ಸ್‌ ಅಂಗಡಿಯಿಂದ 1.93 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಖರೀದಿಸಿದ್ದರು. ಅದಕ್ಕೆ 7 ಗ್ರಾಂ ತೂಕದ ತಾಳಿ, ಲಕ್ಷ್ಮಿ ಕಾಸು, ಗುಂಡುಗಳನ್ನು ಜ್ಯೂವೆಲರಿ ಅಂಗಡಿಯಲ್ಲೇ ಜೋಡಿಸಿಕೊಂಡಿದ್ದರು. ಒಟ್ಟು 2.50 ಲಕ್ಷ … Read more

ಸಹ್ಯಾದ್ರಿ ಕಾಲೇಜಿನಲ್ಲಿ ಬೆಳಗ್ಗೆ ಲ್ಯಾಬ್ ಬಾಗಿಲು ತೆರೆಯಲು ಬಂದ ಸಿಬ್ಬಂದಿಗೆ ಕಾದಿತ್ತು ಶಾಕ್‌, ಆಗಿದ್ದೇನು?

sahyadri-college-general-image

ಶಿವಮೊಗ್ಗ : ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಲ್ಯಾಬ್‌ನ (Lab) ಬಾಗಿಲಿನ ಬೀಗ ಒಡೆದು ಸಂಶೋಧನೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ » ವಿಧಾನಸೌಧದಲ್ಲಿ ಕುವೆಂಪು ವಿ.ವಿ ಕುರಿತು ಚರ್ಚೆ, ಡಾ. ಸರ್ಜಿ ಏನೆಲ್ಲ ವಿಷಯ ಪ್ರಸ್ತಾಪಿಸಿದರು? ಮಾ.12ರಂದು ಬೆಳಗ್ಗೆ ಸಿಬ್ಬಂದಿ ಲ್ಯಾಬ್‌ ಬಾಗಿಲು ತೆರೆಯಲು ಬಂದಾಗಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಮತ್ತು ಎಸ್ಟೇಟ್‌ ಆಫೀಸರ್‌ಗೆ … Read more

ವಿಧಾನಸೌಧದಲ್ಲಿ ಕೆಲಸ ಕೊಡಿಸ್ತೀನಿ ಅಂದ, ಲಕ್ಷ ಲಕ್ಷ ಹಣ ಪಡೆದವನ ಹಿನ್ನೆಲೆ ಪರಿಶೀಲಿಸಿದಾಗ ಕಾದಿತ್ತು ಆಘಾತ

Crime-News-General-Image

ಶಿವಮೊಗ್ಗ : ವಿಧಾನಸೌಧದಲ್ಲಿ ಕೆಲಸ (Job Scam) ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಸರ್ಕಾರಿ ಶಾಲೆಯ ಸಹ ಶಿಕ್ಷಕನೊಬ್ಬನ ವಿರುದ್ಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಯುವಕನೊಬ್ಬನಿಗೆ ವೆಂಕಟೇಶ ಮೂರ್ತಿ ಎಂಬಾತನ ಪರಿಚಯವಾಗಿತ್ತು. ಆತ ತಾನು ಬಿಬಿಎಂಪಿಯಲ್ಲಿ ಗುತ್ತಿಗೆದಾರ ಎಂದು ಪರಿಚಯಿಸಿಕೊಂಡಿದ್ದ. ಸ್ವಲ್ಪ ಸಮಯದ ಬಳಿಕ ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ (Job Scam) ವೆಂಕಟೇಶ ಮೂರ್ತಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೆ ಶಿವಮೊಗ್ಗದ ಯುವಕನಿಂದ … Read more

ಹೊಳೆಹೊನ್ನೂರಿನಲ್ಲಿ ಕಾರಿನ ಟೈರ್‌ ಸ್ಫೋಟ, ಅಪಘಾತದಲ್ಲಿ ಬೈಕ್‌ ಸವಾರ ಸಾವು

Car-tyre-blast-incident-at-holehonnuru

ಹೊಳೆಹೊನ್ನೂರು : ಕಾರ್‌ವೊಂದರ ಟೈರ್‌ (Tyre) ಸ್ಫೋಟಗೊಂಡ ಪರಿಣಾಮ ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸವಾರರೊಬ್ಬರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಪಟ್ಟಣದ ಚನ್ನಗಿರಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಹರಮಘಟ್ಟದ ನಿವಾಸಿ ಮಲ್ಲಿಕಾರ್ಜುನ (40) ಮೃತರು. ಕಾರ್‌ವೊಂದರ ಟೈರ್‌ ಸ್ಫೋಟಗೊಂಡು ಅದು ಇನ್ನೊಂದು ಕಾರ್‌ಗೆ ಡಿಕ್ಕಿ ಹೊಡೆದಿದೆ. ಆ ಕಾರ್‌ ಬೈಕ್‌ಗೆ ಹೊಡೆದಿತ್ತು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದಾಗಿ ಒಂದು ಗಂಟೆಗೂ ಹೆಚ್ಚಿನ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಧಗಧಗ … Read more

ಶಿವಮೊಗ್ಗ ಜೈಲಿನಲ್ಲಿ ಆರೋಪಿ ಭೇಟಿಗೆ ಬಂದಿದ್ದವರು 6 ಪ್ಯಾಕೆಟ್‌ ಹುದುಗಿಸಿ ಎಸ್ಕೇಪ್‌, ಏನಿದು ಕೇಸ್‌?

Shimoga-Central-Jail-Building

ಶಿವಮೊಗ್ಗ : ಆರೋಪಿಯೊಬ್ಬನ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ಯುವಕರು ಆರು ಪೊಟ್ಟಣಗಳನ್ನು ಜೈಲು ಆವರಣದಲ್ಲಿ ಹುದುಗಿಸಿಟ್ಟಿದ್ದಾರೆ. ಅವರನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಬೈಕ್‌ ಅನ್ನು ಗೇಟಿಗೆ ಗುದ್ದಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯ ಭೇಟಿಗೆ ಬಂದಿದ್ದರು ಚಂದನ್‌ ಮತ್ತು ದರ್ಶನ್‌ ಎಂಬುವವರು ವಿಚಾರಣಾಧೀನ ಖೈದಿ ಚೇತನ್‌ ಎಂಬಾತನ ಭೇಟಿಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ (Jail) ಬಂದಿದ್ದರು. ಖೈದಿಯ ಭೇಟಿಯ ವೇಳೆ ಇವರು ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಗಮನಿಸಿದ ಕೆಎಸ್‌ಐಎಸ್‌ಎಫ್‌ ಭದ್ರತಾ ಸಿಬ್ಬಂದಿ ಇಬ್ಬರ ಮೇಲೆ … Read more

ರಾತ್ರಿ ವಾಕಿಂಗ್‌ ಮಾಡುತ್ತಿದ್ದ ಶಿಕ್ಷಕನ ಮೇಲೆ ನಾಲ್ವರು ಅಪರಿಚಿತರಿಂದ ದಾಳಿ, ಮುಂದೇನಾಯ್ತು?

Police-Van-Jeep-at-Shimoga-Nehru-Road

ಶಿವಮೊಗ್ಗ : ರಾತ್ರಿ ಊಟ ಮುಗಿಸಿ ಮನೆ ಸಮೀಪ ವಾಕಿಂಗ್‌ (Walking) ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಹೊಡೆದ ನಾಲ್ವರು ಯುವಕರು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಅರವಿಂದ ನಗರದಲ್ಲಿ ಘಟನೆ ಸಂಭವಿಸಿದೆ. ಶಿಕ್ಷಕ ವೀರೇಶ್‌ ಅವರು ರಾತ್ರಿ 10 ಗಂಟೆ ಹೊತ್ತಿಗೆ ಅರವಿಂದ ನಗರದಿಂದ ಸೂರ್ಯ ಲೇಔಟ್‌ ಕಡೆಗೆ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಎದುರಾದ ನಾಲ್ವರು ಅಪರಿಚಿತ ಯುವಕರು ವೀರೇಶ್‌ ಅವರ ಹಣೆಗೆ ಹೊಡೆದು, ಶರ್ಟ್‌ ಜೇಬಿನಲ್ಲಿದ್ದ ರೆಡ್‌ ಮಿ ಮೊಬೈಲ್‌ ಕಸಿದುಕೊಂಡಿದ್ದಾರೆ … Read more

ಹೊಟೇಲ್‌ನಲ್ಲಿ ಮುದ್ದೆ, ಮಟನ್‌ ತಿಂದು, ಮಾಲೀಕನ ಕುತ್ತಿಗೆಗೆ ಚಾಕು ಇರಿದ ಗ್ರಾಹಕ, ಆಗಿದ್ದೇನು?

crime name image

ಶಿವಮೊಗ್ಗ : ಊಟದ ಹಣ (Money) ಕೊಡುವಂತೆ ಕೇಳಿದ ಹೊಟೇಲ್‌ ಮಾಲೀಕನಿಗೆ ಗ್ರಾಹಕನೊಬ್ಬ ಚಾಕುವಿನಿಂದ ಇರುದಿದ್ದಾನೆ. ಹೊಟೇಲ್‌ ಮಾಲೀಕನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹೊಟೇಲ್‌ ಮಾಲೀಕ ಕೃಷ್ಣಪ್ಪ ಗಾಯಗೊಂಡಿದ್ದಾರೆ. ಶಿವಮೊಗ್ಗ – ಹೊನ್ನಾಳಿ ರಸ್ತೆಯ ದೀಪಕ್‌ ವೈನ್‌ ಸ್ಟೋರ್‌ ಪಕ್ಕದಲ್ಲಿರುವ ಖುಷಿ ಫಾಸ್ಟ್‌ ಫುಡ್‌ ಹೊಟೇಲ್‌ನಲ್ಲಿ ಘಟನೆ ಸಂಭವಿಸಿದೆ. ಕುತ್ತಿಗೆಗೆ ಚಾಕು ಇರಿದ ಗ್ರಾಹಕ ಕೃಷ್ಣಪ್ಪ ಅವರ ಫಾಸ್ಟ್‌ ಫುಡ್‌ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಮುದ್ದೆ ಮತ್ತು ತಲೆ ಮಟನ್‌ ಸೇವಿಸಿದ್ದ. ಬಿಲ್‌ (Money) … Read more

ಹಿನ್ನೀರಿಗೆ ಹಾರಿ ರೈತ ಆತ್ಮಹತ್ಯೆ, ಕಾರಣವೇನು?

Crime-News-General-Image

ತೀರ್ಥಹಳ್ಳಿ : ಯುವ ರೈತನೋರ್ವ (Farmer) ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಬಳಿ ಘಟನೆ ಸಂಭವಿಸಿದೆ. ಹಾಗಲಮನೆಯ ರೈತ ಕೌಶಿಕ್‌ (30) ಮೃತರು. ಕೌಶಿಕ್‌ ಅವಿವಾಹಿತರಾಗಿದ್ದು, ತಾಯಿಯೊಂದಿಗೆ ವಾಸವಾಗಿದ್ದರು. ಕೃಷಿಗಾಗಿ ವಿವಿಧೆಡೆ ಸಾಲ ಮಾಡಿದ್ದರು. ಇನ್ನೊಂದೆಡೆ ಅಡಿಕೆಗೆ ಎಲೆ ಚುಕ್ಕೆ ರೋಗ ಬಂದಿದ್ದರಿಂದ ಕಂಗೆಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಜೆಎನ್‌ಎನ್‌ ಕಾಲೇಜಿನಲ್ಲಿ ಸದೃಡ … Read more

ಬೆಳ್ಳಂಬೆಳಗ್ಗೆ ಶುರುವಾಗಲಿಲ್ಲ ಸಿಟಿ ಬಸ್‌, ಪರಿಶೀಲಿಸಿದ ಡ್ರೈವರ್‌ಗೆ ಕಾದಿತ್ತು ಶಾಕ್‌

crime name image

ಶಿವಮೊಗ್ಗ : ಸಿಟಿ ಬಸ್‌ (Bus) ಒಂದರ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. ವಿನೋಬನಗರದ 100 ಅಡಿ ರಸ್ತೆಯಲ್ಲಿ ಪೆಟ್ರೋಲ್‌ ಬಂಕ್‌ ಮುಂಭಾಗ ರಾತ್ರಿ ನಿಲ್ಲಿಸಿದ್ದ ಬಸ್ಸಿನಲ್ಲಿ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಶಶಿಕುಮಾರ್‌ ಸಿಟಿ ಬಸ್‌ (Bus) ನಿತ್ಯ ಹರಿಗೆ – ಕಾಶಿಪುರ ಮಧ್ಯೆ ಸಂಚರಿಸುತ್ತಿದೆ. ಚಾಲಕ ರಾತ್ರಿ ಬಸ್ಸನ್ನು ಪೆಟ್ರೋಲ್‌ ಬಂಕ್‌ ಮುಂಭಾಗ ನಿಲ್ಲಿಸಿದ್ದರು. ಬೆಳಗ್ಗೆ ಬಸ್‌ ಬಳಿ ಪುನಃ ಬಂದ ಚಾಲಕ ಶುರು ಮಾಡಿದಾಗ ಸ್ಟಾರ್ಟ್‌ ಆಗಲಿಲ್ಲ. ಪರಿಶೀಲಿಸಿದಾಗ ಎರಡು ಬ್ಯಾಟರಿಗಳು ನಾಪತ್ತೆಯಾಗಿದ್ದವು. 15 ಸಾವಿರ … Read more

ಶಿವಮೊಗ್ಗದಲ್ಲಿ ಮರಕ್ಕೆ ಡಿಕ್ಕಿಯಾಗಿ ಚರಂಡಿಗೆ ಬಿದ್ದ ಬೈಕ್‌, ಸವಾರ ಸಾವು

Bike-mishap-near-vajapayee-layout-in-Shimoga-city

ಶಿವಮೊಗ್ಗ : ಮರಕ್ಕೆ ಬೈಕ್‌ (Bike) ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನನ್ನು ರಾಜು (27) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ವಾಜಪೇಯಿ ಬಡಾವಣೆ ಬಳಿ ಬೈಕ್‌ (Bike) ಮರಕ್ಕೆ ಡಿಕ್ಕಿಯಾಗಿದೆ. ನಂತರ ಬೈಕ್‌ ಸಹಿತ ಸವಾರ ರಾಜು ಚರಂಡಿಗೆ ಬಿದಿದ್ದಾನೆ. ಗಂಭೀರ ಗಾಯಗೊಂಡು ಅಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಲಕ್ಷ ಲಕ್ಷ ಭಕ್ತರು ಭಾಗಿ, … Read more