ಬೇಲಿ ಹಾರಿ ಕಾರ್ಖಾನೆಗೆ ನುಗ್ಗಿ ಮಾಲೀಕನಿಗೆ ಮಚ್ಚು ತೋರಿಸಿ ಕಳವು

Crime-News-General-Image

BHADRAVATHI NEWS, 4 OCTOBER 2024 : ರಾತ್ರಿ ವೇಳೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದ್ದ ಮಾಲೀಕನಿಗೆ (owner) ಮಚ್ಚು ತೋರಿಸಿ, ಮೊಬೈಲ್‌ ಕಸಿದುಕೊಂಡು ಬೆದರಿಕೆ ಒಡ್ಡಲಾಗಿದೆ. ಅಲ್ಲದೆ ಕಾರ್ಖಾನೆಯಿಂದ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮಾಚೇನಹಳ್ಳಿಯ ಇಂಡಸ್ಟ್ರಿಯಲ್‌ ಏರಿಯಾದ ಸ್ವಯಂ ಅಲಾಯ್‌ ಕಾಸ್ಟಿಂಗ್‌ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ರವಿಶಂಕರ್‌ ಅವರು ಊಟ ಮುಗಿಸಿ ರಾತ್ರಿ ಕಾರ್ಖಾನೆ ಸ್ಥಳಕ್ಕೆ ಬಂದಿದ್ದರು. ಟಾರ್ಚ್‌ ಹಾಕಿ ಪರಿಶೀಲಿಸುತ್ತಿದ್ದಾಗ ಎಂಟು ಮಂದಿ ಬೇಲಿ ಹಾರಿ ಬಂದಿದ್ದರು. … Read more

ಶೆಡ್‌ ನಿರ್ಮಾಣದ ವೇಳೆ ಕರೆಂಟ್‌ ಶಾಕ್‌, ಯುವಕ ಕೊನೆಯುಸಿರು

anaveri-youht-succumbed-due-to-shock.

HOLEHONNURU NEWS, 3 OCTOBER 2024 : ತಗಡಿನ ಶೆಡ್‌ (Shed) ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಆನವೇರಿಯ ಹನುಮಂತಾಪುರದ ಲಲಿತಾಬಾಯಿ ಕೃಷ್ಣೋಜಿ ರಾವ್‌ ಅವರ ಮಗ ರಕ್ಷಿತ್ (22) ಮೃತ. ಆನವೇರಿಯ ಕೆ.ಕೆ ರಸ್ತೆಯಲ್ಲಿ ರಕ್ಷಿತ್, ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟ್ರಿ ಹೋಟೆಲ್ ಶೆಡ್ ನಿರ್ಮಿಸಿದ್ದಾನೆ. ಬುಧವಾರ ಶೆಡ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ … Read more

ಚೋರಡಿ ಬಳಿ ಬೈಕ್‌ಗೆ ಓಮ್ನಿ ಡಿ*ಕ್ಕಿ | ಉಂಬ್ಳೆಬೈಲಿನಲ್ಲಿ ಬೈಕುಗಳು ಮುಖಾಮುಖಿ ಡಿ*ಕ್ಕಿ – 3 ಫಟಾಫಟ್‌ ಸುದ್ದಿ

Crime-News-General-Image

SHIMOGA FATAFAT NEWS, 3 OCTOBER 2024 ಇದನ್ನೂ ಓದಿ » ಹಾಲು ಉತ್ಪಾದಕರಿಗೆ ಶಾಕ್‌ ನೀಡಿದ ಶಿಮುಲ್‌, ಖರೀದಿ ದರ ಕಡಿತ

ಬಾಗಿಲು ತೆಗೆದು ಅಂಗಡಿಯೊಳಗೆ ಕಾಲಿಟ್ಟ ಮಾಲೀಕನಿಗೆ ಕಾದಿತ್ತು ಶಾಕ್

Police-Van-Jeep-at-Shimoga-Nehru-Road

SHIMOGA NEWS, 3 OCTOBER 2024 : ಬಟ್ಟೆ ಅಂಗಡಿಯೊಂದರ (Shop) ಮೇಲಿನ ಅಂತಸ್ಥಿನ ಷಟರ್‌ ಬಾಗಿಲಿನ ಬೀಗ ಮುರಿದು ನಗದು ಮತ್ತು ಸಿಸಿಟಿವಿ ಡಿವಿಆರ್‌ನ ಹಾರ್ಡ್‌ ಡಿಸ್ಕ್‌ ಕಳವು ಮಾಡಲಾಗಿದೆ. ಶಿವಮೊಗ್ಗ ನೆಹರು ರಸ್ತೆಯ ಸುಭಾಷಿತ ಫ್ಯಾಷನ್‌ ರೆಡಿಮೇಡ್‌ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಬೆಳಗ್ಗೆ ಅಂಗಡಿಯ ಬಾಗಿಲು ತೆಗೆದು ಒಳ ಹೋದಾಗ ಕ್ಯಾಶ್‌ ಡ್ರಾ ತೆರೆದಿರುವುದನ್ನು ಗಮನಿಸಿದ ಅಂಗಡಿ ಮಾಲೀಕರು ಗಾಬರಿಯಾಗಿದ್ದಾರೆ. ಪರಿಶೀಲಿಸಿದಾಗ ಮೊದಲ ಅಂತಸ್ಥಿನ ಷಟರ್‌ ಬೀಗ ಮುರಿದಿರುವುದು ಗೊತ್ತಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ … Read more

ಶಿವಮೊಗ್ಗದಲ್ಲಿ ಬೆಳಗ್ಗೆ ವರ್ಕ್‌ಶಾಪ್‌ ಬಳಿ ಬಂದ ಮಾಲೀಕನಿಗೆ ಕಾದಿತ್ತು ಶಾಕ್

crime name image

SHIMOGA NEWS, 2 OCTOBER 2024 : ವರ್ಕ್‌ಶಾಪ್‌ನ (Work Shop) ಬಾಗಿಲಿನ ಬೀಗ ಮುರಿದು ಒಳಗಿದ್ದ ಕಾರು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬೈಪಾಸ್‌ ರಸ್ತೆಯಲ್ಲಿರುವ ವರ್ಕ್‌ಶಾಪ್‌ನಲ್ಲಿ ಘಟನೆಯಾಗಿದೆ. ಸಯ್ಯದ್‌ ಜಮಾಲ್‌ ಇಮ್ತಿಯಾಜ್‌ ಎಂಬುವವರಿಗೆ ಸೇರಿದ ವೋಕ್ಸ್‌ವ್ಯಾಗನ್‌ ಕಾರು ಕಳುವಾಗಿದೆ. ರಿಪೇರಿ ಇದ್ದಿದ್ದರಿಂದ ತಮ್ಮ ಸಂಬಂಧಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ಕಾರು ಬಿಟ್ಟಿದ್ದರು. ವರ್ಕ್‌ಶಾಪ್‌ನವರು ಕಾರನ್ನು ಒಳಗೆ ನಿಲ್ಲಿಸಿ ರಾತ್ರಿ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ಬಂದಾಗ ವರ್ಕ್‌ಶಾಪ್‌ನ ಬಾಗಿಲಿನ ಬೀಗ ಮುರಿದು ಕಾರನ್ನು ಕಳವು ಮಾಡಲಾಗಿತ್ತು. … Read more

ಶಿವಮೊಗ್ಗದಲ್ಲಿ ಎಟಿಎಂ ಮೆಷಿನ್‌ನಿಂದ ಹಣ ಕಳವು, ಹೇಗಾಯ್ತು ಕೃತ್ಯ?

Crime-News-General-Image

SHIMOGA NEWS, 2 OCTOBER 2024 : ATM ಕೇಂದ್ರದಲ್ಲಿ ಕ್ಯಾಶ್‌ ರಿಜೆಕ್ಟ್‌ ಆಗಿದ್ದ 5 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಮಲವಗೊಪ್ಪ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಹಣ ಭರ್ತಿ ಮಾಡಲು ಏಜೆನ್ಸಿಯವರು ಎಟಿಎಂಗೆ ತೆರಳಿದ್ದಾಗ ಎರರ್‌ ಎಂದು ತೋರಿಸುತ್ತಿತ್ತು. ಹಾಗಾಗಿ ಬ್ಯಾಂಕ್‌ ಮ್ಯಾನೇಜರ್‌ಗೆ ವಿಷಯ ತಿಳಿಸಿದ್ದರು. ಪರಿಶೀಲಿಸಿದಾಗ ಎಟಿಎಂನಲ್ಲಿ ಕ್ಯಾಶ್‌ ರಿಜೆಕ್ಟ್‌ ಆಗಿದ್ದ ಹಣ ಕಾಣೆಯಾಗಿತ್ತು. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಬ್ಯಾಟರಿ ಲೈಟ್‌ ಬಿಟ್ಟ ವಿಚಾರ, ಕೈ ಕೈ ಮಿಲಾಯಿಸಿದ ಕುಟುಂಬಗಳು

Hosanagara-Police-Station-Board

HOSANAGARA NEWS, 2 OCTOBER 2024 : ಬ್ಯಾಟರಿ ಲೈಟ್‌ನ (Light) ಕಾರಣಕ್ಕಾಗಿ ನೆರೆಹೊರೆ ಮನೆಯವರು ಕೈ ಕೈ ಮಿಲಾಯಿಸಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ. ಏನಿದು ಪ್ರಕರಣ? ಹೊಸನಗರ ತಾಲೂಕು ಹೆಗ್ಗರಸು ಗ್ರಾಮದಲ್ಲಿ ಸ್ವಾಮಿ ರಾವ್‌ ಎಂಬುವವರು ಬ್ಯಾಟರಿ ಲೈಟ್‌ ಬಿಟ್ಟ ವಿಚಾರ ನೆರೆ ಮನೆಯವರು ಬಡಿದಾಡಿಕೊಂಡಿದ್ದಾರೆ. ಸೆ.27ರಂದು ರಾತ್ರಿ ಘಟನೆ ಸಂಭವಿಸಿದೆ. ಸ್ಯಾಮಿ ರಾವ್‌ ಅವರ ಕುಟುಂಬ ಮತ್ತು ಪಕ್ಕದ ಸಾಗರ್‌ ಎಂಬುವವರ ಕುಟುಂಬದವರು ಕೈ ಕೈ ಮಿಲಾಯಿಸಿದ್ದಾರೆ. ಸ್ವಾಮಿರಾವ್‌ ಕುಟುಂಬದ ಆರೋಪವೇನು? … Read more

ರಸ್ತೆಯಲ್ಲಿ ಹಾವು, ಬೈಕ್‌ನಿಂದ ಕೆಳಗಿಳಿದಾಗ ಜಜ್ಜಿಹೋಯ್ತು ಕಾಲು

ACCIDENT-NEWS-GENERAL-IMAGE.

SORABA NEWS, 2 OCTOBER 2024 : ರಸ್ತೆಯಲ್ಲಿ ಹಾವು (Snake) ಅಡ್ಡ ಬಂತು ಅಂತಾ ಬೈಕ್‌ ನಿಲ್ಲಿಸಿಕೊಂಡು ಪಕ್ಕದಲ್ಲಿ ನಿಂತಿದ್ದ ಶಿಕ್ಷಕರೊಬ್ಬರಿಗೆ ಮತ್ತೊಂದು ಬೈಕ್‌ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ. ಸೊರಬ ತಾಲೂಕಿನ ಸೊರಬ – ಜಂಗಿನಕೊಪ್ಪ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕೆಲಸ ಮುಗಿಸಿ ಶಿಕ್ಷಕ ನಟರಾಜ್‌ ಕುಬಟೂರು ಅವರು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ರಸ್ತೆಯಲ್ಲಿ ಹಾವು ಬಂದಿದ್ದರಿಂದ ಬೈಕ್‌ ನಿಲ್ಲಿಸಿ, ಹಿಂಬದಿಗೆ ಬಂದು ನಿಂತಿದ್ದರು. ಈ ವೇಳೆ ಸೊರಬ ಕಡೆಯಿಂದ ವೇಗವಾಗಿ ಬಂದ ಸ್ಪ್ಲೆಂಡರ್‌ ಬೈಕ್‌, … Read more

ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಿಡ್ನಾಪ್‌ಗೆ ಯತ್ನ

Police-Van-Jeep-at-Shimoga-Nehru-Road

BHADRAVATHI NEWS, 28 SEPTEMBER 2024 : ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಅಪಹರಣಕ್ಕೆ (Abduct) ವಿಫಲ ಯತ್ನವಾಗಿದೆ. ಭದ್ರಾವತಿ ಪಟ್ಟಣದ ಎಪಿಎಂಸಿ ಮಾರ್ಕೆಟ್‌ ಸಮೀಪ ಘಟನೆ ಸಂಭವಿಸಿದೆ. ಹತ್ತು ವರ್ಷದ ವಿದ್ಯಾರ್ಥಿನಿ (ಹೆಸರು ಗೌಪ್ಯ) ಶಾಲೆ ಮುಗಿಸಿ ಆಟೋದಲ್ಲಿ ಸಂಜೆ ಮನೆಗೆ ಮರಳಿದ್ದಳು. ಆಟೋ ಇಳಿದು ಮನೆಯತ್ತ ತೆರಳುತ್ತಿದ್ದಂತೆ ಬೈಕ್‌ನಲ್ಲಿ ಬಂದ ಅಪರಿಚಿತ, ನಿಮ್ಮ ಅಪ್ಪ ಸರ್ಕಲ್‌ಗೆ ಬಿಡಲು ತಿಳಿಸಿದ್ದಾರೆ ಎಂದು ಕರೆದೊಯ್ಯಲು ಯತ್ನಿಸಿದ್ದಾನೆ. ಬಾಲಕಿ ಬರಲು ಒಪ್ಪದಿದ್ದಾಗ ಚಾಕ್ಲೇಟ್‌ ಕೊಡಿಸುತ್ತೇನೆ ಎಂದು ಆಕೆಯ … Read more

ತಡರಾತ್ರಿ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿದ ಡಾಕ್ಟರ್‌ಗೆ ಕಾದಿತ್ತು ಆಘಾತ

bike theft reference image

SHIMOGA NEWS, 27 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಬಂದಿದ್ದ ವೈದ್ಯರೊಬ್ಬರ ಬೈಕ್‌ (Bike) ಕಳುವಾಗಿದೆ. ಶಿವಮೊಗ್ಗದ ಮೆಟ್ರೋ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಪಲ್ಸರ್‌ ಬೈಕ್‌ ಕಳುವಾಗಿವೆ. ಮೆಟ್ರೋ ಆಸ್ಪತ್ರೆ ವೈದ್ಯ ಪ್ರಮೋದ್‌ ಎಂಬುವವರು ಸರ್ವೋದಯ ಶಾಲೆ ಸಮೀಪ ಬೈಕ್‌ ನಿಲ್ಲಿಸಿದ್ದರು. ರಾತ್ರಿ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ್‌ ಅವರು ಬೆಳಗಿನ ಜಾವ 3.30ರ ಹೊತ್ತಿಗೆ ಬೈಕ್‌ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ ಬಳಿಕ ಜಯನಗರ ಠಾಣೆಯಲ್ಲಿ ದೂರು … Read more