ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕೆಳಗಿಳಿದ ಮೂವರು ಸಾವು, ಕಾರಿನಲ್ಲಿದ್ದ ಮೂವರ ರಕ್ಷಣೆ, ಹೇಗಾಯ್ತು ಘಟನೆ?

240920 Garthikere Car Accident 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 24 ಸೆಪ್ಟಂಬರ್ 2020 ತಾಲೂಕು ಗರ್ತಿಕೆರೆ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಕಾರಿನಿಂದ ಕೆಳಗಿಳಿದವರು ಸಾವನ್ನಪ್ಪಿದ್ದಾರೆ. ಆತಂಕದಿಂದ ಕಾರಿನಲ್ಲೇ ಕುಳಿತ ಮೂವರ ರಕ್ಷಣೆ ಮಾಡಲಾಗಿದೆ. ಹೇಗಾಯ್ತು ಅಪಘಾತ? ಹೊಸನಗರ ಕಡೆಯಿಂದ ರಾತ್ರಿ ರಿಪ್ಪನ್‍ಪೇಟೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಶೀಲಿಸಲು ಕಾರಿನಿಂದ ಕೆಳಗಿಳಿದ ಚಾಲಕ ಲೋಹಿತ್ (34) ದಿಢೀರ್ ಕುಸಿದು ಬಿದ್ದಿದ್ದಾರೆ. … Read more

ಹೊಸನಗರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಬೀದಿ ಅಂಗಡಿ, ತೆರವಿಗೆ ಒತ್ತಾಯ

100920 Hosanagara Pattana Panchayat Members Memorandum 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 10 ಸೆಪ್ಟಂಬರ್ 2020 ಹೆದ್ದಾರಿ ಪಕ್ಕದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬೀದಿ ಹೊಟೇಲ್ ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ ರಾಜೀವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹೊಸನಗರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಲ ಭಾಗದಲ್ಲಿ ಬೀದಿ ಅಂಗಡಿ ಮತ್ತು ಕ್ಯಾಂಟೀನ್ ತೆರೆಯಲು ಪಟ್ಟಣ ಪಂಚಾಯಿತಿಯಿಂದ ಅನುಮತಿ ನೀಡಲಾಗಿದೆ. ಆದರೆ ಎಡ ಭಾಗದಲ್ಲಿ ಶೆಡ್ ನಿರ್ಮಿಸಲಾಗಿದ್ದು, ಬೀದಿ ಅಂಗಡಿ ಹೆಸರಲ್ಲಿ ಹೊಟೇಲ್ ತೆರೆಯಲಾಗುತ್ತಿದೆ. ಅನುಮತಿ … Read more

ಬೈಕ್‌ನಲ್ಲಿ ತೆರಳುತ್ತಿದ್ದ ಶಿಕ್ಷಕಿಯನ್ನು ಅಡ್ಡಗಟ್ಟಿ ಐದು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಶಿವಮೊಗ್ಗ ಲೈವ್.ಕಾಂ | HOSANAGARA NEWS | 26 ಆಗಸ್ಟ್ 2020 ಬೈಕ್‍ನಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹೊಸನಗರ ತಾಲೂಕು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಸುಮಾರು ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೇಗಾಯ್ತು ಘಟನೆ? ಆರೋಡಿ ಕೊಡಸೆ ಸರ್ಕಾರಿ ಶಾಲೆ ಶಿಕ್ಷಕಿ ಮಂಜುಳಾ, ತಮ್ಮ ಬೈಕ್‍ನಲ್ಲಿ ತೆರಳುವಾಗ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಆರೋಡಿಯಿಂದ ಸಂಸೆ ಕಡೆಗೆ ತೆರಳುತ್ತಿದ್ದಾಗ … Read more

ಮಾಣಿ, ಚಕ್ರಾ, ಸಾವೇಹಕ್ಲು ಡ್ಯಾಂಗಳಿಗೂ ಒಳಹರಿವು ಹೆಚ್ಚಳ, ಚಕ್ರಾ ಸಾವೇಹಕ್ಲು ಡ್ಯಾಮ್ಗಳ ಹೊರ ಹರಿವೆಷ್ಟು?

Maani-Dam-Hosanagara

ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020 ವರಾಹಿ ಜಲ ವಿದ್ಯುತ್ ಯೋಜನೆ ವ್ಯಾಪ್ತಿಯ ನಾಲ್ಕು ಅಣೆಕಟ್ಟೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಹಾಗಾಗಿ ನಾಲ್ಕು ಅಣೆಕಟ್ಟೆಗೂ ಒಳಹರಿವು ಹೆಚ್ಚಳವಾಗಿದೆ. ಮಾಣಿ ಡ್ಯಾಂ | ಜಲಾಶಯದ ಇವತ್ತಿನ ನೀರಿನ ಮಟ್ಟ 578.18 ಎಂಎಸ್‍ಎಲ್ ಇದೆ. 10,266 ಕ್ಯೂಸೆಕ್ ನೀರು ಒಳಹರಿವು ಇದೆ. ಮಾಣಿ ಪಿಕ್‍ಅಪ್ | ಡ್ಯಾಮ್ ಭರ್ತಿಯಾಗಿದ್ದು, 2508 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡ್ಯಾಂನ ಮಟ್ಟ 563.57 ಎಂಎಸ್‍ಎಲ್ … Read more

ನಗರ ಹೋಬಳಿಯಲ್ಲಿ ಧರೆ ಕುಸಿತ, ಯಡೂರು – ಮಾಗಲು ರಸ್ತೆ ಸಂಪರ್ಕ ಕಡಿತ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020 ನಗರ ಹೋಬಳಿಯಲ್ಲಿ ಧರೆ ಕುಸಿದಿದ್ದು ಯಡೂರು – ಮಾಗಲು ಸಂಪರ್ಕ ಕಡಿತಗೊಂಡಿದೆ. ಮೆಕೇರಿ ಮಾರ್ಗವಾಗಿ ಮಾಗಲು ಗ್ರಾಮಕ್ಕೆ ಸಾಗುವ ಮಾರ್ಗದಲ್ಲಿ ಮಣ್ಣು ಕುಸಿದಿದೆ. ಇದರಿಂದ ಈ ಗ್ರಾಮದಲ್ಲಿರುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಮಾಗಲು ಗ್ರಾಮದಲ್ಲಿ ಎಂಟತ್ತು ಕುಟುಂಬಗಳಿವೆ. ಧರೆ ಕುಸಿತದಿಂದಾಗಿ ಈ ಭಾಗದ ಜನರಿಗೆ ಇದ್ದ ಏಕೈಕ ಸಂಪರ್ಕ ಮಾರ್ಗ ಇದಾಗಿತ್ತು. ಧರೆ ಕುಸಿತದಿಂದಾಗಿ ಮಣ್ಣು ಸಂಪೂರ್ಣವಾಗಿ ರಸ್ತೆಯನ್ನು ಆವರಿಸಿದೆ. ಹಾಗಾಗಿ ವಾಹನ ಸಂಚಾರ ಕಷ್ಟವಾಗಿದೆ. … Read more

ಹೊಸನಗರದ ಇಬ್ಬರಿಗೆ ಕರೋನ, ಇವರಿಗೆ ಸೋಂಕು ತಗುಲಿದ್ದು ಹೇಗೆ?

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 18 ಜುಲೈ 2020 ಬೆಂಗಳೂರಿನಿಂದ ಹೊಸನಗರಕ್ಕೆ ಬಂದಿದ್ದ ಇಬ್ಬರಿಗೆ ಕರೋನ ಸೋಂಕು ತಗುಲಿದೆ. ಶುಕ್ರವಾರ ಬಿಡುಗಡೆಯಾದ ವರದಿಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ತಾಲುಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಗಲ್ಲು ಗ್ರಾಮದ 31 ವರ್ಷದ ವ್ಯಕ್ತಿ ಮತ್ತು ಮಾವಿನಕಟ್ಟೆ ಸಮೀಪದ ಸಾವಂತೂರು ಗ್ರಾಮದ 29 ವರ್ಷದ ವ್ಯಕ್ತಿಗೆ ಕರೋನ ಸೋಂಕು ದೃಢವಾಗಿದೆ. ಬೆಂಗಳೂರಿನಿಂದ … Read more

ಹತ್ತು ದಿನ ರಿಪ್ಪನ್‌ಪೇಟೆಯಲ್ಲಿ ಸಲೂನ್‌ಗಳು ಬಂದ್, ಸ್ವಯಂ ನಿರ್ಬಂಧ ವಿಧಿಸಿಕೊಂಡ ಮಾಲೀಕರು

ಶಿವಮೊಗ್ಗ ಲೈವ್.ಕಾಂ | RIPPONPETE NEWS | 8 ಜುಲೈ 2020 ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹಲವರಿಗೆ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹತ್ತು ದಿನ ಸಲೂನ್‍ ಬಾಗಿಲು ತೆರೆಯದಿರಲು ನಿರ್ಧರಿಸಲಾಗಿದೆ. ರಿಪ್ಪನ್‍ಪೇಟೆ ಸುತ್ತಮುತ್ತಲು ಇನ್ನು ಹತ್ತು ದಿನ ಸಲೂನ್‍ಗಳು ಇರುವುದಿಲ್ಲ. ಸಿದ್ದಪ್ಪನ ಗುಡಿಯ ಸಭಾಂಗಣದಲ್ಲಿ ನಡೆದ ಭಂಡಾರಿ ಸಮಾಜ ಸಂಘ ರಿಪ್ಪನ್‍ಪೇಟೆ ಘಟಕದ ಸಲೂನ್‍ ಅಂಗಡಿ ಮಾಲೀಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 10 ದಿನ ಸಲೂನ್ ತೆಗೆಯದಿರಲು ಒಮ್ಮತದ ನಿರ್ಧಾರ ಮಾಡಲಾಗಿದೆ. ಸಂಘದ … Read more

ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಿ, ಗೇಟ್ ಮುಂದೆ ಗ್ರಾಮಸ್ಥರ ಧರಣಿ

270620 Villagers Protest in Front Of Kodachadri Gate 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 27 ಜೂನ್ 2020 ಲಾಕ್ ಡೌನ್ ತೆರವಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರ ಕೊಡಚಾದ್ರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಪ್ರವಾಸಿಗರು ಬರುತ್ತಿದ್ದಾರೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಹೊಸನಗರದ ಕಟ್ಟಿನಹೊಳೆ, ಹೊಸೂರು, ಸಂಪಕಟ್ಟೆ ಗ್ರಾಮಸ್ಥರು ಕೊಡಚಾದ್ರಿ ಗಿರಿಯ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ದೇಶಾದ್ಯಂತ ಕರೋನಾ ಆತಂಕ ಹೆಚ್ಚಾಗುತ್ತಿದೆ. ಹೀಗಿದ್ದೂ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ … Read more

ಸ್ನೇಹಿತನೊಂದಿಗೆ ಬೀಗರ ಊಟಕ್ಕೆ ಹೋಗಿದ್ದ ಯುವಕನಿಗೆ ಕರೋನ, ಹೊಸನಗರದ ಒಂದು ಗ್ರಾಮ ಸೀಲ್ ಡೌನ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 24 ಜೂನ್ 2020 ಜೂಸ್ ಕಬ್ಬು ವ್ಯಾಪಾರಿ ಜೊತೆಗೆ ಮದುವೆ ಬೀಗರ ಊಟಕ್ಕೆ ಹೋಗಿದ್ದ ಯುವಕನಿಗೂ ಕರೋನ ಸೋಂಕು ಕಾಣಿಸಿಕೊಂಡಿದೆ. ಸ್ನೇಹಿತನಿಗೆ ಕರೋನ ಸೋಂಕು ತಗುಲಿರುವ ವಿಚಾರ ತಿಳಿದು ಯುವಕ ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಒಳಪಟ್ಟಿದ್ದರು. ರಿಪ್ಪನ್‍ಪೇಟೆ ಸಮೀಪದ ಗ್ರಾಮವೊಂದರ ಜೂಸ್ ಕಬ್ಬು ವ್ಯಾಪಾರಿಗೆ ಕರೋನ ಸೋಂಕು ತಗುಲಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ, ಅವರೊಂದಿಗೆ ಮದುವೆ ಬೀಗರ ಊಟಕ್ಕೆ ಹೋಗಿದ್ದ ಸ್ವಯಂ ಪ್ರೇರಿತವಾಗಿ ಹೋಗಿ ತಪಾಸಣೆಗೆ ಒಳಪಟ್ಟಿದ್ದರು. ಊರು … Read more

ವ್ಯಾಪಾರಿಗೆ ಕರೋನ, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ, ಎಲ್ಲಿಯವರು? ಸೋಂಕು ತಗುಲಿದ್ದು ಹೇಗೆ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | RIPPONPETE NEWS | 20 ಜೂನ್ 2020 ಅಂಗಡಿಗಳಿಗೆ ಜೂಸ್‌ ಕಬ್ಬು ಸರಬರಾಜು ಮಾಡುತ್ತಿದ್ದ ವ್ಯಾಪಾರಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು, ರಿಪ್ಪನ್‌ಪೇಟೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. ವ್ಯಾಪಾರಿಯ ಮನೆಯ ಸುತ್ತಲು ಈಗ ಕಂಟೈನ್ಮೆಂಟ್‌ ಜೋನ್‌ ರಚಿಸಲಾಗಿದೆ. ವ್ಯಾಪಾರಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಇನ್ನಷ್ಟು ಸಂಪರ್ಕಿತರ ಪತ್ತೆ ಕಾರ್ಯ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಯಾರಿದು ವ್ಯಾಪಾರಿ? ರಿಪ್ಪನ್‌ಪೇಟೆ ಸಮೀಪದ ಗ್ರಾಮದವೊಂದರ ಜೂಸ್‌ ಕಬ್ಬು ವ್ಯಾಪಾರಿಯೊಬ್ಬರಲ್ಲಿ (೪೨) ಸೋಂಕು ಪತ್ತೆಯಾಗಿದೆ. ಇವರಲ್ಲಿ ಐಎಲ್‌ಐ (ಇನ್‌ಫ್ಲೂಯೆಂಜಾ ಲೈಕ್‌ … Read more