ಶಿವಮೊಗ್ಗದ ವಿವಿಧ ಗ್ರಾಮಗಳಲ್ಲಿ ಇಂದಿನಿಂದ ಫೆ.10ರವರೆಗೆ ಕರೆಂಟ್‌ ಇರಲ್ಲ, ಯಾವ್ಯಾವ ಗ್ರಾಮ? ಇಲ್ಲಿದೆ ಲಿಸ್ಟ್‌

power cut mescom ELECTRICITY

SHIVAMOGGA LIVE NEWS | 7 FEBRUARY 2024 SHIMOGA : ಸಂತೆಕಡೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮಾರ್ಗಗಳ ಹೆಚ್ಚುವರಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಫೆ.7 ರಿಂದ 10 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 06 ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಸಂತೆಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, … Read more

ರೈಲ್ವೆ ಇಲಾಖೆಯಲ್ಲಿ ಕೆಲಸ, ‘ಇನ್ನೇನು ಬಂದೇ ಬಿಡ್ತು ಆದೇಶ’, ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ದೋಖ

Shimoga-Yeshwanthapura-Train-South-Western-Railway

SHIVAMOGGA LIVE NEWS | 6 FEBRUARY 2024 SHIMOGA : ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಂದ ನಾಲ್ಕು ಬಾರಿ ತಲಾ 2 ಲಕ್ಷ ರೂ.ನಂತೆ ಒಟ್ಟು 8 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ. ಕೊನೆಗೆ ಕೆಲಸವು ಇಲ್ಲದೆ, ಹಣವನ್ನು ಹಿಂತಿರುಗಿಸದೆ ಇದ್ದಿದ್ದರಿಂದ ರೈತ ದೂರು ನೀಡಿದ್ದಾರೆ. ಏನಿದು ಪ್ರಕರಣ? ಶಿವಮೊಗ್ಗ ಗ್ರಾಮವೊಂದರ ರೈತರೊಬ್ಬರ (ಹೆಸರು, ಊರು ಗೌಪ್ಯ) ಮಗ ಡಿಪ್ಲೋಮಾ ಮುಗಿಸಿದ್ದು ಎಲ್ಲಿಯು ಕೆಲಸ ಸಿಕ್ಕಿರಲಿಲ್ಲ. ಬೆಂಗಳೂರಿನ ಯುವಕನೊಬ್ಬನಿಗೆ ರೈತನ ಊರಿನ … Read more

ಶಿವಮೊಗ್ಗ, ಸಾಗರ ತಹಶೀಲ್ದಾರ್‌ಗಳ ವರ್ಗಾವಣೆ, ಯಾರು ಹೊಸ ತಹಶೀಲ್ದಾರ್‌?

Shimoga-Tahasildhar-nagaraj.webp

SHIVAMOGGA LIVE NEWS | 2 FEBRUARY 2024 SHIMOGA : ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವವ ರಾಜ್ಯದ ವಿವಿಧೆಡೆಯ ತಹಶೀಲ್ದಾರ್‌ಗಳನ್ನು ವರ್ಗಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತಹಶೀಲ್ದಾರ್‌ಗಳು ಕೂಡ ವರ್ಗವಾಗಿದ್ದಾರೆ. ಯಾರೆಲ್ಲರ ವರ್ಗವಾಗಿದೆ? ಜಗಳೂರು ತಹಶೀಲ್ದಾರ್‌ ಕಲೀಂ ಉಲ್ಲಾ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಸಾಗರ ತಾಲೂಕು ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ ಅವರನ್ನು ದಾವಣಗೆರೆ ಜಿಲ್ಲೆ ಜಗಳೂರಿಗೆ ವರ್ಗಾಯಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಡಾ. ಎನ್‌.ಜೆ. ನಾಗರಾಜ್‌ ಅವರನ್ನು ಹಾವೇರಿ ತಾಲೂಕಿಗೆ ವರ್ಗಾಯಿಸಲಾಗಿದೆ. … Read more

ತ್ಯಾವರೆಕೊಪ್ಪ ಸಫಾರಿಯಲ್ಲಿ ಸಿಂಹ ಸಾವು, ಕಾರಣವೇನು?

Lion-Sarvesh-succumbed-at-tyavrekoppa-lion-and-tiger-safari

SHIVAMOGGA LIVE NEWS | 1 FEBRUARY 2024 SHIMOGA : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ 13 ವರ್ಷದ ಸಿಂಹ ಸರ್ವೇಶ ಕೊನೆಯುಸಿರೆಳೆದಿದೆ. ಬನ್ನೇರುಘಟ್ಟದಿಂದ ಶಿವಮೊಗ್ಗದ ಸಿಂಹಧಾಮಕ್ಕೆ ಸರ್ವೇಶನನ್ನು ತರಲಾಗಿತ್ತು. ಕಳೆದ ನಾಲ್ಕು ವರ್ಷದಿಂದ ಈ ಸಿಂಹ ಪ್ರವಾಸಿಗರಿಗೆ ಕಾಣಿಸಿಕೊಂಡಿತ್ತು. ಹಿಮೋ ಪ್ರೋಟೋಜೋನ್‌ ಕಾಯಿಲೆಯಿಂದ ಸರ್ವೇಶ ಸಿಂಹ ಬಳಲುತ್ತಿತ್ತು. ಮಂಗಳವಾರ ತೀವ್ರ ಅನಾರೋಗ್ಯಕ್ಕೀಡಾಗಿ ವಾಂತಿ ಮಾಡಿಕೊಂಡಿತ್ತು. ಪಶು ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ – ಸರ್ಕಲ್‌ನಲ್ಲಿ … Read more

ಶಿವಮೊಗ್ಗದ ಟ್ರೀ ಪಾರ್ಕ್‌ನಲ್ಲಿ ಸಿಮೆಂಟ್‌ ಜಿಂಕೆ ಬಿದ್ದು ಬಾಲಕಿ ಸಾವು

muddinakoppa-tree-park-incident.

SHIVAMOGGA LIVE NEWS | 29 JANUARY 2024 SHIMOGA : ಮುದ್ದಿನಕೊಪ್ಪದ ಟ್ರೀ ಪಾರ್ಕ್‌ನಲ್ಲಿ ಜಿಂಕೆಯ ಸಿಮೆಂಟ್‌ ಪ್ರತಿಮೆ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಭಾನುವಾರ ರಜೆ ಇದ್ದಿದ್ದರಿಂದ ಬಾಲಕಿ ಟ್ರೀ ಪಾರ್ಕ್‌ನಲ್ಲಿ ಆಟವಾಡಲು ಬಂದಿದ್ದಾಗ ಘಟನೆ ಸಂಭವಿಸಿದೆ. ಶಿವಮೊಗ್ಗದ ನಿವಾಸಿ ಸಮೀಕ್ಷಾ (6) ಮೃತ ಬಾಲಕಿ. ಪೋಷಕರ ಜೊತೆಗೆ ಸಮೀಕ್ಷಾ ಟ್ರೀ ಪಾರ್ಕ್‌ಗೆ ಆಗಮಿಸಿದ್ದಳು. ಜಿಂಕೆ ಪ್ರತಿಮೆ ಬಳಿ ಆಟವಾಡುವಾಗ ಘಟನೆ ಸಂಭವಿಸಿದೆ. ಕೂಡಲೆ ಸಮೀಕ್ಷಾಳನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಘಟನೆ ಸಂಬಂಧ ಕುಂಸಿ ಪೊಲೀಸ್‌ … Read more

ಶಿವಮೊಗ್ಗದಲ್ಲಿ ತಂದೆ ವಿರುದ್ಧ 14 ವರ್ಷದ ಬಾಲಕಿಯಿಂದ ದೂರು, ಏನಿದು ಪ್ರಕರಣ?

301123-Shimoga-Rural-Police-Station.webp

SHIVAMOGGA LIVE NEWS | 27 JANUARY 2024 SHIMOGA : ಕೆನ್ನೆಗೆ ಹೊಡೆದು, ಕತ್ತು ಹಿಸುಕಲು ಯತ್ನಿಸಿದ ತಂದೆ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ. ಬಾಲಕಿ, ಸಹೋದರ ಮತ್ತು ತಾಯಿಗೆ ಆಕೆಯ ತಂದೆ ಹಿಂಸೆ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಏನಿದು ಪ್ರಕರಣ? ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿ, ಆಕೆಯ ಸಹೋದರನ ಶಾಲೆ ಬಳಿ ಬಂದು ತಂದೆ ಅವಾಚ್ಯವಾಗಿ ನಿಂದಿಸುತ್ತಿದ್ದಾನೆ. ಮನೆಯಲ್ಲಿ ನಿತ್ಯ ತಾಯಿ, ಬಾಲಕಿ ಮತ್ತು ಸಹೋದರನಿಗೆ ದೈಹಿಕ ಹಿಂಸೆ ನೀಡುತ್ತಿದ್ದಾನೆ … Read more

ರಾತ್ರೋರಾತ್ರಿ ಪೊಲೀಸರಿಗೆ ಬಂತು ಫೋನ್‌, ಸ್ಥಳಕ್ಕೆ ತೆರಳಿ ಪರೀಶೀಲನೆ ಬಳಿಕ ಇಬ್ಬರ ವಿರು‍ದ್ಧ ಕೇಸ್‌

301123-Shimoga-Rural-Police-Station.webp

SHIVAMOGGA LIVE NEWS | 25 JANUARY 2024 SHIMOGA : ತುಂಗಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆ ಇಬ್ಬರ ವಿರುದ್ಧ ಶಿವಮೊಗ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.22ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೂಗೂರು ಗ್ರಾಮದ ಬಳಿ ತುಂಗಾ ನದಿಯಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್‌ … Read more

ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್‌ ಒಳಗೆ ಹೆಡೆ ಎತ್ತಿದ ನಾಗರ ಹಾವು

Snake-kiran-rescues-snake-at-Shimoga-Airport-terminal

SHIVAMOGGA LIVE NEWS | 24 JANUARY 2024 SHIMOGA : ವಿಮಾನ ನಿಲ್ದಾಣದ ಟರ್ಮಿನಲ್‌ ಒಳಗೆ ನಾಗರ ಹಾವು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ವಿಮಾನ ನಿಲ್ದಾಣದ ಟರ್ಮಿನಲ್‌ನ ಒಳ ಭಾಗದಲ್ಲಿ ಹಾವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೆ ಸ್ನೇಕ್‌ ಕಿರಣ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್‌ ಕಿರಣ್‌ ಕೊಠಡಿಯೊಂದರಲ್ಲಿ ಸೇರಿದ್ದ ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ – SHIMOGA NEWS – ಜಿಲ್ಲೆಯ ಟಾಪ್‌ 10 ಸುದ್ದಿಗಳು, … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಜ.23ರಂದು ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 22 JANUARY 2024 SHIMOGA : ಎಂಆರ್‍ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.23ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ? ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ಈಚಲವಾಡಿ, ಹಾಯ್‍ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ  ಸುತ್ತಮುತ್ತಲಿನ ಗ್ರಾಮಗಳಲ್ಲಿ … Read more

ಸಕ್ರೆಬೈಲು ಬಳಿ ಮರಕ್ಕೆ ಬೈಕ್‌ ಡಿಕ್ಕಿ, ಸ್ಥಳದಲ್ಲೇ ಸಾವನ್ನಪ್ಪಿದ ಶಿವಮೊಗ್ಗದ ಕಾಲೇಜು ವಿದ್ಯಾರ್ಥಿ

ACCIDENT-NEWS-GENERAL-IMAGE.

SHIVAMOGGA LIVE NEWS | 20 JANUARY 2024 SHIMOGA : ಸ್ನೇಹಿತರೊಂದಿಗೆ ಊಟ ಮುಗಿಸಿ ಸಕ್ರೆಬೈಲಿನಿಂದ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಬೈಕ್‌ ಅಪಘಾತಕ್ಕೀಡಾಗಿ ಖಾಸಗಿ ಕಾಲೇಜು ಬಿ.ಕಾಂ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಸ್ತೆ ಬದಿ ಮರಕ್ಕೆ ಡಿಕ್ಕಿ ಗೋಪಾಲಗೌಡ ಬಡಾವಣೆಯ ಪ್ರಜ್ವಲ್‌ (20) ಮೃತ ದುರ್ದೈವಿ. ಪವನ್‌ ಎಂಬಾತನಿಗೆ ಗಂಭೀರ ಗಾಯವಾಗಿದೆ. ಜ.19ರಂದು ಕಾಲೇಜು ಸ್ನೇಹಿತರೊಂದಿಗೆ ಪವನ್‌ ಸಕ್ರೆಬೈಲಿಗೆ ತೆರಳಿದ್ದ. ಊಟ ಮುಗಿಸಿ ಪ್ರಜ್ವಲ್‌ ತನ್ನ … Read more