ಬಿ.ಹೆಚ್.ರಸ್ತೆಯಲ್ಲಿ ಭಯಾನಕ ಅಪಘಾತ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ, ಯುವತಿಯರಿಗೆ ಗಂಭೀರ ಗಾಯ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SAGARA NEWS | 20 ನವೆಂಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ರಸ್ತೆ ದಾಟಲು ಮುಂದಾಗಿದ್ದ ಯುವತಿಯರಿಗೆ ಗೂಡ್ಸ್ ಆಟೋವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಯುವತಿಯರಿಗೆ ಗಂಭೀರ ಗಾಯವಾಗಿದೆ. ಈ ದೃಶ್ಯ ಸಮೀಪದ ಶೋ ರೂಂ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

shivamogga live subscribe band

ಸಾಗರ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸಮ್ರೀನ್ ಬಾನು (21) ಮತ್ತು ಆಫ್ರೀನ್ ಬಾನು (19) ಗಾಯಗೊಂಡಿದ್ದಾರೆ. ಇಬ್ಬರು ಸಾಗರದ ಎಸ್.ಎನ್.ರಸ್ತೆಯ ನಿವಾಸಿಗಳಾಗಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

ಹೊಲಿಗೆ ತರಬೇತಿ ಮುಗಿಸಿ ಸಹೋದರಿಯರು ಮನೆಗೆ ಮರಳುತ್ತಿದ್ದರು. ಇಂದಿರಾಗಾಂಧಿ ಕಾಲೇಜು ತಿರುವಿನಲ್ಲಿ ಯುವತಿಯರು ಬಿ.ಹೆಚ್.ರಸ್ತೆ ದಾಟಲು ಅಣಿಯಾಗುತ್ತಿದ್ದರು. ಈ ವೇಳೆ ಬಿ.ಹೆಚ್.ರಸ್ತೆಯಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯುವತಿಯರಿಗೆ ಗಂಭೀರ ಗಾಯವಾಗಿದೆ. ನಂತರ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿಯಾಗಿದ್ದು, ಕಂಬ ಮುರಿದು ಹೋಗಿದೆ.

ಬೈಕ್ ತಪ್ಪಿಸಲು ಹೋಗಿ ಘಟನೆ

ಇಂದಿರಾ ಗಾಂಧಿ ಕಾಲೇಜು ರಸ್ತೆಯಿಂದ ಬಿ.ಹೆಚ್.ರಸ್ತೆಗೆ ಹೋದ ದ್ವಿಚಕ್ರ ವಾಹನಕ್ಕೆ ಆಟೋ ಡಿಕ್ಕಿಯಾಗಬೇಕಿತ್ತು. ಆದರೆ ಬೈಕ್’ಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ಮತ್ತೊಂದು ಕಡೆಗೆ ಆಟೋ ತಿರುಗಿಸಿದ್ದರಿಂದ ಯುವತಿಯರಿಗೆ ಡಿಕ್ಕಿಯಾಗಿದೆ. ಈ ದೃಶ್ಯವು ಸಮೀಪದ ಕಾರು ಶೋರೂಂ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ADVT JULY NANJAPPA HOSPITAL HOME LAB TESTING

ಹೇಗಿದೆ ಯುವತಿಯರ ಸ್ಥಿತಿ?

ಗಾಯಗೊಂಡ ಯುವತಿಯರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಮ್ರೀನ್ ಬಾನು ಸೊಂಟ ಸೇರಿದಂತೆ ವಿವಿಧೆಡೆ ಪೆಟ್ಟು ಬಿದ್ದಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಫ್ರೀನ್ ಬಾನು ಅವರಿಗೂ ಭಾರಿ ಪೆಟ್ಟು ಬಿದ್ದಿದೆ. ಸಹೋದರಿಯರಿಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.

AVvXsEhuCNEINWCL8DPvp C2UNNq2TUWVNqvJ57nLy9rMeOy7 fW0 Buj6jhVk3TQG7m4VS xHznXNa2ddYBSC pNgnP32DIvRJoBDAvWSmhUbXEvKpRoLGZzW49a5VVo0fTiMnYUl iAIUEWRlBQI2Jt8oIYQT4uKnvTteZdFKXUpiwQg0b1c8G6lSSf4pX8A=s926

ಅಸಹಾಯಕ ಸ್ಥಿತಿಯಲ್ಲಿ ಬಡ ಕುಟುಂಬ

ಸಮ್ರೀನ್ ಮತ್ತು ಆಫ್ರೀನ್ ಅವರ ತಂದೆ ಮಕ್ಬೂಲ್ ಸಾಬ್ ಸಾಗರದಲ್ಲಿ ಸಣ್ಣ ಮೀನು ವ್ಯಾಪಾರಿಯಾಗಿದ್ದಾರೆ. ಈಗ ಇಬ್ಬರು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದು, ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇನ್ನು, ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಸಾರ್ವಜನಿಕರು ಕುಟುಂಬಕ್ಕೆ ನೆರವಾಗುವಂತೆ ಮನವಿ ಮಾಡಿದ್ದಾರೆ.

AVvXsEhJdlfK8fO0BNZm 5h2EIsT9hhqRaqy4BIBxH IKV1vvdkvRpdzOmRlcr34QyTmBmYbHSbfgf82OB GOQOJheg3hqZaZGhOWDNgROcpo4atcmiGsbAf9aXhfjlqZ4bba1OpinDs0Y9k42niUEpffC4 f MFAjYtjLiDn2dhMf8maUJgb2kwIkOV71wMrQ=s926
ಎಎಸ್ಪಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು

ಚಾಲಕನ ವಿರುದ್ಧ ಪ್ರಕರಣ

ಇನ್ನು, ಘಟನೆ ಸಂಬಂಧ ಗೂಡ್ಸ್ ಆಟೋ ಚಾಲಕ ಪವನ್ ವಿರುದ್ಧ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment