ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 JUNE 2024
SHIMOGA : ಫೆಡೆಕ್ಸ್ ಆಫೀಸರ್ ಮತ್ತು ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿ (Officer) ಅಂತೆ ನಟಿಸಿ ಭದ್ರಾವತಿ ಮೂಲದ 28 ವರ್ಷದ ಇಂಜಿನಿಯರ್ಗೆ 9 ಲಕ್ಷ ರೂ. ವಂಚಿಸಲಾಗಿದೆ. ಇಂಜಿನಿಯರ್ಗೆ ಗೊತ್ತಾಗದ ಹಾಗೆ ಆಕೆಯ ಹೆಸರಿನಲ್ಲಿ ಪರ್ಸನಲ್ ಲೋನ್ ಪಡೆದು, ಆಕೆಯ ಸಂಬಳದ ಹಣವನ್ನೂ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಪಾರ್ಸಲ್ನಲ್ಲಿ ಡ್ರಗ್ಸ್, ಲ್ಯಾಪ್ಟಾಪ್, ಪಾಸ್ಪೋರ್ಟ್
ಅಪರಿಚಿತ ನಂಬರ್ನಿಂದ ಯುವತಿಗೆ (ಇಂಜಿನಿಯರ್) ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಮ್ಮ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕೊರಿಯರ್ ಬಂದಿದೆ. ಇದರಲ್ಲಿ ಡ್ರಗ್ಸ್, ಲ್ಯಾಪ್ಟಾಪ್, ಇರಾನ್ ದೇಶದ ಪಾಸ್ಪೋರ್ಟ್ ಇದೆ ಎಂದು ಬೆದರಿಸಿದ್ದ. ಈ ಸಂಬಂಧ ವಿಚಾರಣೆಗೆ ಮುಂಬೈನ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ ಅಧಿಕಾರಿಗೆ ಕರೆ ಕನೆಕ್ಟ್ ಮಾಡುವಂತೆ ತಿಳಿಸಿದ್ದ. ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡಿದ ವ್ಯಕ್ತಿಯೊಬ್ಬ ಆಫೀಸರ್ನಂತೆ ಯುನಿಫಾರಂ ಧರಿಸಿದ್ದ. ಆತ ಯುವತಿಯ ಹಿನ್ನೆಲೆ ಕುರಿತ ಮಾಹಿತಿ ಸಂಗ್ರಹಿಸಿದ್ದ.
ಇಂಜಿನಿಯರ್ಗೆ ಗೊತ್ತಿಲ್ಲದಂತೆ ಲೋನ್
ಡ್ರಗ್ಸ್ ದಂಧೆಕೋರರು ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಅಷ್ಟೂ ಹಣವನ್ನು ಬೇರೆ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದ. ಅದರಂತೆ ಯುವತಿ ತನ್ನ ತಾಯಿಯ ಖಾತೆಗೆ ಉಳಿಕೆ ಹಣ ವರ್ಗಾಯಿಸಿದ್ದರು. ಇದಾಗಿ ಕೆಲವೆ ಸಮಯಕ್ಕೆ ಯುವತಿ ಖಾತೆಗೆ 7.60 ಲಕ್ಷ ರೂ. ಹಣ ಬಂದ ಮೆಸೇಜ್ ಬಂದಿತ್ತು. ಆಗ ಆ ಆಧಿಕಾರಿ, ಇದು ಡ್ರಗ್ಸ್ ದಂಧೆಯ ಹಣ. ಇದನ್ನು ಕೂಡಲೆ ರಿಜರ್ವ್ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಎಂದು ಅಕೌಂಟ್ ನಂಬರ್ ನೀಡಿದ್ದ. ಅಲ್ಲದೆ ಇನ್ಮುಂದೆ ಈ ಖಾತೆಗೆ ಯಾವುದೇ ಹಣ ಬಂದರೂ ಅದನ್ನು ಕೂಡಲೆ ರಿಜರ್ವ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದ. ನಂಬಿದ ಯುವತಿ ತನ್ನ ಸಂಬಳದ ಹಣವನ್ನೂ ಆತ ನೀಡಿದ್ದ ಖಾತೆಗೆ ವರ್ಗಾಯಿಸಿದ್ದಳು.
ಮೇಲ್ ಚೆಕ್ ಮಾಡಿದಾಗ ಶಾಕ್
ಈ ಬೆಳವಣಿಗೆ ಬಳಿಕ ಯುವತಿ ಈ ಮೇಲ್ ಚೆಕ್ ಮಾಡುವಾಗ ತಮಗೆ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಸಾಂಕ್ಷನ್ ಮಾಡಲಾಗಿದೆ ಎಂದು ಮಾಹಿತಿ ಬಂದಿತ್ತು. ಪ್ರತಿ ತಿಂಗಳು 18,276 ರೂ. ಇಎಂಐ ಪಾವತಿಸುವಂತೆ ಸೂಚಿಸಲಾಗಿತ್ತು. ಇಂಜಿನಿಯರ್ ಯುವತಿಗೆ ಗೊತ್ತಾಗದ ಹಾಗೆ ಆಕೆಯ ಮಾಹಿತಿ ಪಡೆದು 7.60 ಲಕ್ಷ ರೂ. ಪರ್ಸನಲ್ ಲೋನ್ ಸಾಂಕ್ಷನ್ ಮಾಡಿಸಿಕೊಂಡು ವರ್ಗಾಯಿಸಿಕೊಳ್ಳಲಾತ್ತು. 1.40 ಲಕ್ಷ ರೂ. ಸಂಬಳದ ಹಣವನ್ನು ಟ್ರಾನ್ಸ್ಫರ್ ಮಾಡಿಕೊಳ್ಳಲಾಗಿತ್ತು. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಡಾ. ಧನಂಜಯ ಸರ್ಜಿಗೆ ಅದ್ಧೂರಿ ಸ್ವಾಗತ, ತೆರೆದ ವಾಹನದಲ್ಲಿ ಮೆರವಣಿಗೆ
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















