SHIVAMOGGA LIVE NEWS | 25 SEPTEMBER 2023
SORABA : ಶುಂಠಿ ಗೋದಾಮಿಗೆ (Ginger Godown) ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಸುಮಾರು 10 ಕ್ವಿಂಟಾಲ್ ಶುಂಠಿ ಹಾನಿಯಾಗಿದೆ. ಭಾನುವಾರ ತಡರಾತ್ರಿ ಘಟನೆ ಸಂಭವಿಸಿದೆ.
ಸೊರಬ ತಾಲೂಕು ಆನವಟ್ಟಿ ಹೋಬಳಿಯ ಕುಬಟೂರು ಗ್ರಾಮದ ಇಬ್ರಾಹಿಂ ಸಾಬ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಘಟನೆ ಸಂಭವಿಸಿದೆ. ಗೋದಾಮಿನಲ್ಲಿ ಅಂದಾಜು 70 ಕ್ವಿಂಟಾಲ್ ಒಣ ಶುಂಠಿ ಇತ್ತು. ಸುಮಾರು 10 ಕ್ವಿಂಟಾಲ್ ಶುಂಠಿ ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದ ಡಾಕ್ಟರ್ಗೆ ಕಾದಿತ್ತು ಶಾಕ್