ಕುವೆಂಪು ವಿವಿ ಕುರಿತು ವಿಧಾನಸೌಧದಲ್ಲಿ ಚರ್ಚೆ | 3 ಫಟಾಫಟ್‌ ಸುದ್ದಿಗಳು

SHIVAMOGGA LIVE NEWS | 29 NOVEMBER 2024

ವಿಧಾನಸೌಧದಲ್ಲಿ ಕುವೆಂಪು ವಿವಿ ಕುರಿತು ಸಭೆ

#e6f1e6ಬೆಂಗಳೂರು : ಕುವೆಂಪು ವಿಶ್ವವಿದ್ಯಾಲಯದ (University) ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಕುಲಪತಿ ಪ್ರೊ. ಶರತ್‌ ಅನಂತಮೂರ್ತಿ, ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ ಉಮಾ, ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಕುಮಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Meeting-about-kuvempu-university-at-vidhana-soudha

ನರಸಿಂಹ ಗಂಧದಮನೆ ನೂತನ ಅಧ್ಯಕ್ಷ

#e6f1e6ಶಿವಮೊಗ್ಗ : ದುರ್ಗಿಗುಡಿ ಕೋ ಆಪರೇಟಿವ್‌ ಸೊಸೈಟಿಯ ನೂತನ ಅಧ್ಯಕ್ಷರಾಗಿ ನರಸಿಂಹ ಗಂಧದಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ನರಸಿಂಹ ಗಂಧದಮನೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧಿಕಾರ ವಹಿಸಿಕೊಂಡರು.

ಶಿವಮೊಗ್ಗದಲ್ಲಿ ಏಕಲವ್ಯ ನಾಟಕ ಪ್ರದರ್ಶನ

#e6f1e6ಶಿವಮೊಗ್ಗ : ರಂಗಾಯಣದ ವತಿಯಿಂದ ಕಾಲೇಜು ರಂಗೋತ್ಸವದಲ್ಲಿ ನ.30ರಂದು ಸಂಜೆ 6.30ರಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ಏಕಲವ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಡಾ. ಸಿದ್ಧಲಿಂಗಯ್ಯ ರಚನೆಯ, ಪ್ರಮೋದ್‌ ಶಿಗ್ಗಾಂವ್‌ ವಿನ್ಯಾಸ, ನಿರ್ದೇಶನ ಮಾಡಿದ್ದಾರೆ. ಒಬ್ಬರಿಗೆ ಪ್ರವೇಶ ದರ 30 ರೂ. ನಿಗದಿಪಡಿಸಲಾಗಿದೆ.

ಇದನ್ನು ಓದಿ » ಜೋಗ ಜಲಪಾತದಲ್ಲಿ ರೈನ್‌ ಡಾನ್ಸ್‌, ಈಜು ಕೊಳ, ಇನ್ನು ಏನೇನಿರುತ್ತೆ?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 29, 2024 at 9:05 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 29, 2024

Leave a Comment