SHIMOGA, 7 AUGUST 2024 : ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಗೆಯ ಮುಖಂಡರು, ಕಾರ್ಯಕರ್ತರಿದ್ದಾರೆ (Workers). ಅದರೆ ಪಕ್ಷಕ್ಕೆ ಅಗತ್ಯವಿರುವುದು ಒಂದೇ ಬಗೆಯ ಕಾರ್ಯಕರ್ತ ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ವಿಶ್ಲೇಷಿಸಿದರು.
ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ತಿಳಿಯುವ ಸತ್ಯಶೋಧನಾ ಸಭೆಯಲ್ಲಿ ವಿ.ಎಸ್.ಉಗ್ರಪ್ಪ ಮಾತನಾಡಿದರು.
![]() |
ಮೂರು ಬಗೆಯ ಮುಖಂಡರು, ಕಾರ್ಯಕರ್ತರು
ಪಕ್ಷಗಳಲ್ಲಿ ಪ್ರದಕ್ಷಿಣೆ ಮಾಡುವ ಒಂದು ವರ್ಗ ಇರುತ್ತದೆ. ಮುಖ್ಯಮಂತ್ರಿ, ಸಚಿವರು, ಪ್ರಮುಖರು ಬಂದಾಗಷ್ಟೆ ಪಕ್ಷದ ಕಚೇರಿಗೆ ಭೇಟಿ ಕೊಡುತ್ತಾರೆ. ಎರಡನೇ ವರ್ಗದ ಕಾರ್ಯಕರ್ತರು ಜನರ ಜೊತೆಗೆ ಇರುತ್ತದೆ. ಜನರಿಗೆ ಕೆಲಸಗಳನ್ನು ಮಾಡಿಕೊಡುತ್ತಲೆ ಇರುತ್ತಾರೆ. ಇಂತಹ ಕಾರ್ಯಕರ್ತರು ಯಾರಿಗೂ ಗೊತ್ತಾಗುವುದಿಲ್ಲ. ಮೂರನೆ ವರ್ಗದ ಕಾರ್ಯಕರ್ತರು ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ಕೊಡುತ್ತಾರೆ ಎಂದು ವಿ.ಎಸ್.ಉಗ್ರಪ್ಪ ವಿಶ್ಲೇಷಿಸಿದರು.
ಕಾಂಗ್ರೆಸ್ಗೆ ಎಂತಹ ಕಾರ್ಯಕರ್ತರು ಬೇಕು?
ಕಾರ್ಯಕರ್ತರು ವೈಚಾರಿಕತೆ ಬೆಳೆಸಿಕೊಳ್ಳಬೇಕು. ನಾಯಕರ ಜೊತೆಗು ಇರಬೇಕು. ಜನರ ಜೊತೆಗೂ ಇರಬೇಕು. ಕೇವಲ ನಾಯಕರ ಬ್ಯಾಗ್ ಹಿಡಿದು ಓಡಾಡುವುದು, ಸಲ್ಯೂಟ್ ಹೊಡೆಯುವುದಲ್ಲ. ತಪ್ಪು ಮಾಡಿದರೆ ನಾಯಕನಿಗು ಮುಲಾಜಿಲ್ಲದೆ ಪ್ರಶ್ನೆ ಮಾಡುವ ದಮ್ಮು, ತಾಕತ್ತು ಬೆಳೆಸುಕೊಳ್ಳಬೇಕು. ಆಗ ಪಕ್ಷ ಬಲವಾಗಿ ಬೇರೂರುತ್ತದೆ ಎಂದು ಉಗ್ರಪ್ಪ ತಿಳಿಸಿದರು.
ಇದನ್ನೂ ಓದಿ ⇓
ಆಗಸ್ಟ್ 10ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ 600ಕ್ಕೂ ಹೆಚ್ಚು ಮಹಿಳಾ ನ್ಯಾಯವಾದಿಗಳು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200