ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 28 NOVEMBER 2024
ಶಿವಮೊಗ್ಗ : ನಗರದ ಹರಿಗೆ ಸಮೀಪ ವಾಹನ ಸವಾರರಿಗೆ ಪಾತಾಳ ದರ್ಶನವಾಗುತ್ತಿದೆ. ಸ್ವಲ್ಪ ಯಾಮಾರಿದರೆ ಈ ಕೂಪಕ್ಕೆ ಉರುಳಿ (Pot Holes) ಇಹಲೋಕ ತೊರೆಯುವಂತಹ ಸ್ಥಿತಿ ಇದೆ.
ಶಿವಮೊಗ್ಗ – ಭದ್ರಾವತಿ ಹದ್ದಾರಿಯಲ್ಲಿ ಹರಿಗೆ ಸಮೀಪ ಆಳವಾದ ಗುಂಡಿಗಳಾಗಿವೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ಗುಂಡಿಗಳು ಮೃತ್ಯು ಕೂಪವಾಗಿಬಿಟ್ಟಿವೆ. ಅಪ್ಪಿತಪ್ಪಿ ವೇಗವಾಗಿ ಬಂದು ಗುಂಡಿಗಳ ದಿಸೆಯಿಂದಾಗಿ ಬಿದ್ದರೆ ಸಾವು ಗ್ಯಾರಂಟಿ.

ಧೂಳು, ಗುಂಡಿಗಳ ನಡುವೆ ಸೆಣೆಸಾಟ
ಎರಡು ನಗರಗಳ ನಡುವೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈಗಾಗಲೆ ಈ ಮಾರ್ಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಮಲವಗೊಪ್ಪದಿಂದ ಭದ್ರಾವತಿ ತಲುಪುವವರೆಗೆ ರಸ್ತೆಯಲ್ಲಿ ಧೂಳು ಕುಡಿಯುತ್ತಲೆ ಓಡಾಡಬೇಕಿದೆ. ಈ ಮಧ್ಯೆ ಹರಿಗೆ ಸಮೀಪ ಇರುವ ಬೃಹತ್ ಗುಂಡಿಗಳು ಜೀವ ಕಸಿಯುವಷ್ಟು ಭೀಕರವಾಗಿವೆ.

ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಓಡಾಡುವವರೆ ಹುಷಾರ್, ಪ್ರಾಣ ತೆಗೆಯಲು ಕಾಯುತ್ತಿವೆ ಕರೆಂಟ್ ಕಂಬಗಳು
ಭದ್ರಾವತಿ ಕಡೆಯಿಂದ ಬರುವಾಗ ಮಲವಗೊಪ್ಪದ ಬಳಿ ಗುಂಡಿಗಳನ್ನೆಲ್ಲ ಬಂದ್ ಮಾಡಲಾಗಿದೆ. ಅಲ್ಲಿಂದ ಮುಂದೆ ಸ್ವಲ್ಪ ದೂರದವರೆಗೆ ರಸ್ತೆ ಚನ್ನಾಗಿದೆ. ಇದೇ ಕಲ್ಪನೆಯೊಂದಿಗೆ ಚಾಲಕರು ವೇಗ ಹೆಚ್ಚಿಸಿದರೆ ಹರಿಗೆ ಬಳಿ ದಿಢೀರ್ ಬೃಹತ್ ಗುಂಡಿಗಳು ಎದುರಾಗಲಿವೆ. ವಾಹನಗಳನ್ನು ನಿಯಂತ್ರಿಸಲು ಆತುರ ತೋರಿದರೆ ಅಪಘಾತ ನಿಶ್ಚಿತ. ಹರಿಗೆ ಬಳಿ ರಸ್ತೆಯ ಎರಡು ಬದಿಯಲ್ಲು ಇದೇ ರೀತಿಯ ಗುಂಡಿಗಳಿವೆ.
ಪಾತಾಳ ದರ್ಶನ ಮಾಡಿಸುತ್ತಿರುವ ಈ ಗುಂಡಿಗಳನ್ನು ಅಧಿಕಾರಿಗಳು ತಕ್ಷಣ ಬಂದ್ ಮಾಡಿಸಬೇಕಿದೆ. ಇಲ್ಲವಾದಲ್ಲಿ ದೊಡ್ಡ ಅನಾಹುತ ನಿಶ್ಚಿತ.


Pot Holes
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





