SHIVAMOGGA LIVE NEWS | 10 MAY 2024
CITY ROUNDS : ಶಿವಮೊಗ್ಗ ನಗರದ ಈ ಸರ್ಕಲ್ನಲ್ಲಿ ಯಾವ ದಿಕ್ಕಿಗೆ ವಾಹನ ತಿರುಗಿಸಿದರು ಒಂದಿಲ್ಲೊಂದು ಗುಂಡಿ ಸವಾರರನ್ನು ಸ್ವಾಗತಿಸುತ್ತದೆ. ರಾತ್ರಿ ವೇಳೆ ಈ ಗುಂಡಿಗಳು ತಮ್ಮ ಕರಾಳ ರೂಪ ತಾಳುತ್ತವೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಕೆಇಬಿ ಸರ್ಕಲ್ನ ದುಸ್ಥಿತಿ ಇದು. ಇಲ್ಲಿ ಸರ್ವ ದಿಕ್ಕಿಗು ಒಂದೊಂದು ಗುಂಡಿ ಇದೆ. ವಾಹನ ಸವಾರರು ಇಲ್ಲಿ ಸ್ವಲ್ಪ ಮೈ ಮರೆತರು ಅಪಾಯ ತಪ್ಪಿದ್ದಲ್ಲ.
ಸರ್ಕಲ್ನಲ್ಲಿ ದಿಕ್ಕಿಗೊಂದು ಗುಂಡಿ
ಗುಂಡಿ 1 : ರೈಲ್ವೆ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ತೆರಳುವ ತಿರುವಿನಲ್ಲಿ ದೊಡ್ಡ ಗುಂಡಿ ಇದೆ. ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಯಿಂದ ಕೆಇಬಿ ಸರ್ಕಲ್ಗೆ ಬರುವ ರಸ್ತೆಯಲ್ಲಿ ಸಿಗ್ನಲ್ನಲ್ಲೇ ಬೃಹತ್ ಗುಂಡಿ ನಿರ್ಮಾಣವಾಗಿದೆ.
ಗುಂಡಿ 2 : ಇನ್ನು ಸರ್ಕಲ್ನ ನಡುವೆಯೇ ಒಂದು ಗುಂಡು ಬಾಯ್ತೆರೆದಿದ್ದು, ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಸವಾರರನ್ನು ಎಚ್ಚರಿಸುವ ಪ್ರಯತ್ನವಾಗಿದೆ.
ಗುಂಡಿ 3 : ಸರ್ಕಲ್ನಿಂದ ರೈಲ್ವೆ ನಿಲ್ದಾಣದ ಕಡೆಗೆ ತೆರಳುವ ರಸ್ತೆಯ ಎಡ ಭಾಗದಲ್ಲಿ ಯುಜಿಡಿ ಮುಚ್ಚಳ ಮುರಿಯುವ ಸ್ಥಿತಿಯಲ್ಲಿದೆ.
ರಾತ್ರಿ ಹೊತ್ತು ಇನ್ನೂ ಕಾರಾಳ ಸ್ಥಿತಿ
ಈ ಗುಂಡಿಗಳು ರಾತ್ರಿ ವೇಳೆ ವಾಹನ ಸವಾರರ ಪಾಲಿಗೆ ಇನ್ನಷ್ಟು ಕರಾಳವೆನಿಸುತ್ತವೆ. ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ತೆರಳವ ತಿರುವಿನಲ್ಲಿ ಬೀದಿ ದೀಪ ಉರಿಯುತ್ತಿಲ್ಲ. ಹಾಗಾಗಿ ಗುಂಡಿಗಳಿವೆ ಎಂದು ವಾಹನ ಸವಾರರಿಗೆ ತಿಳಿಯುವುದಿಲ್ಲ. ಸ್ವಲ್ಪ ಯಾಮಾರಿದರೆ ಅಪಘಾತ ನಿಶ್ಚಿತ. ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ನಿತ್ಯ ಸಂಚರಿಸುತ್ತಾರೆ. ಆದರೆ ಗುಂಡಿ ಮುಚ್ಚಿಸುವ ಪ್ರಯತ್ನವಾಗಿಲ್ಲ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಎರಡು ದಿನ ಮೆಗಾ ಕಾರು ಮೇಳ | ಪ್ರತಿಷ್ಠಿತ ಶೋ ರೂಂನಲ್ಲಿ ಉದ್ಯೋಗವಕಾಶ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200