ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿತ್ತು? ಇಲ್ಲಿವೆ ಸಾಲು ಸಾಲು ಫೋಟೊ ಸಹಿತ ಮಾಹಿತಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: RSS ಶತಮಾನೋತ್ಸವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಇವತ್ತು ವೈಭವದ ಪಥಸಂಚಲನ ನಡೆಯಿತು. ಸುಮಾರು ಐದು ಸಾವಿರ ಕಾರ್ಯಕರ್ತರು ಪಥ ಸಂಚಲನದಲ್ಲಿ (Route March) ಪಾಲ್ಗೊಂಡಿದ್ದರು.

ಕೋಟೆ ರಸ್ತೆಯ ಜೈನ್‌ ಸಮುದಾಯ ಭವನದ ಬಳಿ ಸಂಘಟನೆಯ ಧ್ವಜ ಪ್ರಮುಖ ಕೋ.ನಂ.ರವೀಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಕ್ಕೆ ನಮನ ಸಲ್ಲಿಸಿದ ಬಳಿಕ ಪಥ ಸಂಚಲನ ಆರಂಭವಾಯಿತು.

ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಶಿವಮೂರ್ತಿ ಪ್ರತಿಮೆ, ಎ.ಎ.ಸರ್ಕಲ್‌, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್‌ ಸರ್ಕಲ್‌, ಜೈಲ್‌ ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್‌ ತಲುಪಿತು. ಮೆರವಣಿಗೆ ಹಾದಿ ಉದ್ದಕ್ಕು ರಸ್ತೆಯ ಇಕ್ಕೆಲದಲ್ಲಿ ಸಾರ್ವಜನಿಕರು ನಿಂತಿದ್ದರು. ರಂಗೋಲೆ ಹಾಕಿ, ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿ ಪಥ ಸಂಚಲನವನ್ನು ಸ್ವಾಗತಿಸಿದರು.

ಇಡೀ ಪಥ ಸಂಚಲನದ ಫೋಟೊ ಆಲ್ಬಂ ಇಲ್ಲಿದೆ

rss route march
ಗಾಂಧಿ ಬಜಾರ್‌ನಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ
rss route march
ಜೈಲ್‌ ರಸ್ತೆಯಲ್ಲಿ ಸಾಗಿದ ಪಥ ಸಂಚಲನ
rss route march
ಪಥ ಸಂಚಲನದಲ್ಲಿ ಬ್ಯಾಂಡ್‌ ತಂಡ
rss route march
ಇತಿಹಾಸ ಪುರುಷರ ವೇಷ ಧರಿಸಿದ್ದ ಮಕ್ಕಳು
rss route march
ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವರಿಗೆ ಆರತಿ ಬೆಳಗಿದ ಮಹಿಳೆಯರು. ವಿವಿಧೆಡೆ ಪುಷ್ಪವೃಷ್ಟಿ ಮಾಡಲಾಯಿತು.
rss route march
ಜೈಲ್‌ ರಸ್ತೆಯಲ್ಲಿ ಘೋಷಣೆ ಕೂಗಿಸಿದ ಮಹಿಳೆ. ರಸ್ತೆಯ ಇಕ್ಕೆಲದಲ್ಲಿ ನಿಂತು ಪಥ ಸಂಚಲನ ವೀಕ್ಷಣೆ.
rss route march
ಜೈಲ್‌ ರಸ್ತೆಯ ಉದ್ದಕ್ಕು ವಿಶೇಷ ರಂಗೋಲೆ ಹಾಕಲಾಗಿತ್ತು.
rss route march
ಕಂಕುಳಲ್ಲಿ ಮಗು ಇರಿಸಿಕೊಂಡು ಪಥ ಸಂಚಲನದಲ್ಲಿ ಭಾಗವಹಿಸಿದ್ದವರಿಗೆ ಪುಪ್ಪವೃಷ್ಟಿ ಮಾಡಿದ ಮಹಿಳೆ. ಪುಷ್ಪವೃಷ್ಟಿಗೆ ಸಿದ್ಧವಾಗಿದ್ದ ಸಾರ್ವಜನಿಕರು
rss route march
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬ್ಯಾಂಡ್‌ ತಂಡ
rss route march
ಜೈಲ್‌ ರಸ್ತೆಯಲ್ಲಿ ಛತ್ರಪತಿ ಶಿವಾಜಿ, ಭಾರತ ಮಾತೆ, ಯೋಧನ ವೇಷಧಾರಿ ಮಕ್ಕಳು
rss route march
ಪಥ ಸಂಚಲನದಲ್ಲಿ ಭಾಗವಹಿಸಿದ್ದ ಸಂಸದ ರಾಘವೇಂದ್ರ
rss route march
ಗಣವೇಷದಲ್ಲಿ ಕಾಣಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಥ ಸಂಚಲನದಲ್ಲಿ ಸಂಸದ ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ
rss route march
ಪಥ ಸಂಚಲನದಲ್ಲಿ ಟ್ರಂಫೆಟ್‌, ಕೊಳಲು ನುಡಿಸುತ್ತಿರುವುದು. ಕೈ ಗಾಯವಾಗಿದ್ದರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತ
rss route march
ಜೈಲ್‌ ರಸ್ತೆಯಲ್ಲಿ ಧ್ವಜದ ಮೆರವಣಿಗೆ
rss route march
ಪಥ ಸಂಚಲನದಲ್ಲಿ ಶಾಸಕ ಎಸ್.ಎನ್.‌ಚನ್ನಬಸಪ್ಪ, ಬಿಜೆಪಿ ಮುಖಂಡ ದೀನದಯಾಳು
rss route march
ಪಥ ಸಂಚಲನದಲ್ಲಿ ಬಹುದೂರ ನಡೆಯಲಾಗದ ಮಗನನ್ನು ಹೊತ್ತು ಸಾಗಿದ ತಾಯಿ. ಪಥ ಸಂಚಲನದಲ್ಲಿ ಭಾಗವಹಿಸಿದ್ದ ಮಕ್ಕಳು
rss route march
ಪಥ ಸಂಚಲನಕ್ಕೆ ಪೊಲೀಸ್‌ ಬಂದೋಬಸ್ತ್‌. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಎಎಸ್‌ಪಿ ಕಾರ್ಯಪ್ಪ ಇದ್ದರು.

ಇದನ್ನೂ ಓದಿ » RSS ಪಥಸಂಚಲನ, ಶಿವಮೊಗ್ಗ ಸಿಟಿಯಲ್ಲಿ ಭರ್ಜರಿ ಅಲಂಕಾರ, ಸಾವಿರ ಸಾವಿರ ಕೆ.ಜಿ. ಹೂವು ಸಿದ್ಧ

Route March

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment