ಕೈದಿ ಭೇಟಿಗೆ ಜೈಲಿಗೆ ಬಂದವರೇ ಅರೆಸ್ಟ್‌, ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIMOGA NEWS, 22 SEPTEMBER 2024 : ಕೈದಿ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ವಸ್ತುವನ್ನು ಕಾರಿಡಾರ್‌ನಲ್ಲಿ ಎಸೆದಿದ್ದಾರೆ. ಇದನ್ನು ಗಮನಿಸಿದ ಜೈಲು ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸೋಗಾನೆಯಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಶೋಯಬ್‌ ಅಲಿಯಾಸ್‌ ಚೂಡಿ ಎಂಬಾತನ ಭೇಟಿಗೆ ಸೈಯದ್‌ ಸಾದತ್‌ ಮತ್ತು ತಾಹೀರ್‌ ಖಾನ್‌ ಎಂಬುವವರು ಬಂದಿದ್ದರು.

ಹಳದಿ ಟೇಪ್‌ ಸುತ್ತಿದ್ದ ವಸ್ತು ಪತ್ತೆ

ಸಂದರ್ಶಕರ ಕೊಠಡಿ ಪಕ್ಕದ ಕಾರಿಡಾರ್‌ನಲ್ಲಿ ಅನುಮಾನಾಸ್ಪದ ವಸ್ತು ಸಿಕ್ಕಿತ್ತು. ಹಳದಿ ಬಣ್ಣದ ಗಮ್‌ ಟೇಪ್‌ನಲ್ಲಿ ಸುತ್ತಿದ್ದ ವಸ್ತುವನ್ನು ಸ್ಕ್ಯಾನರ್‌ನಲ್ಲಿ ಪರಿಶೀಲಿಸಿದಾಗ ಮೊಬೈಲ್‌ ಮತ್ತು ಇತರೆ ವಸ್ತುಗಳು ಇರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಶೋಯಬ್‌ನ ಭೇಟಿಗೆ ಬಂದಿದ್ದವರು ಕೃತ್ಯ ಎಸಗಿರುವುದು ಗೊತ್ತಾಗಿದೆ.

Shimoga-Central-Jail-Building

ಕೂಡಲೆ ಇಬ್ಬರನ್ನು ವಶಕ್ಕೆ ಪಡೆದ ಕೆಎಸ್‌ಐಎಸ್‌ಎಫ್‌ ಮತ್ತು ಜೈಲು ಸಿಬ್ಬಂದಿ ಆರೋಪಿಗಳನ್ನು ತುಂಗಾ ನಗರ ಠಾಣೆಗೆ ರವಾನಿಸಿದ್ದರು. ಜೈಲು ಅಧೀಕ್ಷಕ ಡಾ. ರಂಗನಾಥ್‌ ಅವರ ದೂರಿನ ಹಿನ್ನೆಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಿಂದ ಮತ್ತೊಂದು ನಗರಕ್ಕೆ ವಿಮಾನಯಾನ, ದಿನಾಂಕ ಫಿಕ್ಸ್‌

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment