| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | 4 JUNE 2024
RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜೊಮಾಟೋ ಡಿಲೆವರಿ ಬಾಯ್ (Zomato) ಬಂಡಿ ರಂಗನಾಥ ಅಚ್ಚರಿ ಪ್ರಮಾಣದ ಮತ ಗಳಿಸಿದ್ದಾರೆ. ಇನ್ನೊಂದೆಡೆ ಅಖಾಡಕ್ಕಿಳಿದಿದ್ದ ಮತ್ತೊಬ್ಬ ಈಶ್ವರಪ್ಪ ಸಾವಿರ ಮತ ಪಡೆಯಲು ಸಾಧ್ಯವಾಗಿಲ್ಲ. ಈ ಮೂಲಕ ಶಿವಮೊಗ್ಗ ಲೋಕಸಭೆ ಚುನಾವಣೆ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ.
ಜೊಮಾಟೊ ಡಿಲೆವರಿ ಬಾಯ್ ಕಮಾಲ್
ಜೊಮಾಟೊ ಡಿಲೆವರಿ ಬಾಯ್ ಕೆಲಸ ಮಾಡುತ್ತಿರುವ ಬಂಡಿ ರಂಗನಾಥ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇವರು ತುಮಕೂರು ಜಿಲ್ಲೆಯ ಕಲ್ಲಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಮದ ನಿವಾಸಿ. ಚುನಾವಣೆಯಲ್ಲಿ ಬಂಡಿ ರಂಗನಾಥ ಹೆಚ್ಚು ಮತ ಪಡೆದ ನಾಲ್ಕನೆಯವರಾಗಿದ್ದಾರೆ. ಒಟ್ಟು 7266 ಮತ ಗಳಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಗೆ ಸಾವಿರ ಸಾವಿರ ಮತ
ವ್ಯವಸಾಯ ಮಾಡಿ ಜೀವ ಕಟ್ಟುಕೊಂಡಿರುವ ತ್ಯಾಗರ್ತಿಯ ಬೆಳಂದೂರು ನಿವಾಸಿ ರವಿಕುಮಾರ್ 4552 ಮತ ಗಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರೆ, ಬೆಂಗಳೂರು ನಾಗರಬಾವಿ ನಿವಾಸಿ ಪೂಜಾ ಅಣ್ಣಯ್ಯ 3457 ಮತ, ಬಿಎಸ್ಪಿಯ ಎ.ಡಿ.ಶಿವಪ್ಪ 2779 ಮತ, ಶಿವಮೊಗ್ಗ ವಿನೋಬನಗರ ನಿವಾಸಿ ಎನ್.ವಿ.ನವೀನ್ ಕುಮಾರ್ 1993 ಮತ ಗಳಿಸಿದ್ದಾರೆ. ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿ 1478 ಮತ ಪಡೆದಿದ್ದಾರೆ.
ಮತ್ತೊಬ್ಬ ಈಶ್ವರಪ್ಪ ಗಳಿಸಿದ್ದೆಷ್ಟು?
ಚುನಾವಣೆಯಲ್ಲಿ ಈಶ್ವರಪ್ಪ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸಿದ್ದು ಕುತೂಹಲ ಮೂಡಿಸಿತ್ತು. ಆದರೆ ಶಿಕಾರಿಪುರದ ಡಿ.ಎಸ್.ಈಶ್ವರಪ್ಪ 695 ಮತ ಗಳಿಸಲು ಮಾತ್ರ ಸಾಧ್ಯವಾಯಿತು. ಪಕ್ಷೇತರ ಅಭ್ಯರ್ಥಿಗಳಾದ ಈ.ಹೆಚ್.ನಾಯಕ 954, ಜಾನ್ ಬೆನ್ನಿ 867, ಗಣೇಶ.ಬಿ (ಬೆಳ್ಳಿ ) 747, ಕುಣಜೆ ಮಂಜುನಾಥ ಗೌಡ 683, ಕೆಆರ್ಎಸ್ ಪಕ್ಷದ ಎಸ್.ಕೆ.ಪ್ರಭು 617, ಶಿವರುದ್ರಯ್ಯ ಸ್ವಾಮಿ 599, ಇಮ್ತಿಯಾಜ್ ಅತ್ತಾರ್ 442, ಮೊಹಮ್ಮದ್ ಯುಸುಫ್ ಖಾನ್ 404, ಜಿ.ಜಯದೇವ 368, ಚಂದ್ರೇಖರ್.ಹೆಚ್.ಸಿ 357, ಶ್ರೀಪತಿ ಭಟ್ 344, ಸಂದೇಶ ಶೆಟ್ಟಿ 293, ಸುರೇಶ್ ಪೂಜಾರಿ 220 ಮತ ಪಡೆದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಠೇವಣಿ ಕಳೆದುಕೊಂಡ ಈಶ್ವರಪ್ಪ, ಏನಿದು ಠೇವಣಿ?
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
![]()