ಕನ್ನಡ ಅಧ್ಯಾಪಕ ಲವಗೆ ಪಿಹೆಚ್ಡಿ
SHIVAMOGGA LIVE NEWS | 14 JANUARY 2024
SHIMOGA : ಸಹ್ಯಾದ್ರಿ ಕಲಾ ಕಾಲೇಜು ಕನ್ನಡ ವಿಭಾಗದ ಅಧ್ಯಾಪಕ, ರಂಗಕರ್ಮಿ ಜಿ.ಆರ್.ಲವ ಮಂಡಿಸಿದ ‘ಕನ್ನಡ ನಾಟಕಗಳು : ಓದಿನ ಆಯಾಮಗಳು (ಆಯ್ದ ನಾಟಕಗಳನ್ನು ಅನುಲಕ್ಷಿಸಿ)ʼ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಹೆಚ್ಡಿ ಘೋಷಿಸಿದೆ. ಇವರಿಗೆ ಕುಪ್ಪಳಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಬಿ.ಎಂ.ಪುಟ್ಟಯ್ಯ ಮಾರ್ಗದರ್ಶನ ಮಾಡಿದ್ದರು. ಹಂಪಿಯ ವಿದ್ಯಾರಣ್ಯದಲ್ಲಿ ಇತ್ತೀಚೆಗೆ ನಡೆದ ನುಡಿಹಬ್ಬ 30ರಂದು ಉನ್ನತ ಶಿಕ್ಷಣ ಸಚಿವ ಮತ್ತು ಸಮಕುಲಾಧಿಪತಿ ಡಾ. ಎಂ.ಸಿ.ಸುಧಾಕರ್ ಪಿಹೆಚ್ಡಿ ಪ್ರದಾನ ಮಾಡಿದರು.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಒತ್ತಿ