ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಪದ್ಮಪ್ರಸಾದ್
SHIVAMOGGA LIVE NEWS | 14 JANUARY 2024
SHIMOGA : ಫೆ.1 ಮತ್ತು 2ರಂದು ನಡೆಯಲಿರುವ ಜಿಲ್ಲಾ ಮಟ್ಟದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಸ್.ಪಿ.ಪದ್ಮಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಮೂಲತಃ ಹೊಸನಗರದವರಾದ ಡಾ. ಪದ್ಮಪ್ರಸಾದ್ ಅವರು, ಸಾಹಿತಿ ಮತ್ತು ಜನಪದ ವಿದ್ವಾಂಸರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಾ.ಪದ್ಮಪ್ರಸಾದ್ ಅವರ ಹೆಸರನ್ನು ಆಯ್ಕೆ ಮಾಡಲಾಯಿತು. ಜೈನ ಸಾಹಿತ್ಯ, ಜನಪದ, ಸೃಜನಶೀಲ ಸಾಹಿತ್ಯಕ್ಕೆ ಪದ್ಮಪ್ರಸಾದ್ ಅವರು ಅಪಾರ ಕೊಡುಗೆ ನೀಡಿದ್ದಾರೆ.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಒತ್ತಿ