ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
[su_highlight background=”#cd0003″ color=”#ffffff”]ನಂಬರ್ ಗಳಲ್ಲಿ ನಮ್ಮೂರು[/su_highlight]
[su_note note_color=”#fff0c8″ text_color=”#000000″ radius=”1″]ನಾವು ಶಿವಮೊಗ್ಗ ಜಿಲ್ಲೆಯವರು ಎಂದು ಹೆಮ್ಮೆಯಿಂದ ಬೀಗಲು ನೂರಾರು ಕಾರಣಗಳಿವೆ. ನಂಬರ್ ಗಳ ಮೂಲಕ ಅವುಗಳನ್ನು ಪ್ರಸ್ತುತಪಡಿಸಿದರೆ ಇನ್ನಷ್ಟು ಉತ್ತಮ. ಇದೆ ಕಾರಣಕ್ಕೆ ನಾವು ಹೆಮ್ಮೆ ಪಡುವಂತಹ ಸಂಗತಿಗಳನ್ನು ನಂಬರ್ ಗಳ ಮೂಲಕ ತಿಳಿಸುವ ಪ್ರಯತ್ನವಿದು. ಮೊದಲ ಕಂತಿನಲ್ಲಿ ಜ್ಞಾನಪೀಠಿಗಳ ವಿಚಾರವನ್ನು ನಿಮ್ಮ ಮುಂದಿಟ್ಟಿದ್ದೇವೆ. ಜ್ಞಾನಪೀಠ ಪಡೆದ ಇಬ್ಬರು ಸಾಹಿತಿಗಳು ಶಿವಮೊಗ್ಗ ಜಿಲ್ಲೆಯವರು ಅನ್ನುವುದು ಕನ್ನಡಿಗರಾಗಿ, ಈ ಜಿಲ್ಲೆಯವರಾಗಿ ನಾವು ಹೆಮ್ಮೆ ಪಡುವ ವಿಚಾರ.[/su_note]
SHIVAMOGGA LIVE NEWS | 19 JANUARY 2023
SHIMOGA | ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಜ್ಞಾನಪೀಠವು ಒಂದು. ಸರ್ವ
ಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೂ ಕನ್ನಡದ 8 ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಈ ಪೈಕಿ ಇಬ್ಬರು ಶಿವಮೊಗ್ಗ ಜಿಲ್ಲೆಯವರು ಎಂಬುದು ವಿಶೇಷ.
ಇಬ್ಬರು ಒಂದೇ ತಾಲೂಕಿನವರು
ಕನ್ನಡ ಸಾಹಿತ್ಯಕ್ಕೆ ಮೊದಲು ಜ್ಞಾನಪೀಠ ತಂದುಕೊಟ್ಟವರು ರಾಷ್ಟ್ರಕವಿ ಕುವೆಂಪು. 1994ರಲ್ಲಿ ಸಾಹಿತಿ ಪ್ರೊ. ಯು.ಆರ್.ಅನಂತ ಮೂರ್ತಿ ಅವರಿಗೆ ಜ್ಞಾನಪೀಠ ಲಭಿಸಿತು. ಇವರಿಬ್ಬರು ತೀರ್ಥಹಳ್ಳಿಯವರು. ಇಬ್ಬರು ಜ್ಞಾನಪೀಠಿಗಳನ್ನು ಪಡೆದ ಜಿಲ್ಲೆ ಎಂಬುದು ಶಿವಮೊಗ್ಗದವರಿಗೆ ಹೆಮ್ಮೆಯ ಸಂಗತಿ.

ಕನ್ನಡಕ್ಕೆ 8 ಜ್ಞಾನಪೀಠ
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಮೊದಲ ಜ್ಞಾನಪೀಠ ಪ್ರಶಸ್ತಿ. ಕುವೆಂಪು ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕುಪ್ಪಳಿಯವರು.
ದ.ರಾ.ಬೇಂದ್ರ ಅವರ ನಾಕುತಂತಿ ಕವನ ಸಂಕಲನಕ್ಕೆ 1973ರಲ್ಲಿ ಜ್ಞಾನಪೀಠ ಲಭಿಸಿತು. ದ.ರಾ.ಬೇಂದ್ರೆ ಅವರು ಧಾರವಾಡ ಜಿಲ್ಲೆಯವರು.
ಶಿವರಾಮ ಕಾರಂತ ಅವರ ಮೂಕಜ್ಜಿಯ ಕನಸು ಕಾದಂಬರಿಗಾಗಿ 1977ರಲ್ಲಿ ಜ್ಞಾನಪೀಠ ಸಿಕ್ಕಿತು. ಅವರು ಉಡುಪಿ ಜಿಲ್ಲೆಯವರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ ಕೃತಿ ಮತ್ತು ಸಮಗ್ರ ಸಾಹಿತ್ಯಕ್ಕೆ 1983ರಲ್ಲಿ ಜ್ಞಾನಪೀಠ ದೊರೆಯಿತು. ಇವರು ಕೋಲಾರ ಜಲ್ಲೆಯವರು.
ವಿ.ಕೃ.ಗೋಕಾಕ ಅವರ ಸಮಗ್ರ ಸಾಹಿತ್ಯಕ್ಕೆ 1990ರಲ್ಲಿ ಜ್ಞಾನಪೀಠ ಸಿಕ್ಕಿತು. ವಿ.ಕೃ.ಗೋಕಾಕ ಅವರು ಹಾವೇರಿ ಜಿಲ್ಲೆಯ ಸವಣೂರಿನವರು.
![]()
ಪ್ರೊ. ಯು.ಆರ್.ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯಕ್ಕೆ 1994ರಲ್ಲಿ ಲಭಿಸಿತು. ಪ್ರೊ. ಯು.ಆರ್.ಅನಂತಮೂರ್ತಿ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೇಳಿಗೆಯವರು.
ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಲಭಿಸಿತು. ಗಿರೀಶ್ ಕಾರ್ನಾಡ್ ಅವರು ಮುಂಬೈನಲ್ಲಿ ಜನಸಿದರು. ಶಿರಸಿ, ಧಾರವಾಡದಲ್ಲಿ ಬೆಳದವರು. ಕೊನೆಯವರೆಗು ಬೆಂಗಳೂರಿನಲ್ಲಿ ಬದುಕು ನಡೆಸಿದರು.
ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಚಂದ್ರಶೇಖರ ಕಂಬಾರ ಅವರು ಬೆಳಗಾವಿ ಜಿಲ್ಲೆಯವರು.
ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?
[su_divider text=”Shivamogga Live | Whatsapp7411700200″ divider_color=”#000000″ link_color=”#000000″]
[su_animate type=”bounceInUp”][su_button url=”https://chat.whatsapp.com/Gw9Vd0MvljO9kI4k7LDRmj” target=”blank” style=”glass” background=”#0003ab” color=”#ffffff” size=”6″ radius=”0″ icon=”https://shivamoggalive.com/wp-content/uploads/2022/11/Whatspp-Logo.png”]CLICK HERE TO JOIN SHIVAMOGGA LIVE WHATSAPP GROUP[/su_button][/su_animate]
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















