ರಸ್ತೆಯಲ್ಲಿ ಬೈಕ್ ತಪಾಸಣೆ, ವೈದ್ಯಕೀಯ ಪರೀಕ್ಷೆ ಬಳಿಕ ಸವಾರ ಅರೆಸ್ಟ್, ಕವರ್ ನಲ್ಲಿದ್ದ ವಸ್ತು ಸಹಿತ ಬೈಕ್ ಸೀಜ್

one-arrest-after-ganja-found-while-bike-cheking

SHIVAMOGGA LIVE NEWS | 20 JANUARY 2023 SAGARA : ಅಬಕಾರಿ ಇಲಾಖೆ (Excise Department) ಅಧಿಕಾರಿಗಳು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದು ತಪಾಸಣೆ (checking) ನಡಸಿದಾಗ ಗಾಂಜಾ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸವಾರ ಗಾಂಜಾ ಸೇವನೆ ಮಾಡಿರುವುದು ಗೊತ್ತಾಗಿದ್ದು, ವೈದ್ಯಕೀಯ ತಪಾಸಣೆ ಬಳಿಕ ಬಂಧಿಸಿದ್ದಾರೆ. ಸೊರಬ ತಾಲೂಕು ಗಣಪತಿ ಬಂಧಿತ. ಸಾಗರ ತಾಲೂಕು ಸೂರಗುಪ್ಪ  ಬಸ್ ನಿಲ್ದಾಣದ ಬಳಿ ಗಣಪತಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಪಾಸಣೆ … Read more

ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಯತ್ನ, ಸಾಗರ ಪಟ್ಟಣ ಬಂದ್, ಹೇಗಿತ್ತು? ಏನೇನೆಲ್ಲ ಆಯ್ತು?

Sagara-Bandh-Bajarangadal-Protest-March-in-the-city.

SHIVAMOGGA LIVE NEWS |10 JANUARY 2023 ಸಾಗರ : ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಸಾಗರ ಬಂದ್ (bandh) ಬಹುತೇಕ ಯಶಸ್ವಿಯಾಗಿದೆ. ನಗರದ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಬಸ್ ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ವಾಹನ ಸಂಚಾರವು ವಿರಳವಾಗಿತ್ತು. ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ಸಮೀರ್ ಎಂಬಾತ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದ. ಈ ಘಟನೆ ಬೆನ್ನಿಗೆ ಆರೋಪಿಗಳನ್ನು ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ, ವಿಶ್ವ ಹಿಂದೂ … Read more

ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿದ್ದ ಕೇಸ್ ಗೆ ಬಿಗ್ ಟ್ವಿಸ್ಟ್

Shimoga-SP-Mithun-Kumar-About-Sagara-Incident

SHIVAMOGGA LIVE NEWS |10 JANUARY 2023 ಶಿವಮೊಗ್ಗ : ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ದಾಳಿಗೆ ಯತ್ನಿಸಿದ ಪ್ರಕರಣ (attack case) ಸಂಬಂಧ ಪ್ರಮುಖ ಆರೋಪಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯೊಬ್ಬಳನ್ನು ಚುಡಾಯಿಸಿದ್ದೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (attack case) … Read more

ಲಾರಿಗೆ ಹಿಂಬದಿಯಿಂದ ಡಿಕ್ಕಿ, ಗೌತಮಪುರಕ್ಕೆ ಹೋಗುತ್ತಿದ್ದ ಸವಾರರು ಸ್ಥಳದಲ್ಲೇ ಸಾವು

bike-collides-with-lorry-at-Anandapura-in-Sagara

SHIVAMOGGA LIVE NEWS |5 JANUARY 2023 ANANDAPURA : ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿ ಇಬ್ಬರು ಯುವಕರು (youths) ಸ್ಥಳದಲ್ಲೆ ಸವಾನ್ನಪ್ಪಿದ್ದಾರೆ. ಆನಂದಪುರ ಸಮೀಪದ ಗೌತಮಪುರದ ತಮಿಳು ಕ್ಯಾಂಪ್ ನ ಪ್ರದೀಪ್ (28) ಮತ್ತು ಆತನ ಸಂಬಂಧ ತರಲಘಟ್ಟದ ದಯಾನಂದ (32) ಮೃತರು. ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು (youths) ಸ್ಥಳದಲ್ಲೇ … Read more

ಸಾಗರದಲ್ಲಿ ಮನೆಗೆ ಬೆಂಕಿ, ಧಗಧಗ ಹೊತ್ತಿ ಉರಿದ ವಸ್ತುಗಳು, ಅಗ್ನಿಶಾಮಕ ಸಿಬ್ಬಂದಿ, ಯುವಕರ ಹರಸಾಹಸ

Fire-at-sagara-house-in-sn-market

SHIVAMOGGA LIVE NEWS |2 JANUARY 2023 ಸಾಗರ : ಮನೆಯೊಂದರಲ್ಲಿ ಅಗ್ನಿ (fire at house) ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ಸ್ಥಳೀಯರು ಮತ್ತು ಆಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಘಟನೆಯಿಂದಾಗಿ ಸಾಗರ – ಸಿಗಂದೂರು ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಾಗರದ ಮಾರ್ಕೆಟ್ ರಸ್ತೆಯ ಶಿವಪ್ಪ ನಾಯಕ ಸರ್ಕಲ್ ಬಳಿ ಗಣೇಶ್ ಎಂಬುವವರ ಮನೆಯಲ್ಲಿ ಬೆಂಕಿ (fire at house) ಹೊತ್ತುಕೊಂಡಿದೆ. ಸುತ್ತಮುತ್ತಲು ದಟ್ಟ ಹೊಗೆ ಆವರಿಸಿಕೊಂಡಿತ್ತು. ವಿಚಾರ ತಿಳಿಯುತ್ತಿದ್ದಂತೆ … Read more

ಹೊಸ ವರ್ಷ, ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಜನಸಾಗರ, ಇಲ್ಲಿದೆ ಹೆಚ್ಚು ಜನ ಭೇಟಿ ನೀಡಿದ ಟಾಪ್ 3 ಟೂರಿಸ್ಟ್ ಸ್ಪಾಟ್

Sigandur-Launch-and-jog-falls

SHIVAMOGGA LIVE NEWS |2 JANUARY 2023 ಶಿವಮೊಗ್ಗ : ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ (tourist spot) ಜನ ಸಾಗರವೆ ಸೇರಿತ್ತು. ವೀಕೆಂಡ್ ಹೊತ್ತಲ್ಲೆ ನ್ಯೂ ಇಯರ್ ಆಚರಣೆ ಇದ್ದಿದ್ದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಾರಿ ಸಂಖ್ಯೆಯ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಿದ್ದರು. ವರ್ಷದ ಮೊದಲ ದಿನ ತೀರ್ಥ ಕ್ಷೇತ್ರ ದರ್ಶನಕ್ಕೆಂದು ಹಲವರು ಆಗಮಿಸಿದ್ದರು. ಮೊದಲ ದಿನ ರಮಣೀಯ ತಾಣಗಳನ್ನು (tourist spot) ಕಣ್ತುಂಬಿಕೊಂಡು ಖುಷಿ ಪಡೋಣ ಅಂದುಕೊಂಡು ಬಂದವರ ವರ್ಗವು ಇತ್ತು. … Read more

ಗುಂಡಿಗೆ ಬಿದ್ದ ಕಾರು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಅಧಿಕಾರಿಗಳ ವಿರುದ್ಧ ಎಂಎಲ್ಎ ಗರಂ

Car-Accident-at-Shimoga-road-in-Sagara

SHIVAMOGGA LIVE NEWS |31 DECEMBER 2022 ಸಾಗರ : ರಸ್ತೆ ಅಗಲೀಕರಣ ಕಾಮಗಾರಿಯ ಗುಂಡಿಗೆ (road work) ಬಿದ್ದು ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕಗಳಿಲ್ಲದಿರುವುದು ಘಟನೆ ಕಾರಣ ಎಂದು ಆರೋಪಿಸಲಾಗಿದೆ. ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಕಾರು ರಸ್ತೆ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗೆ (road work) ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ – ರೈಲು ಪ್ರಯಾಣಿಕರಿಗೆ ಗುಡ್ … Read more

ಮದುವೆಯಾಗಿ ಏಳು ತಿಂಗಳು, ಗಂಡನ ಮನೆಯಲ್ಲಿ ಗೃಹಿಣಿ ನೇಣಿಗೆ ಶರಣು

Suicide-Hanging-General

SHIVAMOGGA LIVE NEWS | 30 DECEMBER 2022 ಸಾಗರ : ಮದುವೆಯಾಗಿ 7 ತಿಂಗಳು ಕಳೆಯುವುದರಲ್ಲಿ ಗೃಹಿಣಿಯೊಬ್ಬರು (house wife) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನೇಣು ಬಿಗಿದ ಸ್ಥತಿಯಲ್ಲಿ ಗೃಹಿಣಿ ಪತ್ತೆಯಾಗಿದ್ದಾರೆ. ಸಾಗರ ತಾಲೂಕು ದಿಗಟೆಕೊಪ್ಪ ಗ್ರಾಮದ ಸುಶ್ಮಿತಾ (23) ನೇಣಿಗೆ ಶರಣಾದ ಗೃಹಿಣಿ (house wife). ಪತಿ ಈಶ್ವರ್ ಮತ್ತು ಆತನ ತಾಯಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾಧ್ವಿ … Read more

ಗೌತಮಪುರ ಬಳಿ ಬೈಕ್ ಸ್ಕಿಡ್, ಗಂಭೀರ ಗಾಯಗೊಂಡಿದ್ದ ಸವಾರ ಸಾವು

Anandapura Sagara Graphics

SHIVAMOGGA LIVE NEWS | 30 DECEMBER 2022 ಆನಂದಪುರ : ಬೈಕ್ ಸ್ಕಿಡ್ (skid) ಆಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಭೈರಾಪುರದ ದಾನಪ್ಪ (41) ಮೃತ ದುರ್ದೈವಿ. ಬುಧವಾರ ರಾತ್ರಿ ಶಿಕಾರಿಪುರ ಸಂಪರ್ಕದ ಕೆಶಿಪ್ ಹೆದ್ದಾರಿಯಲ್ಲಿ ಗೌತಮಪುರದ ಪೀರನಕಣಿವೆ ಬಳಿ ಬೈಕ್ ಸ್ಕಿಡ್ (skid) ಆಗಿ ದಾನಪ್ಪ ಬಿದ್ದು ಗಾಯಗೊಂಡಿದ್ದರು. ಇದನ್ನೂ ಓದಿ – ಬುಕ್ ಮಾಡಿದ ಸೀಟ್ ಬಿಟ್ಟು ಮತ್ತೊಂದು ಸೀಟ್ ಕೇಳಿದ ಪ್ರಯಾಣಿಕ, ಕೊಡದಿದ್ದಕ್ಕೆ ರಂಪಾಟ, ಹಲ್ಲೆ … Read more

ಜೋಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಬೆಂಗಳೂರು ಕಡೆ ಹೊರಟಿದ್ದ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ

Head-on-collision-between-buses-in-anandapura-in-sagara

SHIVAMOGGA LIVE NEWS |29 DECEMBER 2022 ಸಾಗರ : ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ ಮುಖಾಮುಖಿ (head on) ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ ಘಟನೆ (head on) ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ ಬಸ್ಸು ಸಾಗರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಖಾಸಗಿ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳಿದ್ದರು. ಇವರು ಬೆಂಗಳೂರಿನಿಂದ ಜೋಗ ವೀಕ್ಷಣೆಗೆ ತೆರಳುತ್ತಿದ್ದರು. ಇದನ್ನೂ ಓದಿ – ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಟಿಪ್ಪರ್ ಲಾರಿ … Read more