ಆನಂದಪುರ ಸಮೀಪ ಆಕಸ್ಮಿಕ ಬೆಂಕಿಗೆ ಮನೆ ಹಾನಿ, ವಸ್ತುಗಳು ಆಹುತಿ

MLA-Beluru-Gopalakrishna-visit-house-near-gouthamapura.

ಸಾಗರ : ಆಕಸ್ಮಿಕ ಬೆಂಕಿಗೆ ಮನೆಯೊಂದು (house) ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್‌ ಕುಟುಂಬದವರು ಪಾರಾಗಿದ್ದು, ಗೃಹೋಪಯೋಗಿ ವಸ್ತುಗಳು ಆಹುತಿಯಾಗಿವೆ. ವಿಷಯ ತಿಳಿದು ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಕುಟುಂಬಕ್ಕೆ ವೈಯಕ್ತಿಕವಾಗಿ ನೆರವಾದರು. ಸಾಗರ ತಾಲೂಕು ಆನಂದಪುರ ಸಮೀಪದ ಗೌತಮಪುರದ ಸರಸ್ವತಿ ಮಂಜಪ್ಪ ಎಂಬುವವರ ಮನೆಯಲ್ಲಿ ಸೋಮವಾರ ಬೆಳಗಿನ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ಕೂಡಲೆ ಹೊರ ಬಂದಿದ್ದು ಅದೃಷ್ಟವಶಾತ್‌ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು, ಜೀವನ ನಿರ್ವಹಣೆಗೆ ಇದ್ದ ಟೈಲರಿಂಗ್‌ ಮೆಷಿನ್‌ ಆಹುತಿಯಾಗಿವೆ. … Read more

ಕಾರ್ಗಲ್‌, ಶಿರಾಳಕೊಪ್ಪದಲ್ಲಿ ATMನಿಂದ ಹಣ ಬಿಡಿಸಿ ಮನೆಗೆ ಮರಳಿದ ಇಬ್ಬರಿಗೆ ಆಮೇಲೆ ಕಾದಿತ್ತು ಶಾಕ್‌

crime name image

SHIVAMOGGA LIVE NEWS, 8 FEBRUARY 2025 ಸಾಗರ / ಶಿರಾಳಕೊಪ್ಪ : ATM ಕೇಂದ್ರದಲ್ಲಿ ಸಹಾಯ ಹಸ್ತ ಚಾಚಿ, ವಂಚಿಸುತ್ತಿದ್ದ ಖದೀಮರು ತಮ್ಮ ಕಾರ್ಯಾಚರಣೆಯನ್ನು ಶಿವಮೊಗ್ಗ ಸಿಟಿಗಷ್ಟೆ ಸೀಮಿತಗೊಳಿಸಿಲ್ಲ. ಈಗ ಕಾರ್ಗಲ್‌ ಮತ್ತು ಶಿರಾಳಕೊಪ್ಪ ಠಾಣೆಗಳಲ್ಲು ಪ್ರಕರಣ ದಾಖಲಾಗಿದೆ. ಎಟಿಎಂನಿಂದ ಹಣ ಬಿಡಿಸಲು ಬರುವವರಿಗೆ ಅಪರಿಚಿತರು ಸಹಾಯ ಮಾಡುವವರಂತೆ ನಟಿಸುತ್ತಾರೆ. ಅವರ ಎಟಿಎಂ ಕಾರ್ಡ್‌ ಪಡೆದು, ಪಾಸ್‌ ವರ್ಡ್‌ ತಿಳಿದು, ಬಳಿಕ ಎಟಿಎಂ ಕಾರ್ಡ್‌ ಅದಲು ಬದಲು ಮಾಡಿಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದವು. … Read more

ಸಾಗುವಾನಿ ಮರ ಕಡಿದವರ ಜೊತೆ ಶಾಮೀಲಾಗಿದ್ದ ಮೂರು ಅರಣ್ಯಾಧಿಕಾರಿಗಳು ಅಮಾನತು

Sagara-News-Update.

SHIVAMOGGA LIVE NEWS, 17 JANUARY 2025 ಸಾಗರ : ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದವರೊಂದಿಗೆ ಶಾಮೀಲಾಗಿರುವ ಆರೋಪದ ಮೇರೆಗೆ ಉಳ್ಳೂರು ಉಪವಲಯ ಅರಣ್ಯಾಧಿಕಾರಿ ಸುಂದರಮೂರ್ತಿ, ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್ ಅವರನ್ನು ಅಮಾನುತು (Suspended) ಮಾಡಲಾಗಿದೆ. ತಾಲ್ಲೂಕಿನ ಕಾಸ್ಪಾಡಿ ಗ್ರಾಮದ ಸ.ನಂ.4 ರಲ್ಲಿರುವ ಮಳಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳ ಕಡಿತಲೆ ಮಾಡಲಾಗಿತ್ತು. ಉಳ್ಳೂರಿನ ಪ್ರೀತಮ್ ಗೌಡ ಎಂಬುವವರು ಸಾಗುವಾನಿ ಮರಗಳ ಅಕ್ರಮ ಕಡಿತಲೆಯಲ್ಲಿ ಭಾಗಿಯಾಗಿದ್ದು, ಅವರ ಕಾನೂನು ಬಾಹಿರ ಕೃತ್ಯಕ್ಕೆ … Read more

ಹಿಂದೂ ಕಾರ್ಯಕರ್ತರ ಮಾಹಿತಿ, ಆಟೊ ಮೇಲೆ ಪೊಲೀಸ್‌ ದಾಳಿ, ಮುಂದೇನಾಯ್ತು?

Sagara-News-Update.

SHIVAMOGGA LIVE NEWS, 17 JANUARY 2025 ಸಾಗರ : ನಗರದ ಸೊರಬ ರಸ್ತೆಯ ಗಡದಯ್ಯ ಲೇಔಟ್ ಬಳಿ ಆಟೊದಲ್ಲಿ (Auto) ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡುತ್ತಿರುವುದನ್ನು ನಗರ ಠಾಣೆ ಪೊಲೀಸರು ಬುಧವಾರ ಪತ್ತೆ ಹಚ್ಚಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆಟೊ ಸಮೇತ 84 ಕೆ.ಜಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ. ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹಿಂದು ಜಾಗರಣಾ ವೇದಿಕೆಯ ಕೆ.ಎಸ್.ಸುಧೀಂದ್ರ, … Read more

ತ್ಯಾಗರ್ತಿ ಬಳಿ 13 ವರ್ಷದ ಬಾಲಕನ ಸಮಯ ಪ್ರಜ್ಞೆಗೆ ಉಳಿಯಿತು ಚಾಲಕನ ಜೀವ, ಆಗಿದ್ದೇನು?

tyagarthi-boy-madhu-rescues-a-driver.

SHIVAMOGGA LIVE NEWS, 16 JANUARY 2025 ಸಾಗರ : ಹುಲ್ಲು ಪಿಂಡಿ ಕಟ್ಟುವ ಯಂತ್ರದ (Machine) ಬಾಯಿಗೆ ಸಿಲುಕಿದ್ದ ಚಾಲಕನನ್ನು 13 ವರ್ಷದ ಬಾಲಕ ರಕ್ಷಿಸಿದ್ದು, ಆತನ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ತ್ಯಾಗರ್ತಿ ಸಮೀಪದ ಬಸವನಹೊಂಡ ಗ್ರಾಮದ ಕಲ್ಕೆರೆ ಗ್ರಾಮದ ರಾಮಚಂದ್ರ ಅವರ ಮನೆಯಲ್ಲಿ ಶಿಕಾರಿಪುರ ಮೂಲದ ಮದನ (28) ಯಂತ್ರದ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ರಾಮಚಂದ್ರ ಅವರ ಪುತ್ರ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮಧು ಅವರ … Read more

ಸಾವಿರ ಮೂಟೆ ಸಿಮೆಂಟ್‌ ಆರ್ಡರ್‌ ಮಾಡಿದ್ದ ಗುತ್ತಿಗೆದಾರನಿಗೆ ಕೊನೆಗೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

SHIVAMOGGA LIVE NEWS | 9 JANUARY 2025 ಸಾಗರ : ಜೆಎಸ್‌ಡಬ್ಲು ಸಿಮೆಂಟ್‌ ಕಂಪನಿಯ (Cement) ಹೆಸರು ದುರ್ಬಳಕೆ ಮಾಡಿಕೊಂಡು ಗುತ್ತಿಗೆದಾರರೊಬ್ಬರಿಗೆ (ಹೆಸರು ಗೌಪ್ಯ) 3 ಲಕ್ಷ ರೂ. ವಂಚಿಸಲಾಗಿದೆ. ಸಾವಿರ ಚೀಲ ಸಿಮೆಂಟ್‌ ಅಗತ್ಯವಿದ್ದರಿಂದ ಆನ್‌ಲೈನ್‌ನಲ್ಲಿ ಜೆಎಸ್‌ಡಬ್ಲು ಸಿಮೆಂಟ್‌ ಕಂಪನಿಯ ಮೊಬೈಲ್‌ ನಂಬರ್‌ ಹುಡುಕಿದ್ದರು. ಇದನ್ನೂ ಓದಿ » ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ ಸ್ವಲ್ಪ ಸಮಯದ ಬಳಿಕ ಗುತ್ತಿಗೆದಾರನ ಮೊಬೈಲ್‌ಗೆ ಕರೆ ಬಂದಿದ್ದು ಮಾತನಾಡಿದ ವ್ಯಕ್ತಿ, … Read more

ನಾ.ಡಿಸೋಜ ಅಂತ್ಯಕ್ರಿಯೆ ಕುರಿತು ಪುತ್ರನ ಹೇಳಿಕೆ, ಇಲ್ಲಿದೆ ವಿಡಿಯೋ

na-dsouza-son-naveen-na-dsouza-at-father-muller-hospital

SHIVAMOGGA LIVE NEWS, 5 JANUARY 2024 ಮಂಗಳೂರು : ಹಿರಿಯ ಸಾಹಿತಿ ಡಾ. ನಾ.ಡಿಸೋಜ ಪುತ್ರ ನವೀನ್‌ ನಾ.ಡಿಸೋಜ ಅವರು ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆ ನೀಡಿದ್ದಾರೆ. ನಾ.ಡಿಸೋಜ ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ (Last Rites) ಕುರಿತು ನವೀನ್‌ ನಾ.ಡಿಸೋಜ ತಿಳಿಸಿದ್ದಾರೆ. ನವೀನ್‌ ಅವರು ಹೇಳಿದ್ದೇನು? ಇಲ್ಲಿದೆ ವಿಡಿಯೋ

ನಾ.ಡಿಸೋಜ ನಿಧನಕ್ಕೆ ಬೇಳೂರು ಸಂತಾಪ, ಶಾಸಕರು ಹೇಳಿದ್ದೇನು?

Na-dsouza-no-more

SHIVAMOGGA LIVE NEWS, 3 JANUARY 2024 ಸಾಗರ : ಹಿರಿಯ ಸಾಹಿತಿ ಡಾ. ನಾ.ಡಿಸೋಜ ನಿಧನಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಂತಾಪ (condolence) ಸೂಚಿಸಿದ್ದಾರೆ. ನಾ.ಡಿಸೋಜ ಅವರ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ನಾ.ಡಿಸೋಜ ಅವರದ್ದು ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಾ.ಡಿಸೋಜ ಅವರ ಕೊಡುಗೆ ಅನನ್ಯವಾದದ್ದು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ … Read more

ನಾ. ಡಿಸೋಜ ಅಂತಿಮ ದರ್ಶನದ ಸಮಯ ಪ್ರಕಟಿಸಿದ ಪುತ್ರ

na-dsouza-last-darshana-to-be-held-at-sagara.

SHIVAMOGGA LIVE NEWS, 3 JANUARY 2024 ಸಾಗರ : ಹಿರಿಯ ಸಾಹಿತಿ ಡಾ. ನಾ.ಡಿಸೋಜ (87) ಅವರು ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಇಂದು ರಾತ್ರಿ 7.50ರ ಹೊತ್ತಿಗೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಮಧ್ಯಾಹ್ನದ ಬಳಿಕ ಸಾಗರದ ಸ್ವಗೃಹದಲ್ಲಿ ಡಾ. ನಾ.ಡಿಸೋಜ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿದೆ ಎಂದು ಅವರ ಪುತ್ರ ನವೀನ್‌ ಡಿಸೋಜ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಪಾಲಿಕೆ ಸ್ಥಬ್ಧ, ಕಚೇರಿಗಳು … Read more

BREAKING NEWS – ಹಿರಿಯ ಸಾಹಿತಿ ನಾ.ಡಿಸೋಜ ಇನ್ನಿಲ್ಲ

Na-dsouza-no-more

SHIVAMOGGA LIVE NEWS, 3 JANUARY 2024 ಸಾಗರ : ಹಿರಿಯ ಸಾಹಿತಿ ನಾ.ಡಿಸೋಜ ಅವರ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಾ.ಡಿಸೋಜ ಅವರ ಪುತ್ರ ನವೀನ್‌ ಡಿಸೋಜ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಂದೆಯ ನಿಧನದ ಸುದ್ದಿಯನ್ನು ಪ್ರಕಟಿಸಿದ್ದಾರೆ.