ಶಿವಮೊಗ್ಗದಲ್ಲಿ ರೈಲು ಹತ್ತುವ ಭರದಲ್ಲಿ ಬ್ಯಾಗ್‌ ಬಿಟ್ಟು ಹೋದ ಪ್ರಯಾಣಿಕ

-Left-over-luggage bag-found-on-railway-track-in-Shimoga.

ಶಿವಮೊಗ್ಗ: ರೈಲು ಹತ್ತುವ ಭರದಲ್ಲಿ ಪ್ರಯಾಣಿಕರೊಬ್ಬರು ಶಿವಮೊಗ್ಗ ನಿಲ್ದಾಣದ ಪ್ಲಾಟ್‌ಫಾರಂನಲ್ಲೇ ಮರೆತು ಹೋಗಿದ್ದ ಬ್ಯಾಗನ್ನು (Luggage Bag) ರೈಲ್ವೆ ಪೊಲೀಸ್‌ ರಕ್ಷಿಸಿದ್ದಾರೆ. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್‌ ಒಪ್ಪಿಸಿದ್ದಾರೆ. ಸೆ.28ರ ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಹತ್ತುವಾಗ ಶಿವಮೊಗ್ಗದ ನಾಗರಾಜ್‌ ಎಂಬುವವರು ಬ್ಯಾಗ್‌ ಮರೆತು ಹೋಗಿದ್ದರು. ಪ್ಲಾಟ್‌ಫಾರಂನಲ್ಲಿ ಭದ್ರತಾ ಜವಾಬ್ದಾರಿ ನಿಭಾಯಿಸುತ್ತಿದ್ದ ರೈಲ್ವೆ ಪೊಲೀಸ್‌ ಸಿಬ್ಬಂದಿ ಚಂದ್ರಪ್ಪ ಎಂಬುವವರು ಬ್ಯಾಗ್‌ ವಶಕ್ಕೆ ಪಡೆದಿದ್ದರು. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್‌ ಒಪ್ಪಿಸಿದ್ದಾರೆ. ಬ್ಯಾಗಿನಲ್ಲಿ ₹18,000 ಮೌಲ್ಯದ ಕಾಲು ಗೆಜ್ಜೆ … Read more

ಈ ದಿನದ ಪಂಚಾಂಗ | 30 ಸೆಪ್ಟೆಂಬರ್ 2025 |ಇವತ್ತು ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಮಂಗಳವಾರ, 30 ಸೆಪ್ಟೆಂಬರ್ 2025 – ಅಷ್ಟಮಿ – ದುರ್ಗಾಷ್ಟಮಿ ಸೂರ್ಯೋದಯ : 6.17 am ಸೂರ್ಯಾಸ್ತ : 6.18 pm ನಕ್ಷತ್ರ : ಪೂರ್ವಾಷಾಢ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.17ರವರೆಗೆ ಅಭಿಜಿತ್‌ ಬೆಳಗ್ಗೆ 11.54 ರಿಂದ 12.42ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.18 ರಿಂದ 3.06ರವರಗೆ ಗೋಧೂಳಿ ಮುಹೂರ್ತ ಸಂಜೆ 6.18 ರಿಂದ 6.42ರವರೆಗೆ … Read more

ಬಾರಂದೂರಿನಲ್ಲಿ ಡಿಸಿಸಿ ಬ್ಯಾಂಕ್‌ ಶಾಖೆ ಆರಂಭ, ಇನ್ನೆರಡು ಕಡೆ ಬ್ರ್ಯಾಂಚ್‌ ಆರಂಭದ ದಿನಾಂಕ ಪ್ರಕಟ

Shimoga-DCC-Bank-Board

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 32ನೇ ಶಾಖೆಯನ್ನು ಭದ್ರಾವತಿ ತಾಲೂಕು ಬಾರಂದೂರಿನಲ್ಲಿ ಸೆ.25ರಂದು ಆರಂಭಿಸಲಾಯಿತು. ಸೆ.29ರಂದು ಹೊಸನಗರ ತಾಲೂಕು ನಗರದ ಚಿಕ್ಕಪೇಟೆಯಿಲ್ಲಿ, ಅ.6ರಂದು ಸಾಗರ ತಾಲೂಕು ತ್ಯಾಗರ್ತಿಯಲ್ಲಿ ಶಾಖೆಗಳನ್ನು ಉದ್ಘಾಟಿಸಲಾಗುತ್ತದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.‌ಎಂ.ಮಂಜುನಾಥ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭದ್ರಾವತಿ, ಹೊಸನಗರ, ಸಾಗರ ತಾಲೂಕಿನ ರೈತರು ಮತ್ತು ಸಾರ್ವಜನಿಕರ ಬೇಡಿಕೆ ಹಿನ್ನೆಲೆ ಕ್ರಮವಾಗಿ ಈ ಮೂರು ಶಾಖೆಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹೇಗಿತ್ತು ನಾಟಕ? … Read more

ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹೇಗಿತ್ತು ನಾಟಕ?

270925-street-drama-in-Shimog-dasara.webp

ಶಿವಮೊಗ್ಗ: ರಂಗ ದಸರಾದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಹಲವು ಲಾವಣಿ ಮತ್ತು ಜನಪದ ಕಥೆ ಆಧಾರಿತ ಸ್ವಾತಂತ್ರ್ಯ ಹೋರಾಟದ ‘ಹಲಗಲಿ’ ಬೀದಿ ನಾಟಕ (Street Drama) ಪ್ರದರ್ಶಿಸಿದರು. ಬೀದಿ ನಾಟಕ ಪ್ರದರ್ಶನವನ್ನು ಆ‌ರ್ ಟಿಒ ಕಚೇರಿ ರಸ್ತೆಯಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉದ್ಘಾಟಿಸಿದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌, ನಾಟಕದ ನಿರ್ದೇಶಕ ಚಂದನ್‌ ನೀನಾಸಂ ಸೇರಿ ಹಲವರು ಇದ್ದರು. ವಿನೋಬನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಎಟಿಎನ್‌ಸಿ ಕಾಲೇಜು, ಆರ್‌ಟಿಒ … Read more

ಶಿವಮೊಗ್ಗ ದಸರಾ ಆನೆ ತಂಗಿರುವ ಜಾಗದ ಸುತ್ತಲು ಶೀಟ್‌, ನಾಗರಿಕರಿಗೆ ನಿರಾಸೆ

Dasara-Elephant-Sheets-around-in-shimoga-city

ದಸರಾ ಸುದ್ದಿ: ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು (Elephants) ವೀಕ್ಷಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆನೆಗಳು ತಂಗುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಕಳೆದ ವರ್ಷ ಆನೆಗಳನ್ನು ವೀಕ್ಷಿಸಲು ಬಂದ ಕೆಲವರು ಅವುಗಳತ್ತ ಕಲ್ಲು, ಮಣ್ಣು ತೂರಿದ್ದರು. ಕಬ್ಬು ಎಸೆದಿದ್ದಿರು. ಇದರಿಂದ ಆನೆಗಳು ರೊಚ್ಚಿಗೇಳುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆನೆಗಳು ಉಳಿದಿರುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಇನ್ನು, ಆನೆ ನೋಡಲು ನಗರದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಮಕ್ಕಳನ್ನು ಆನೆ ತೋರಿಸಿ ಖುಷಿ … Read more

ಫ್ಯಾನಿಗೆ ನೇಣು ಬಿಗಿದುಕೊಳ್ಳಲು ರೆಡಿಯಾಗಿದ್ದ ವ್ಯಕ್ತಿ, ಅಷ್ಟರಲ್ಲಿ ಮನೆಗೆ ಬಂದರು ಪೊಲೀಸ್‌, ಆಗಿದ್ದೇನು?

260925 Police Rescued at person at Alkola

ಶಿವಮೊಗ್ಗ: ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ (Protected). ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ಮನೆಯೊಂದರಲ್ಲಿ ಘಟನೆಯಾಗಿದೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳುವುದಾಗಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್‌ನಲ್ಲಿ ತಿಳಿಸಿದ್ದರು. ಈ ಕುರಿತು ಪೊಲೀಸರಿಗೆ ವಿಷಯ ತಿಳಿದಿದ್ದು 112 ಇಆರ್‌ಎಸ್‌ಎಸ್‌ ವಾಹನದ ಸಿಬ್ಬಂದಿ ಜಗದೀಶ್‌, ಚಾಲಕ ಮಂಜುನಾಥ್‌ ಕೂಡಲೆ ಮನೆಗೆ ದೌಡಾಯಿಸಿದರು. ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಮನವೊಲಿಸಿ ಜೀವ ರಕ್ಷಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು, … Read more

ಆಯನೂರು, ಕುಂಸಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೆ.27ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ಆಯನೂರು ಗ್ರಾಮದ ವಿದ್ಯುತ್ (Power Cut) ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ತುರ್ತು ಕಾಮಗಾರಿ ನಿರ್ವಹಣೆ ಹಿನ್ನೆಲೆ ಸೆ.27 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ಆಯನೂರು, ಮಂಡಘಟ್ಟ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಮೈಸವಳ್ಳಿ, ಸೇವಾಲಾಲ್ ನಗರ, ವೀರಣ್ಣನಬೆನವಳ್ಳಿ, ಚನ್ನಹಳ್ಳಿ, ಇಟ್ಟಿಗೇಹಳ್ಳಿ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕುಂಸಿ ವ್ಯಾಪ್ತಿಯಲ್ಲಿ ಕರೆಂಟ್‌ ಇರಲ್ಲ ಕುಂಸಿ ಗ್ರಾಮದ … Read more

ವಿಶ್ವ ಹೃದಯ ದಿನಕ್ಕೆ ಶಿವಮೊಗ್ಗದಲ್ಲಿ ವಾಕಥಾನ್‌, ಯಾವಾಗ? ಯಾವ ಮಾರ್ಗದಲ್ಲಿ ನಡೆಯಲಿದೆ?

Sahyadri-Narayana-Multispeciality-hospital-NH-Hospital.

ಶಿವಮೊಗ್ಗ: ವಿಶ್ವ ಹೃದಯ ದಿನದ ಅಂಗವಾಗಿ ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೆ. 28ರಂದು ಭಾನುವಾರ ವಾಕಥಾನ್‌ (Walkathon) ಹಮ್ಮಿಕೊಂಡಿದೆ.  ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಈ ವಾಕಥಾನ್‌ ಅನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ನೆಹರು ಮೈದಾನದಲ್ಲಿ ಬೆಳಿಗ್ಗೆ 7 ಗಂಟೆಗೆ ಉದ್ಘಾಟಿಸಲಿದ್ದಾರೆ.  ಜಾಗೃತಿ ಜಾಥಾ ನೆಹರು ಮೈದಾನದಿಂದ ಮಹಾವೀರ ಸರ್ಕಲ್‌, ಗೋಪಿ ಸರ್ಕಲ್‌, ಅಮೀರ ಅಹ್ಮದ್‌ ಸರ್ಕಲ್‌ ಮಾರ್ಗವಾಗಿ ನೆಹರೂ ರಸ್ತೆ, ಗೋಪಿ ಸರ್ಕಲ್‌, ಜೈಲ್‌ ಸರ್ಕಲ್‌, ಮಹಾವೀರ ಸರ್ಕಲ್‌ ತಲುಪಿ ತದನಂತರ … Read more

ಕುರುಬರನ್ನು ಎಸ್‌.ಟಿಗೆ ಸೇರಿಸಬೇಡಿ, ಶಿವಮೊಗ್ಗದಲ್ಲಿ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

Nayaka-Community-Protest-in-Shimoga.

ಶಿವಮೊಗ್ಗ: ಕುರುಬರು ಸೇರಿದಂತೆ ಬೇರೆ ಸಮುದಾಯದವರನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಜಿಲ್ಲಾ ನಾಯಕ ವಾಲ್ಮೀಕಿ (Valmiki) ಸಂಘದ ನೇತೃತ್ವದಲ್ಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.  ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಗೆ ಅವರಿಗೆ ಮನವಿ ಸಲ್ಲಿಸಿದರು. ವಾಲ್ಮೀಕಿ ಸಮುದಾಯದ ಡಿಮಾಂಡ್‌ ಏನು? ಹಿಂದುಳಿದ ವರ್ಗಗಳ ಪ್ರವರ್ಗ 1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕೋಲಿ ಜಾತಿಯವರಿಗೆ ನಾಯಕ … Read more

ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು, ಇದಕ್ಕಿದೆ ಎರಡು ಕಾರಣ, ಏನದು?

Sakrebyle-Elephant-Practise-for-dasara-in-Shimoga-city

ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇದಕ್ಕಾಗಿ ಸಕ್ರೆಬೈಲಿನ ಮೂರು ಆನೆಗಳು (Elephants) ಈಗಾಗಲೇ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು, ಎರಡು ಸುತ್ತು ತಾಲೀಮು ನಡೆಸಿವೆ. ಸಕ್ರೆಬೈಲು ಬಿಡಾರದ ಸಾಗರ್‌, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿವೆ. ಪ್ರತಿ ವರ್ಷದಂತೆ ಈ ಬಾರಿಯು ಸಾಗರ್‌ ಆನೆಯೆ ಅಂಬಾರ ಹೊರಲಿದ್ದಾನೆ. ಎರಡು ಬಾರಿ ತಾಲೀಮು, ಕಾರಣವೇನು? ಜಂಬೂ ಸವಾರಿಯ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು ನಡೆಸಲಾಗುತ್ತಿದೆ. ವಾಸವಿ ಶಾಲೆ ಆವರಣದಿಂದ … Read more