SHIMOGA | ನವುಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆಯಿಂದ ಸಾಲು ಸಾಲು ಕ್ರಿಕೆಟ್ ಪಂದ್ಯ, ಯಾವೆಲ್ಲ ಪಂದ್ಯಾವಳಿ ನಡೆಯುತ್ತೆ ಗೊತ್ತಾ?

KSCA Stadium Navale General Image 1

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ನವುಲೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆಯಿಂದ ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗಲಿದೆ. ಅಂಡರ್ 19, ಅಂಡರ್ 23 ಪಂದ್ಯಾವಳಿ ಮತ್ತು ರಣಜಿ ಮ್ಯಾಚ್’ಗಳು ಒಂದರ ಹಿಂದೆ ಒಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್’ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಅವರು, ಶಿವಮೊಗ್ಗ ಸ್ಟೇಡಿಯಂನಲ್ಲಿ ನಿರಂತರವಾಗಿ ಪಂದ್ಯಾವಳಿ ನಡೆಯಲಿದೆ ಎಂದರು. ಯಾವ್ಯಾವ ಪಂದ್ಯ ಯಾವಾಗ ನಡೆಯುತ್ತೆ? ನ.29 ರಿಂದ ಡಿ.2ರವರೆಗೆ ಕರ್ನಾಟಕ ವರ್ಸಸ್ ಗುಜರಾತ್ ತಂಡಗಳ ನಡುವೆ, ಅಂಡರ್ 19 … Read more

NEWS 1 ಪ್ರಿ ಮಿಲಿಟರಿ ತರಬೇತಿಗೆ ಅರ್ಜಿ ಆಹ್ವಾನ | NEWS 2 ಆಯುಧ ಪರವಾನಿಗೆ ನವೀಕರಿಸಿಕೊಳ್ಳಲು ಸೂಚನೆ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 NEWS 1 | ಪ್ರಿ ಮಿಲಿಟರಿ ತರಬೇತಿಗೆ ಅರ್ಜಿ ಆಹ್ವಾನ ಸಮಾಜ ಕಲ್ಯಾಣ ಇಲಾಖೆಯು ಬೆಂಗಳೂರಿನ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಸಹಯೋಗದೊಂದಿಗೆ 2019-20ನೇ ಸಾಲಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ ಪ್ರಿ-ಮಿಲಿಟರಿ ತರಬೇತಿಯನ್ನು ನೀಡಲು ಉದ್ದೇಶಿಸಿದ್ದು, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ನಮೂನೆಯ ಅರ್ಜಿಯನ್ನು www.sw.kar.nic.inನಲ್ಲಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ನಿಗದಿಪಡಿಸಿದ ಅವಧಿಯೊಳಗಾಗಿ ಇ-ಮೇಲ್ ಐಡಿ … Read more

SHANKARAGHATTA | ‘ಗಾಂಧಿ, ಅಂಬೇಡ್ಕರ್ ಇಬ್ಬರಲ್ಲಿ ಯಾರು ಬೇಕು ಅನ್ನುವ ಚರ್ಚೆಗಳೇ ಬಾಲಿಶ’

ಶಿವಮೊಗ್ಗ ಲೈವ್.ಕಾಂ | SHANKARAGHATTA | 27 ನವೆಂಬರ್ 2019 ಗಾಂಧೀ ಮತ್ತು ಅಂಬೇಡರ್ ನಡುವೆ ಭಾರತಕ್ಕೆ ಆಯ್ಕೆಗಳಿಲ್ಲ. ಅವರಿಬ್ಬರೂ ದೇಶಕ್ಕೆ ಅತ್ಯಗತ್ಯ ಎಂದು ಖ್ಯಾತ ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾ ಅಭಿಪ್ರಾಯಟ್ಟರು. ಕುವೆಂಪು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಪ್ರೊ. ಎಸ್.ಪಿ.ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ದಿವಂಗತ ಡಾ. ಶಾಂತಿನಾಥ ದೇಸಾಯಿ ದತ್ತಿ ಉಪನ್ಯಾಸದಲ್ಲಿ ಡಾ. ಗುಹಾ ಅವರು ‘ಸಂವಹನಕಾರರಾಗಿ ಗಾಂಧಿ’ ವಿಷಯ ಕುರಿತು ಮಾತನಾಡಿದರು. ಮಹಾತ್ಮ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ್ … Read more

SHIMOGA | ಇನ್ನೊಂದೇ ತಿಂಗಳು ಟೈಮ್, ನೆಹರು ಸ್ಟೇಡಿಯಂನಲ್ಲಿ ಆಗ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಕೆಲಸ ಮುಗಿಸುವಂತೆ ಸೂಚನೆ

271119 Nehru Stadium Track 1

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ನೆಹರು ಕ್ರೀಡಾಂಗಣದ ಪ್ರಥಮ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ, ಪ್ರಥಮ ಹಂತದಲ್ಲಿ 2.30ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಯಾವೆಲ್ಲ ಕಾಮಗಾರಿ ಪೂರ್ಣಗೊಳ್ಳಬೇಕು ವಾಲಿಬಾಲ್ ಕೋರ್ಟ್ ನಿರ್ಮಾಣ, ಫೈಬರ್ ಛಾವಣಿ … Read more

GOOD NEWS | ಪ್ಲಾಸ್ಟಿಕ್ ತಂದು ಕೊಟ್ಟರೆ ಅಕ್ಕಿ ಫ್ರೀ.. ಫ್ರೀ.. ಶಿವಮೊಗ್ಗ ಮಹಿಳಾ ಸಂಘದ ಪ್ರಯೋಗಕ್ಕೆ ಭಾರೀ ರೆಸ್ಪಾನ್ಸ್

ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019 ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗ ನಿರ್ಮಾಣಕ್ಕೆ, ಮಹಿಳಾ ಸಂಘಟನೆಯೊಂದು ವಿಭಿನ್ನ ಪ್ರಯೋಗ ನಡೆಸಿತು. ಪ್ಲಾಸ್ಟಿಕ್ ತಂದು ಕೊಟ್ಟವರಿಗೆ ಅಕ್ಕಿ ನೀಡುವ ಯೋಜನೆ ರೂಪಿಸಿತ್ತು. ವಾಸವಿ ಮಹಿಳಾ ಸಂಘದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ಲಾಸ್ಟಿಕ್’ನ ತೂಕದಷ್ಟೇ ಅಕ್ಕ ನೀಡುವ ಪ್ಲಾನ್ ಮಾಡಲಾಗಿತ್ತು. ನಗರದ ವಿವಿಧೆಡೆಯಿಂದ ಸಾರ್ವಜನಿಕರು ಪ್ಲಾಸ್ಟಿಕ್ ತಂದು ಕೊಟ್ಟಿದ್ದಾರೆ. ಎಷ್ಟು ಪ್ಲಾಸ್ಟಿಕ್ ಬಂತು? ಪ್ಲಾಸ್ಟಿಕ್ ಡಬ್ಬಗಳು, ಪ್ಲಾಸ್ಟಿಕ್ ಬಾಟಲಿಗಳು, ಬಗೆಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ಸಾರ್ವಜನಿಕರು ತಂದು … Read more

NEWS 1 ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲೂ ಮಗು ಪೋಷಣ ಕೊಠಡಿ | NEWS 2 ರವೀಂದ್ರನಗರ ದೇಗುಲದಲ್ಲಿ ಭಗವದ್ಗೀತಾ ಸಪ್ತಾಹ

ಶಿವಮೊಗ್ಗ ಲೈವ್.ಕಾಂ | SHIMOGA | 26 ನವೆಂಬರ್ 2019 NEWS 1 | ಖಾಸಗಿ ಬಸ್ ನಿಲ್ದಾಣದಲ್ಲಿ ಮಗು ಪೋಷಣೆ ಕೊಠಡಿ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ಉತ್ತರದ ವತಿಯಿಂದ ಮಗು ಪೋಷಣೆ ಕೊಠಡಿ ತೆರೆಯಲಾಗಿದೆ. ರೋಟರಿ ಜಿಲ್ಲಾ ಗವರ್’ನರ್ ಬಿ.ಎನ್.ರಮೇಶ್ ಕೊಠಡಿ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಠಾರೆ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು. NEWS 2 | ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಭಗವದ್ಗೀತಾ ಸಪ್ತಹ ಶಿವಮೊಗ್ಗ : … Read more

NEWS 1 ಶಿವಮೊಗ್ಗದಲ್ಲಿ ನ.29ಕ್ಕೆ ಉದ್ಯೋಗ ಮೇಳ | NEWS 2 ಜೆಡಿಎಸ್ ಬಿಡೋದಿಲ್ಲ ಅಂದ್ರು ಮಾಜಿ ಎಂಎಲ್ಎ

JOBS-General-Imag

ಶಿವಮೊಗ್ಗ ಲೈವ್.ಕಾಂ | SHIMOGA | 26 ನವೆಂಬರ್ 2019 NEWS 1 | ಶಿವಮೊಗ್ಗದಲ್ಲಿ ಉದ್ಯೋಗ ಮೇಳ ಶಿವಮೊಗ್ಗ : ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ 2ನೇ ತಿರುವಿನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನ.29ರಂದು ಬೆಳಗ್ಗೆ 10ಕ್ಕೆ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ನೇರ … Read more

GOOD NEWS|ಜೋಗ, ಕೊಡಚಾದ್ರಿ, ಆಗುಂಬೆಯಲ್ಲಿ ಇನ್ಮುಂದೆ ‘ಮೈಸೂರು ಮಾದರಿ’ ಪ್ರವಾಸಿಗರ ಚೆಕ್ಕಿಂಗ್, ಬರುತ್ತೆ ‘ಸ್ಟಿಕರ್’ ಫಾರ್ಮುಲಾ

191019 Jog Falls Full 1

ಶಿವಮೊಗ್ಗ ಲೈವ್.ಕಾಂ | SHIMOGA | 26 ನವೆಂಬರ್ 2019 ಕೊಡಚಾದ್ರಿ ಬೆಟ್ಟದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿಗಳು. ಇದರ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪ್ಲಾಸ್ಟಿಕ್ ಕಂಡು ಮಲೆನಾಡಿಗರು ದಂಗಾಗಿದ್ದರು. ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಲು ಪ್ರವಾಸೋದ್ಯಮ ಇಲಾಖೆ ನಿರ್ಧಾರ ಮಾಡಿದೆ. ಅದಕ್ಕಾಗಿ ಹೊಸ ಪ್ಲಾನ್ ಸಿದ್ಧಪಡಿಸಿಕೊಂಡಿದೆ. ತಿರುಪತಿ, ಮೈಸೂರು ಜೂ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸಿದೆ. ‘ಸ್ಟಿಕರ್’ ಫಾರ್ಮುಲಾ ಅಳವಡಿಸಿಕೊಳ್ಳಲು ಮುಂದಾಗಿದೆ. ಟೂರಿಸ್ಟ್’ಗಳ ಮೇಲೆ ನಿಗಾ … Read more

3 NEWS | ಜಾಹೀರಾತು ಆಹಾರ ಪದ್ಧತಿಯಿಂದ ಕ್ಯಾನ್ಸರ್ | ಕ್ರೈಸ್ತರ ಪರಮ ಪ್ರಸಾದ ಮೆರವಣಿಗೆ | ನ್ಯಾಯಾಂಗ ತನಿಖೆಗೆ PFI ಆಗ್ರಹ

ಶಿವಮೊಗ್ಗ ಲೈವ್.ಕಾಂ | SHIMOGA | 25 ನವೆಂಬರ್ 2019 NEWS 1 : ಜಾಹೀರಾತು ಆಹಾರ ಪದ್ಧತಿಯಿಂದ ಕ್ಯಾನ್ಸರ್ ಶಿವಮೊಗ್ಗ : ಜಾಹೀರಾತುಗಳಲ್ಲಿ ತೋರಿಸಿದಂತೆ ಆಹಾರ ಪದ್ಧತಿ ಅನುಸರಿಸಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಸಿ ಆಹಾರ ಪದ್ಧತಿ ಅರಿತು, ರೂಢಿಸಿಕೊಂಡರೆ ಧನಾತ್ಮಕ ಬದಲಾವಣೆ ಬರಲಿದೆ ಎಂದು ಡಾ.ಖಾದರ್ ಹೇಳಿದ್ದಾರೆ. ಯೋಗ ವಿಸ್ಮಯ ಟ್ರಸ್ಟ್ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಕ್ಯಾನ್ಸರ್’ಗೆ ಕಾರಣ ಮತ್ತು ಸರಳ ಪರಿಹಾರ’ ಕುರಿತ ವಿಶೇಷ ಶಿಬಿರದಲ್ಲಿ ಹೇಳಿಕೆ. ಯೋಗ ವಿಸ್ಮಯ … Read more

SHIMOGA | ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರಿಡುವಂತೆ ಆಗ್ರಹ, ಸಿಎಂಗೆ ರಕ್ತದಲ್ಲಿ ಪತ್ರ

ಶಿವಮೊಗ್ಗ ಲೈವ್.ಕಾಂ | SHIMOGA | 23 ನವೆಂಬರ್ 2019 ಕಲಬುರಗಿ ವಿಮಾನ ನಿಲ್ದಾಣದಕ್ಕೆ ಸಂತ ಸೇವಾಲಾಲ್ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಯುವಕರು ರಕ್ತದಲ್ಲಿ ಪತ್ರ ಬರೆದು, ಸಂತ ಸೇವಾಲಾಲ್ ಹೆಸರಿಡುವಂತೆ ಆಗ್ರಹಿಸಿದ್ದಾರೆ. ಶಿವಪ್ಪನಾಯಕ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಜಾರ ಜನಾಂಗದ 769 ಎಕರೆ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ ವಿಮಾನ ನಿಲ್ದಾಣಕ್ಕಾಗಿ … Read more