ಶುಭೋದಯ ಶಿವಮೊಗ್ಗ ಸುಭಾಷಿತ | 8 ಅಕ್ಟೋಬರ್‌ 2025 | ಸತ್ಯ ಮತ್ತು ನ್ಯಾಯದ ಬಗ್ಗೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) » ಸುಭಾಷಿತಕ್ಕೆ ಉದಾಹರಣೆ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ತಾರಕಕ್ಕೇರಿತ್ತು. ಒಮ್ಮೆ ಗಾಂಧೀಜಿ ಅವರನ್ನು ರೈಲಿನ ಪ್ರಥಮ ದರ್ಜೆ ಕೋಚ್‌ನಿಂದ ಹೊರಗೆ ದಬ್ಬಲಾಗಿತ್ತು. ಈ ಘಟನೆ ಅವರನ್ನು ಭಾರಿ ಘಾಸಿಗೊಳಿಸಿತು. ಸತ್ಯ ಮತ್ತು ನ್ಯಾಯಕ್ಕಾಗಿ ಅಹಿಂಸೆಯ ಮಾರ್ಗದಲ್ಲಿ ಹೋರಾಟ ಆರಂಭಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಲು ಈ ಘಟನೆಯು ಪ್ರಮುಖ ಕಾರಣವಾಯಿತು. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, … Read more

ಮಾರಕಾಸ್ತ್ರದಿಂದ ಇರಿದು ಮನೆಯಲ್ಲಿದ್ದ ಒಂಟಿ ಮಹಿಳೆಯ ಹತ್ಯೆ

Crime-News-General-Image

ಕುಂಸಿ: ಮಾರಕಾಸ್ತ್ರದಿಂದ ಚುಚ್ಚಿ ವೃದ್ಧೆಯೊಬ್ಬರನ್ನು (Woman) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಕುಂಸಿಯ ರಥಬೀದಿಯ ಮನೆಯಲ್ಲಿ ಘಟನೆ ಸಂಭವಿಸಿದೆ. ಬಸಮ್ಮ (65) ಮೃತರು. ಮನೆಯಲ್ಲಿ ವೃದ್ಧೆ ಒಬ್ಬರೆ ವಾಸವಾಗಿದ್ದರು. ಶಿವಮೊಗ್ಗದಲ್ಲಿ ವಾಸವಾಗಿರುವ ಪುತ್ರ ಗುರುವಾರ ಮನೆಗೆ ಬಂದು ಬಾಗಿಲು ಬಡಿದರು ತೆಗೆದಿರಲಿಲ್ಲ. ಹೆಂಚು ತೆಗೆದು ಪರಿಶೀಲಿಸಿದಾಗ ಬಸಮ್ಮ ಅವರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕುತ್ತಿಗೆ ಕೊಯ್ದು, ಹೊಟ್ಟೆ ಭಾಗದಲ್ಲಿ ಹಲವೆಡೆ ಇರಿದಿರುವುದು ಗೊತ್ತಾಗಿದೆ.   ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಂಸಿ ಠಾಣೆ ಪೊಲೀಸರು … Read more

ಶಿವಮೊಗ್ಗ ಜಂಬೂ ಸವಾರಿಗೆ ಚಾಲನೆ, ಅಂಬಾರಿ ಮೆರವಣಿಗೆ ಆರಂಭ

021025-Shimoga-Dasara-Jamboo-savari-begins.webp

ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ (Jamboo Savari) ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯನ್ನ ಹೊತ್ತು ಸಾಗರ ಆನೆ ಮೆರವಣಿಗೆಯಲ್ಲಿ ಸಾಗಿತು. ಇದಕ್ಕೂ ಮೊದಲು ಶಿವಪ್ಪನಾಯಕ ಅರಮನೆ ಮುಂಭಾಗ ನಂದಿ ಕೋಲಿಗೆ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಪೂಜೆ ಸಲ್ಲಿಸಿದರು. ಬಳಿಕ ದೇವಿಗೆ ಪುಷ್ಪ ನಮನ ಸಲ್ಲಿಸಿದರು. ಉಸ್ತುವಾರಿ ಸಚಿವನಾಗಿ ಇದು ಮೂರನೆ ವರ್ಷದ ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಕಳೆದ ವರ್ಷಕ್ಕಿಂತಲು ಈ ಬಾರಿ … Read more

ಶಿವಮೊಗ್ಗ ಸಿಟಿಯ ಮತ್ತೊಂದು ರಸ್ತೆಯಲ್ಲಿ ಒನ್‌ ವೇ ಸಂಚಾರ, ಜಿಲ್ಲಾಧಿಕಾರಿ ಆದೇಶ

300925-Indira-Gandhi-road-in-Shimoga-One-Way.webp

ಶಿವಮೊಗ್ಗ: ನಗರದ ಮತ್ತೊಂದು ರಸ್ತೆಯಲ್ಲಿ ವಾಹನಗಳಿಗೆ ಒನ್‌ ವೇ (One Way) ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶಿವಮೊಗ್ಗದ ಇಂದಿರಾ ಗಾಂಧಿ ರಸ್ತೆಯಲ್ಲಿ ಇನ್ಮುಂದೆ ಏಕಮುಖ ಸಂಚಾರ ಇರಲಿದೆ. ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ? ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗ ಇರುವ ಇಂದಿರಾ ಗಾಂಧಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ. ಒನ್‌ ವೇ ಯಾವುದು?: ಬಾಲರಾಜ್ ಅರಸ್ ರಸ್ತೆ ಕಡೆಯಿಂದ ಶ್ರೀ ರಾಘವೇಂದ್ರ ಸ್ವಾಮಿ … Read more

ಶಿವಮೊಗ್ಗದಲ್ಲಿ ರೈಲು ಹತ್ತುವ ಭರದಲ್ಲಿ ಬ್ಯಾಗ್‌ ಬಿಟ್ಟು ಹೋದ ಪ್ರಯಾಣಿಕ

-Left-over-luggage bag-found-on-railway-track-in-Shimoga.

ಶಿವಮೊಗ್ಗ: ರೈಲು ಹತ್ತುವ ಭರದಲ್ಲಿ ಪ್ರಯಾಣಿಕರೊಬ್ಬರು ಶಿವಮೊಗ್ಗ ನಿಲ್ದಾಣದ ಪ್ಲಾಟ್‌ಫಾರಂನಲ್ಲೇ ಮರೆತು ಹೋಗಿದ್ದ ಬ್ಯಾಗನ್ನು (Luggage Bag) ರೈಲ್ವೆ ಪೊಲೀಸ್‌ ರಕ್ಷಿಸಿದ್ದಾರೆ. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್‌ ಒಪ್ಪಿಸಿದ್ದಾರೆ. ಸೆ.28ರ ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಹತ್ತುವಾಗ ಶಿವಮೊಗ್ಗದ ನಾಗರಾಜ್‌ ಎಂಬುವವರು ಬ್ಯಾಗ್‌ ಮರೆತು ಹೋಗಿದ್ದರು. ಪ್ಲಾಟ್‌ಫಾರಂನಲ್ಲಿ ಭದ್ರತಾ ಜವಾಬ್ದಾರಿ ನಿಭಾಯಿಸುತ್ತಿದ್ದ ರೈಲ್ವೆ ಪೊಲೀಸ್‌ ಸಿಬ್ಬಂದಿ ಚಂದ್ರಪ್ಪ ಎಂಬುವವರು ಬ್ಯಾಗ್‌ ವಶಕ್ಕೆ ಪಡೆದಿದ್ದರು. ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್‌ ಒಪ್ಪಿಸಿದ್ದಾರೆ. ಬ್ಯಾಗಿನಲ್ಲಿ ₹18,000 ಮೌಲ್ಯದ ಕಾಲು ಗೆಜ್ಜೆ … Read more

ಈ ದಿನದ ಪಂಚಾಂಗ | 30 ಸೆಪ್ಟೆಂಬರ್ 2025 |ಇವತ್ತು ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಮಂಗಳವಾರ, 30 ಸೆಪ್ಟೆಂಬರ್ 2025 – ಅಷ್ಟಮಿ – ದುರ್ಗಾಷ್ಟಮಿ ಸೂರ್ಯೋದಯ : 6.17 am ಸೂರ್ಯಾಸ್ತ : 6.18 pm ನಕ್ಷತ್ರ : ಪೂರ್ವಾಷಾಢ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.17ರವರೆಗೆ ಅಭಿಜಿತ್‌ ಬೆಳಗ್ಗೆ 11.54 ರಿಂದ 12.42ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.18 ರಿಂದ 3.06ರವರಗೆ ಗೋಧೂಳಿ ಮುಹೂರ್ತ ಸಂಜೆ 6.18 ರಿಂದ 6.42ರವರೆಗೆ … Read more

ಬಾರಂದೂರಿನಲ್ಲಿ ಡಿಸಿಸಿ ಬ್ಯಾಂಕ್‌ ಶಾಖೆ ಆರಂಭ, ಇನ್ನೆರಡು ಕಡೆ ಬ್ರ್ಯಾಂಚ್‌ ಆರಂಭದ ದಿನಾಂಕ ಪ್ರಕಟ

Shimoga-DCC-Bank-Board

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 32ನೇ ಶಾಖೆಯನ್ನು ಭದ್ರಾವತಿ ತಾಲೂಕು ಬಾರಂದೂರಿನಲ್ಲಿ ಸೆ.25ರಂದು ಆರಂಭಿಸಲಾಯಿತು. ಸೆ.29ರಂದು ಹೊಸನಗರ ತಾಲೂಕು ನಗರದ ಚಿಕ್ಕಪೇಟೆಯಿಲ್ಲಿ, ಅ.6ರಂದು ಸಾಗರ ತಾಲೂಕು ತ್ಯಾಗರ್ತಿಯಲ್ಲಿ ಶಾಖೆಗಳನ್ನು ಉದ್ಘಾಟಿಸಲಾಗುತ್ತದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.‌ಎಂ.ಮಂಜುನಾಥ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭದ್ರಾವತಿ, ಹೊಸನಗರ, ಸಾಗರ ತಾಲೂಕಿನ ರೈತರು ಮತ್ತು ಸಾರ್ವಜನಿಕರ ಬೇಡಿಕೆ ಹಿನ್ನೆಲೆ ಕ್ರಮವಾಗಿ ಈ ಮೂರು ಶಾಖೆಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹೇಗಿತ್ತು ನಾಟಕ? … Read more

ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹೇಗಿತ್ತು ನಾಟಕ?

270925-street-drama-in-Shimog-dasara.webp

ಶಿವಮೊಗ್ಗ: ರಂಗ ದಸರಾದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಹಲವು ಲಾವಣಿ ಮತ್ತು ಜನಪದ ಕಥೆ ಆಧಾರಿತ ಸ್ವಾತಂತ್ರ್ಯ ಹೋರಾಟದ ‘ಹಲಗಲಿ’ ಬೀದಿ ನಾಟಕ (Street Drama) ಪ್ರದರ್ಶಿಸಿದರು. ಬೀದಿ ನಾಟಕ ಪ್ರದರ್ಶನವನ್ನು ಆ‌ರ್ ಟಿಒ ಕಚೇರಿ ರಸ್ತೆಯಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉದ್ಘಾಟಿಸಿದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌, ನಾಟಕದ ನಿರ್ದೇಶಕ ಚಂದನ್‌ ನೀನಾಸಂ ಸೇರಿ ಹಲವರು ಇದ್ದರು. ವಿನೋಬನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಎಟಿಎನ್‌ಸಿ ಕಾಲೇಜು, ಆರ್‌ಟಿಒ … Read more

ಶಿವಮೊಗ್ಗ ದಸರಾ ಆನೆ ತಂಗಿರುವ ಜಾಗದ ಸುತ್ತಲು ಶೀಟ್‌, ನಾಗರಿಕರಿಗೆ ನಿರಾಸೆ

Dasara-Elephant-Sheets-around-in-shimoga-city

ದಸರಾ ಸುದ್ದಿ: ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು (Elephants) ವೀಕ್ಷಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆನೆಗಳು ತಂಗುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಕಳೆದ ವರ್ಷ ಆನೆಗಳನ್ನು ವೀಕ್ಷಿಸಲು ಬಂದ ಕೆಲವರು ಅವುಗಳತ್ತ ಕಲ್ಲು, ಮಣ್ಣು ತೂರಿದ್ದರು. ಕಬ್ಬು ಎಸೆದಿದ್ದಿರು. ಇದರಿಂದ ಆನೆಗಳು ರೊಚ್ಚಿಗೇಳುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆನೆಗಳು ಉಳಿದಿರುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಇನ್ನು, ಆನೆ ನೋಡಲು ನಗರದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಮಕ್ಕಳನ್ನು ಆನೆ ತೋರಿಸಿ ಖುಷಿ … Read more

ಫ್ಯಾನಿಗೆ ನೇಣು ಬಿಗಿದುಕೊಳ್ಳಲು ರೆಡಿಯಾಗಿದ್ದ ವ್ಯಕ್ತಿ, ಅಷ್ಟರಲ್ಲಿ ಮನೆಗೆ ಬಂದರು ಪೊಲೀಸ್‌, ಆಗಿದ್ದೇನು?

260925 Police Rescued at person at Alkola

ಶಿವಮೊಗ್ಗ: ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ (Protected). ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ಮನೆಯೊಂದರಲ್ಲಿ ಘಟನೆಯಾಗಿದೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳುವುದಾಗಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್‌ನಲ್ಲಿ ತಿಳಿಸಿದ್ದರು. ಈ ಕುರಿತು ಪೊಲೀಸರಿಗೆ ವಿಷಯ ತಿಳಿದಿದ್ದು 112 ಇಆರ್‌ಎಸ್‌ಎಸ್‌ ವಾಹನದ ಸಿಬ್ಬಂದಿ ಜಗದೀಶ್‌, ಚಾಲಕ ಮಂಜುನಾಥ್‌ ಕೂಡಲೆ ಮನೆಗೆ ದೌಡಾಯಿಸಿದರು. ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಮನವೊಲಿಸಿ ಜೀವ ರಕ್ಷಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು, … Read more