ಶಿವಮೊಗ್ಗದ ತಿಲಕನಗರದಲ್ಲಿ ಬ್ಯಾಂಕ್ ಉದ್ಯೋಗಿ ಮನೆ ಬೀಗ ಒಡೆದು ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SHIMOGA LIVE NEWS | 13 ಡಿಸೆಂಬರ್ 2021 ಹಾಡಹಗಲೆ ಮನೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ತಿಲಕನಗರದ ಘಟನೆ ಸಂಭವಿಸಿದೆ. ತಿಲಕನಗರದ ಮೂರನೆ ಅಡ್ಡರಸ್ತೆಯಲ್ಲಿರುವ ಬ್ಯಾಂಕ್ ಉದ್ಯೋಗಿ ಒಬ್ಬರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಬ್ಯಾಂಕ್ ಉದ್ಯೋಗಿಯು ಕೆಲಸಕ್ಕೆ ಹೋಗಿದ್ದಾರೆ. ಅವರ ಪತ್ನಿ ವೈದ್ಯರಾಗಿದ್ದು, ಅವರು ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಕಳ್ಳರು ಮನೆ ಬಾಗಿಲಿಗೆ ಹಾಕಿದ್ದ ಲಾಕ್ ಮುರಿದು ಒಳ ಪ್ರವೇಶಿಸಿದ್ದಾರೆ. ಮನೆಯ ಬೆಡ್ ರೂಂ ಕಬೋರ್ಡ್’ನಲ್ಲಿ ಇಟ್ಟಿದ್ದ … Read more

ಅಡಕೆ ಬೇಯಿಸುವ ಹಂಡೆಗಳನ್ನು ಕದ್ದೊಯ್ದು ತೋಟದಲ್ಲಿ ಮುಚ್ಚಿಟ್ಟಿದ್ದ ಕಳ್ಳರು ಅರೆಸ್ಟ್

071221 Two Thieves arrest at holehonnur police station

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 7 ಡಿಸೆಂಬರ್ 2021 ಅಡಕೆ ಬೇಯಿಸುವ ತಾಮ್ರದ ಹಂಡೆಗಳನ್ನು ಕದ್ದಿದ್ದ ಕಳ್ಳರನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೊಳೆಹೊನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಶೋಕನಗರದ ಕುಮಾರ್ ಎಂಬುವವರ ಅಡಕೆ ಮನೆಯಲ್ಲಿದ್ದ ಎರಡು ಅಡಕೆ ಬೇಯಿಸುವ ಹಂಡೆಗಳು ಕಳವಾಗಿದ್ದವು. ಈ ಬಗ್ಗೆ ಕುಮಾರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಂಡೆಗಳನ್ನು ಅಶೋಕನಗರದ ಉಮೇಶ್ ಮತ್ತು ಬುಡೇನ್ ಸಾಬ್ … Read more

‘ಅಧಿಕಾರಕ್ಕಾಗಿ ತೀರ್ಥಹಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸುವ ಹುನ್ನಾರ’

031221 Kimmane Rathnakar congress workers protest at Thirthahalli

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021 ನಂದಿತಾ ಪ್ರಕರಣ ಮಾದರಿಯಲ್ಲೇ ತೀರ್ಥಹಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಿ ಮುಂದಿನ ಚುನಾವಣೆ ಗೆಲ್ಲಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಗೋವುಗಳ ಕಳ್ಳಸಾಗಣೆ ಖಂಡಿಸಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, 2013ರಲ್ಲಿ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು … Read more

ಶಿವಮೊಗ್ಗದ ನಾಲ್ಕು ಕಡೆ ಪೊಲೀಸರ ದಾಳಿ, ಆರು ಮಂದಿ ವಿರುದ್ಧ ಎಫ್ಐಆರ್

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021 ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಶಿವಮೊಗ್ಗದ ವಿವಿಧೆಡೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂಗಡಿಗಳಿಗೆ ಬೀಗ ಹಾಕಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನಷ್ಟು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸುವ ಸಾಧ್ಯತೆ ಇದೆ. ಎಲ್ಲೆಲ್ಲಿ ದಾಳಿ ನಡೆಸಲಾಗಿದೆ? ಶಿವಮೊಗ್ಗದ ಇಲಿಯಾಸ್ ನಗರದಲ್ಲಿದ್ದ ಕಸಾಯಿ ಖಾನೆ ಮೇಲೆ ದೊಡ್ಡಪೇಟೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಟಿಪ್ಪು ನಗರ ಮತ್ತು ಜೆಪಿ … Read more

ಗೃಹ ಸಚಿವರ ತವರು ಕ್ಷೇತ್ರದಲ್ಲೇ ಹಿಂದೂ ಪರ ಸಂಘಟನೆಗಳಿಂದ ಪೊಲೀಸರ ವಿರುದ್ಧ ಆಕ್ರೋಶ, ರಸ್ತೆ ತಡೆ, ಯಾರೆಲ್ಲ ಏನೇನು ಹೇಳಿದರು?

021221 Thithahalli Bajaranagadal Protest over cow theft

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 ಡಿಸೆಂಬರ್ 2021 ಗೋವು ಕಳ್ಳರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ತೀರ್ಥಹಳ್ಳಿ ತಾಲೂಕು ಕಚೇರಿಯ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ನಡೆಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಪೊಲೀಸರು ಕಟ್ಟುನಿಟ್ಟು ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರಿಗೂ ದೂರು ತಿಳಿಸಿದರು. ಗೃಹ ಸಚಿವರ ತವರಲ್ಲೇ … Read more

ಸಾಗರದಲ್ಲಿ ಮನೆ ಕಳ್ಳತನ ಕೇಸ್, ಹೊಳೆಹೊನ್ನೂರಿನಲ್ಲಿ ಕಳ್ಳ ಅರೆಸ್ಟ್

271121 Sagara Thief Arrest by Police

ಶಿವಮೊಗ್ಗ ಲೈವ್.ಕಾಂ | SAGARA NEWS | 27 ನವೆಂಬರ್ 2021 ಮನೆ ಹೆಂಚು ಇಳಿಸಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಆರು ಲಕ್ಷಕ್ಕೂ ಹೆಚ್ಚು ಮೊತ್ತದ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರಿನ ಸುರೇಶ್ (24) ಬಂಧಿತ ಆರೋಪಿ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ಸಾಗರದ ಬೆಳಲಿಮಕ್ಕಿಯ ಮೊದಲ ಅಡ್ಡರಸ್ತೆಯ ಕಮಲಾಕರ ಎಂಬುವವರ ಮನೆ ಕಳ್ಳತನವಾಗಿತ್ತು. ಮನೆ … Read more

ಹಣಗೆರೆ ದೇವಸ್ಥಾನದ ಸಿಬ್ಬಂದಿ ಮನೆ ಕಳ್ಳತನ, ಕಡೂರು, ಸಾಗರ, ಶಿವಮೊಗ್ಗದ ಐವರು ಅರೆಸ್ಟ್, ಎಷ್ಟು ಮೊತ್ತದ ಚಿನ್ನಾಭರಣ ಸಿಕ್ಕಿದೆ?

261121 Theft Case Five Arrest in Malur Police Station limits

ಶಿವಮೊಗ್ಗ ಲೈವ್.ಕಾಂ | THIRTHAHALLI  NEWS | 26 ನವೆಂಬರ್ 2021 ಹಣಗೆರೆ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಕಡೂರಿನ ತಿಮ್ಮಣ್ಣ (61), ಸಾಗರದ ರಾಮನಗರದ ಅಪ್ಸರ್ (38), ಶಿವಮೊಗ್ಗ ಬೊಮ್ಮನಕಟ್ಟೆಯ ನರಸಿಂಹ (45). ಕಿರಣ್ (26), ನ್ಯೂ ಮಂಡ್ಲಿಯ ಸತ್ತಾರ್ ಅಬ್ದುಲ್ (50) ಬಂಧಿತರು. ಏನಿದು ಪ್ರಕರಣ? ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆಯ ಸಯ್ಯದ … Read more

ಶಿವಮೊಗ್ಗದಲ್ಲಿ ಒಂದು ವರ್ಷದ ಪಲ್ಸರ್ ಬೈಕ್ ಕಣ್ಮರೆ, ಕೇಸ್ ದಾಖಲು

bike theft reference image

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ನವೆಂಬರ್ 2021 ಸ್ನೇಹಿತನ ರೂಂ ಮುಂದೆ ರಾತ್ರಿ ನಿಲ್ಲಿಸಿದ್ದ ಹೊಸ ಪಲ್ಸರ್ ಬೈಕ್ ಬೆಳಗಾಗುವಷ್ಟರಲ್ಲಿ ಕಣ್ಮರೆಯಾಗಿದೆ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯಕುಮಾರ್ ಅವರು ಚಾಲಕ ವೃತ್ತಿ ಮಾಡುತ್ತಿದ್ದಾರೆ. ವಿನೋಬನಗರ ಠಾಣೆ ವ್ಯಾಪ್ತಿಯ ಜ್ಯೋತಿನಗರದಲ್ಲಿ ಸ್ನೇಹಿತನ ರೂಂಗೆ ರಾತ್ರಿ ತಂಗಿದ್ದರು. ಬೆಳಗ್ಗೆದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಅಕ್ಟೋಬರ್ 30ರಂದು ಘಟನೆ ಸಂಭವಿಸಿದೆ. ಎಲ್ಲೆಡೆ ಹುಡುಕಾಡಿದ ವಿಜಯಕುಮಾರ್ ಅವರು ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. … Read more

ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲು ಓಪನ್ ಆಗಿತ್ತು

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ನವೆಂಬರ್ 2021 ಮನೆಯಲ್ಲಿದ್ದ ಕುಟುಂಬ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಬಾಗಿಲಿನ ಇಂಟರ್ ಲಾಕ್ ಮುರಿದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ವೆಂಕಟೇಶನಗರದಲ್ಲಿ ಸಂಭವಿಸಿದೆ. ವೆಂಕಟೇಶನಗರದ 3ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಕಳ್ಳತನ ಮಾಡಲಾಗಿದೆ. ನಾಟರಾಜ್ ಎಂಬುವವರು ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ನಟರಾಜ್ ಅವರು ಕುಟುಂಬದ ಜೊತೆಗೆ ಊರಿಗೆ ತೆರಳಿದ್ದರು. ಹಬ್ಬ ಮುಗಿಸಿ ಹಿಂತಿರುಗಿದಾಗ ನಟರಾಜ್ ಅವರ ಮನೆಯ ಬಾಗಿಲಿನ ಇಂಟರ್ … Read more

ರಾತ್ರೋರಾತ್ರಿ ಅಡಕೆ ಮರಗಳಿಂದ ಕೊನೆಗಳ ಕಳ್ಳತನ, ಮಾಲೀಕರನ್ನು ಕಂಡು ಕಳ್ಳ ಎಸ್ಕೇಪ್

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ನವೆಂಬರ್ 2021 ರಾತ್ರೋರಾತ್ರಿ ಅಡಕೆ ಮರಗಳಿಂದ ಕೊನೆಗಳನ್ನು ಕೊಯ್ದು ಕದ್ದೊಯ್ಯಲಾಗಿದೆ. ಸುಮಾರು ಒಂದು ಕ್ವಿಂಟಾಲ್’ನಷ್ಟು ಅಡಕೆ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ತಾಲೂಕು ರಾಮನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಲೋಕೇಶ್ವರಪ್ಪ ಎಂಬುವವರಿಗೆ ಸೇರಿದ ಅಡಕೆ ತೋಟದಲ್ಲಿ ನಿತ್ಯ ಅಡಕೆ ಕಳ್ಳತನವಾಗುತ್ತಿರುವ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ರಾತ್ರಿ ವೇಳೆ ಲೋಕೇಶ್ವರಪ್ಪ ಅವರು ಪರಿಶೀಲನೆಗಾಗಿ ಅಡಕೆ ತೋಟಕ್ಕೆ ಹೋದಾಗ ಕಳ್ಳನೊಬ್ಬ ಕೊನೆ ಇಳಿಸುತ್ತಿರುವುದು ಕಂಡು ಬಂದಿದೆ. ಲೋಕೇಶ್ವರಪ್ಪ … Read more