ಪತಿ ಜೊತೆ ಬೈಕ್’ನಲ್ಲಿ ತೆರಳುತ್ತಿದ್ದ ಪತ್ನಿಯ ಮೊಬೈಲ್ ಕಸಿದು, ಚಾಕು ತೋರಿಸಿ ಬೆದರಿಕೆ, 24 ಗಂಟೆಯಲ್ಲಿ ಆರೋಪಿ ಅರೆಸ್ಟ್

Arrest News Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021 ದಂಪತಿ ತೆರಳುತ್ತಿದ್ದ ಬೈಕನ್ನು ಓವರ್ ಟೇಕ್ ಮಾಡಿದ ಕಳ್ಳರು ಮಹಿಳೆಯ ಕೈಯಲ್ಲಿದ್ದ ಮೊಬೈಕ್ ಕಿತ್ತುಕೊಂಡು ಪಾರಿಯಾಗಿದ್ದಾನೆ. ಕಳ್ಳರ ವಾಹನವನ್ನು ಹಿಂಬಾಲಿಸಿದ ದಂಪತಿಗೆ ಕಳ್ಳರು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾನೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಬೊಮ್ಮನಕಟ್ಟೆ ರಸ್ತೆಯ ರೇಲ್ವೆ ಗೇಟ್ ಬಳಿ ಮೇದಾರಕೇರಿ ಬಳಿ ಘಟನೆ ಸಂಭವಿಸಿದೆ. ಹಾಡಹಗಲೆ ಘಟನೆ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಹೇಗಾಯ್ತು ಘಟನೆ? ಶಿವಮೊಗ್ಗ … Read more

ಬೆಂಗಳೂರು, ಮಂಗಳೂರು ಸೇರಿ ಅರ್ಧ ಕರ್ನಾಟಕದಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಆಗುಂಬೆಯಲ್ಲಿ ಅರೆಸ್ಟ್

260921 Bike Thieves arrested at Agumbe

ಶಿವಮೊಗ್ಗ ಲೈವ್.ಕಾಂ | AGUMBE NEWS | 26 ಸೆಪ್ಟೆಂಬರ್ 2021 ಕದ್ದ ಬೈಕ್’ನಲ್ಲಿ ತೆರಳುತ್ತಿದ್ದ ಇಬ್ಬರು ಅಂತರ್ಜಿಲ್ಲಾ ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಖದೀಮರು ಬೈಕ್ ಕಳವು ಮಾಡಿದ್ದರು. ಆಗುಂಬೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಕಳ್ಳರನ್ನು ಬಂಧಿಸಿದ್ದಾರೆ. ಇವರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಬೈಕ್ ಕದ್ದಿದ್ದರು ಬಂಧಿತರನ್ನು ಧಾರವಾಡ ಜಿಲ್ಲೆಯ ನವಲಗುಂದದ ಆದರ್ಶ ಮತ್ತು ಅನ್ವರ್ ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಬೈಕ್ ಕಳವು ಮಾಡಿಕೊಂಡು, … Read more

ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳು ನಾಪತ್ತೆ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟೆಂಬರ್ 2021 ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳನ್ನೆ ಟಾರ್ಗೆಟ್ ಮಾಡಿ ಕಳವು ಮಾಡಲಾಗಿದೆ. ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಲ್ಲೂ ಬೈಕ್ ಕಳವಾಗಿದೆ. ಈ ಸಂಬಂಧ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ರಾತ್ರಿ ನಿಲ್ಲಿಸಿದ ಬೈಕ್ ಬೆಳಗ್ಗೆ ಇಲ್ಲ ವಿನೋಬನಗರ ಮೊದಲ ಹಂತದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಿಕ್ಟರ್ ಬೈಕ್ ಕಳ್ಳತನವಾಗಿದೆ. ನಾಗರಾಜ ರಾವ್ ಎಂಬುವವರಿಗೆ ಸೇರಿದ ಬೈಕನ್ನು ರಾತ್ರಿ ತಂದು … Read more

ಗೋಪಾಲಗೌಡ ಬಡಾವಣೆಯಲ್ಲಿ ಮುಂದುವರೆದ ಕಳ್ಳತನ, ಮನೆ ಬೀಗ ಒಡೆದು ಚಿನ್ನಾಭರಣ, ರೇಷ್ಮೆ ಸೀರೆ, ದುಬಾರಿ ವಾಚ್ ಕಳವು

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟೆಂಬರ್ 2021 ಗೋಪಾಲಗೌಡ ಬಡಾವಣೆಯಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಮನೆಯೊಂದರ ಬೀಗ ಒಡೆದು ಚಿನ್ನಾಭರಣ, ಸೀರೆಗಳು, ದುಬಾರಿ ವಾಚ್’ಗಳನ್ನು ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ |  ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು, ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ ವೈರಲ್ ಗೋಪಾಲಗೌಡ ಬಡಾವಣೆಯ ಇ ಬ್ಲಾಕ್’ನಲ್ಲಿರುವ ಮಂಜಪ್ಪಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು … Read more

ಶಿವಮೊಗ್ಗದ ವಂದನಾ ಟಾಕೀಸ್ ಬಳಿ ರಾತ್ರಿ ತಂದು ನಿಲ್ಲಿಸಿದ್ದ RX135 ಬೆಳಗ್ಗೆ ಇಲ್ಲ

Shimoga Map Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟೆಂಬರ್ 2021 ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಮನೆ ಮುಂದೆ ನಿಲ್ಲಸಿದ್ದ ಆರ್.ಎಕ್ಸ್ 135 ಬೈಕ್ ಕಳ್ಳತನವಾಗಿದೆ. ರಾತ್ರಿ ವೇಳೆ ಕಳವು ಮಾಡಡಲಾಗಿದೆ. ಶಿವಮೊಗ್ಗದ ವಂದನಾ ಟಾಕೀಸ್ ಸಮೀಪ ಕುಂಬಾರ ಬೀದಿಯಲ್ಲಿ ಘಟನೆ ಸಂಭವಿಸಿದೆ. ಗಣೇಶ್ ಶೇಟ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನ ಮಾಡಲಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೆಳಗೆದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಕಳ್ಳತನವಾಗಿರುವುದು ಖಚಿತವಾಗಿದೆ. … Read more

ಬಸವನಗುಡಿಯಲ್ಲಿ ವಿದ್ಯಾರ್ಥಿಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾದ ಕಳ್ಳರು

Mobile Theft Case General Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಸೆಪ್ಟೆಂಬರ್ 2021 ಟೈಪಿಂಗ್ ಕ್ಲಾಸ್ ಮುಗಿಸಿಕೊಂಡು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನ ಮೊಬೈಲ್ ಫೋನನ್ನು ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ. ಬಸವನಗುಡಿಯಲ್ಲಿ ಘಟನೆ ವರದಿಯಾಗಿದೆ. ಉದಯ ಶಂಕರ್ ಎಂಬುವವರಿಗೆ ಸೇರಿದ ಮೊಬೈಲ್ ಕಳವು ಮಾಡಲಾಗಿದೆ. ಜಯನಗರದಲ್ಲಿ ಟೈಪಿಂಗ್ ಕ್ಲಾಸ್ ಮುಗಿಸಿ, ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಉದಯ ಶಂಕರ್, ಬಸವನಗುಡಿಯಿಂದ ಬಾಲರಾಜ್ ಅರಸ್ ರಸ್ತೆ ಕಡೆಗೆ ತೆರಳುತ್ತಿದ್ದರು. ಆಗ ಹಿಂದಿನಿಂದ ಬೈಕ್’ನಲ್ಲಿ ಬಂದ ಇಬ್ಬರು ಯುವಕರು, ಉದಯ ಶಂಕರ್ … Read more

ಇನ್ಸ್’ಪೆಕ್ಟರ್ ಮನೆಯ ಬಾಗಿಲು ಒಡೆದು ಹಣ, ಚಿನ್ನದ ನಾಣ್ಯ ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟೆಂಬರ್ 2021 ಪೊಲೀಸ್ ಅಧಿಕಾರಿಯೊಬ್ಬರ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಮನೆಗೆ ನುಗ್ಗಿರುವ ಕಳ್ಳರು, ಹಣ, ಚಿನ್ನದ ಕಾಯಿನ್ ಮತ್ತು ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇನ್ಸ್’ಪೆಕ್ಟರ್ ಆಗಿರುವ ಮಂಜುನಾಥ್ ಅವರ ಶಿವಮೊಗ್ಗದ ಮನೆಯಲ್ಲಿ ಕಳ್ಳತನವಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಮಂಜುನಾಥ್ ಅವರ ಮನೆಯ ಬಾಗಿಲು ಒಡೆದು ಕಳವು ಮಾಡಲಾಗಿದೆ. ಉಡುಪಿಗೆ ತೆರಳಿದ್ದ ಮಂಜುನಾಥ್ ಅವರು ಕರ್ತವ್ಯ ನಿಮಿತ್ತ ಶಿವಮೊಗ್ಗಕ್ಕೆ … Read more

ಬೈಕ್’ನಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಪರಾರಿಯಾದ ಖದೀಮರು

Tunga Nagara Police station building

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟೆಂಬರ್ 2021 ರಸ್ತೆ ಬದಿ ಮೊಬೈಲ್ ಫೋನ್’ನಲ್ಲಿ ಮಾತನಾಡುತ್ತಿದ್ದ ವೇಳೆ ಬೈಕ್’ನಲ್ಲಿ ಬಂದ ಇಬ್ಬರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೋಪಾಳದ ದ್ರೌಪದಮ್ಮ ಸರ್ಕಲ್ ಬಳಿಕ ಘಟನೆ ಸಂಭವಿಸಿದೆ. ಪ್ರಭಾಕರ್ ಎಂಬುವವರು ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಮೊಬೈಲ್ ರಿಂಗಾಗಿದೆ. ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಫೋನ್’ನಲ್ಲಿ ಮಾತನಾಡುತ್ತಿದ್ದರು. ಹಿಂದಿನಿಂದ ಬೈಕ್’ನಲ್ಲಿ ಬಂದ ಇಬ್ಬರು ಪ್ರಭಾಕರ್ ಅವರ ಮೊಬೈಲ್ … Read more

ನ್ಯೂ ಮಂಡ್ಲಿಯಲ್ಲಿ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕು ಬೆಳಗ್ಗೆ ನಾಪತ್ತೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ರಾತ್ರಿ ತಂದು ಮನೆ ಮುಂದೆ ನಿಲ್ಲಿಸಿದ್ದ ಬೈಕು ಬೆಳಗೆದ್ದಾಗ ನಾಪತ್ತೆಯಾಗಿತ್ತು. ಕಳ್ಳರು ಬೈಕ್ ಕದ್ದೊಯ್ದಿದ್ದು ಹುಡುಕಿ ಕೊಡುವಂತೆ ದೊಡ್ಡಪೇಟೆ ಠಾಣೆಗೆ ದೂರು ಸಲ್ಲಿಸಲಾಗಿದೆ. ಶಿವಮೊಗ್ಗದ ನ್ಯೂ ಮಂಡ್ಲಿಯ ಎರಡನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಲೋಕೇಶ್ ಎಂಬುವವರಿಗೆ ಸೇರಿದ ಬೈಕನ್ನು ಕಳವು ಮಾಡಲಾಗಿದೆ. ಪ್ಲಂಬರ್ ಆಗಿರುವ ಲೋಕೇಶ್ ಅವರು ಪಲ್ಸರ್ ಬೈಕನ್ನು ಮನೆ ಮುಂದೆ ನಿಲ್ಲಿಸಿದ್ದರು. ರಾತ್ರಿ ಸದ್ದು ಗದ್ದಲವಿಲ್ಲದೆ ಬೈಕ್ ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ … Read more

ಹಣಗೆರೆಯಿಂದ ಹಿಂತಿರುಗುತ್ತಿದ್ದಾಗ ಬೈಕ್ ಸ್ಕಿಡ್, ಗಾಯ, ಚಿಕಿತ್ಸೆ ಪಡೆದು ಮರಳಿದಾಗ ಕಾದಿತ್ತು ಶಾಕ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ಹಣಗೆರೆಯಲ್ಲಿ ಪೂಜೆ ಸಲ್ಲಿಸಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ದಂಪತಿ ಗಾಯಗೊಂಡಿದ್ದಾರೆ. ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಹಿಂತಿರುಗಿದಾಗ, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಶಿವಮೊಗ್ಗದ ಇನಾಯತ್ ಉಲ್ಲಾ ಅವರ ಬೈಕ್ ಕಳುವಾಗಿದೆ. ತಮ್ಮ ಪತ್ನಿ ಜೊತೆಗೆ ಅವರು ಹಣಗೆರೆ ಕಟ್ಟೆಗೆ ತೆರಳಿ, ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದರು. ಸಿರಿಗೆರೆ ಅರಣ್ಯ ಚೆಕ್ ಪೋಸ್ಟ್ ಸಮೀಪ ಬೈಕ್ ಸ್ಕಿಡ್ ಆಗಿದೆ. ಕಾರಲ್ಲಿ … Read more