SHIVAMOGGA LIVE | 31 JULY 2023
BHADRAVATHI : ಅರಿಶಿನಗುಂಡಿ ಜಲಪಾತದಲ್ಲಿ (Arasinagundi Falls) ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಶರತ್ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನೆರವೇರಿತು. ತಮಿಳು ಗೌಂಡರ್ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ತಡರಾತ್ರಿ ಮೃತದೇಹ ಮನೆಗೆ
ಜು.23ರಂದು ಅರಿಶಿನಗುಂಡಿ ಜಲಪಾತದಲ್ಲಿ (Arasinagundi Falls) ಶರತ್ ಕಾಲು ಜಾರಿ ಬಿದ್ದಿದ್ದ. ಇದರ ವಿಡಿಯೋ ವೈರಲ್ ಆಗಿತ್ತು. ಶರತ್ಗಾಗಿ ತೀವ್ರ ಹುಡುಕಾಟ ನಡೆದಿತ್ತು. ಜು.30ರಂದು ಶರತ್ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಭದ್ರಾವತಿಯ ಕೆ.ಹೆಚ್.ನಗರಕ್ಕೆ ರವಾನಿಸಲಾಗಿತ್ತು. ತಡರಾತ್ರಿ ಶರತ್ ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
![]() |
ಇದನ್ನೂ ಓದಿ – ಜಲಪಾತದ ಬಳಿ ಶರತ್ ಮೃತದೇಹ ಪತ್ತೆ, ಮನೆಗೆ ಬಂದ ಸಂಸದ ರಾಘವೇಂದ್ರಗೆ ಕುಟುಂಬದಿಂದ ‘ಒಂದು ಮನವಿʼ
ಅಂತ್ಯ ಸಂಸ್ಕಾರಕ್ಕು ಮೊದಲು ಮದುವೆ ಶಾಸ್ತ್ರ
ಕೆ.ಹೆಚ್.ನಗರದಲ್ಲಿ ಶರತ್ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಶರತ್ ಅವಿವಾಹಿತನಾಗಿದ್ದ ಕಾರಣ, ತಮಿಳು ಗೌಂಡರ್ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕು ಮೊದಲು ವಿವಾಹ ಶಾಸ್ತ್ರ ನೆರವೇರಿಸಲಾಯಿತು. ಶರತ್ ಮೃತದೇಹದ ಪಕ್ಕದಲ್ಲಿ ಬಾಳೆ ಗಿಡ ಇಟ್ಟು ತಾಳಿ ಕಟ್ಟಲಾಯಿತು. ಬಳಿಕ ಬಾಳೆ ಗಿಡವನ್ನು ಕತ್ತರಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಶರತ್ ಕುಟುಂಬದವರು, ಊರಿನವರು, ಸ್ನೇಹಿತರು ಸೇರಿದಂತೆ ದೊಡ್ಡ ಸಂಖ್ಯೆ ಜನ ಸೇರಿದ್ದರು.
ಜಾರಿ ಬೀಳುವ ಮುನ್ನ ವಿಡಿಯೋ
ಜಾರಿ ಬೀಳುವ ಮುನ್ನ ಶರತ್ ಅರಿಶಿನಗುಂಡಿ ಜಲಪಾತದಲ್ಲಿ ನಿಂತು ಸೆಲ್ಫಿ ವಿಡಿಯೋ ಚಿತ್ರೀಕರಿಸಿದ್ದ. ಘಟನೆಗು ಕೆಲವೇ ಕ್ಷಣ ಮುನ್ನ ಈ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶರತ್ ಕುರಿತು ಆತನ ಸ್ನೇಹಿತರು ಮರುಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200