ಪ್ರಕಾಶ್ ಟ್ರಾವೆಲ್ಸ್ ಮಾಲೀಕ ನಾಪತ್ತೆ ಕೇಸ್, ಎರಡು ದಿನ ಏನೆಲ್ಲ ಬೆಳೆವಣಿಗೆಯಾಯ್ತು? ಇಲ್ಲಿದೆ ಸಂಪೂರ್ಣ ಅಪ್ ಡೇಟ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗದ ಲೈವ್.ಕಾಂ | SAGARA / HOSANAGARA NEWS | 24 ಜನವರಿ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಮೃತಪಟ್ಟಿದ್ದಾರೆ. ಪಟಗುಪ್ಪ ಸೇತುವೆ ಸಮೀಪ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಮಧ್ಯೆ ಅವರ ಸಾವಿನ ಕುರಿತು ಕುಟುಂಬದವರು, ಆಪ್ತರು, ಸಂಸ್ಥೆಯ ಕಾರ್ಮಿಕರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕಾಶ್ ಅವರು ನಾಪತ್ತೆಯಾದ ಬಳಿಕ ಪ್ರಮುಖ ವಿದ್ಯಮಾನ ನಡೆದವು. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

♦ ರಾತ್ರಿ ಇಡೀ ಆತಂಕ

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಶುಕ್ರವಾರ ಮನೆಯಿಂದ ಹೊರಟವರು ಹಿಂತಿರುಗಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವು ವಿಫಲವಾದವು. ಕುಟುಂಬದವರು, ಆಪ್ತರು ಆತಂಕಕ್ಕೀಡಾದರು. ಇಡೀ ರಾತ್ರಿ ಹುಡುಕಾಟ ನಡೆಯಿತು.

♦ ಪಟಗುಪ್ಪ ಸೇತುವೆ ಮೇಲೆ ಕಾರು

ಜನವರಿ 22ರಂದು ಬೆಳಗ್ಗೆ ಪಟಗುಪ್ಪ ಸೇತುವೆ ಮೇಲೆ ಕಾರು ನಿಂತಿತ್ತು. ಪರಿಶೀಲನೆ ಬಳಿಕ ಅದು ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರದ್ದು ಎಂದು ಗೊತ್ತಾಗಿದೆ. ಕಾರಿನಲ್ಲೇ ಮೊಬೈಲ್ ಫೋನ್ ಇತ್ತು. ಸ್ವಲ್ಪ ದೂರದಲ್ಲಿ ಅವರ ಚಪ್ಪಲಿಗಳು ಸಿಕ್ಕಿದ್ದವು.

230122 Prakash Travels Owner Missing from Pataguppe Bridge

♦ ಶೋಧ ಕಾರ್ಯ ಆರಂಭ

ಮಾಹಿತಿ ತಿಳಿಯುತ್ತಿದ್ದಂತೆ ಹೊಸನಗರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪ್ರಕಾಶ್ ಅವರ ಶೋಧ ಕಾರ್ಯ ಆರಂಭಿಸಿದರು. ಕುಟುಂಬದವರು, ಆಪ್ತರು, ಟ್ರಾವೆಲ್ಸ್ ಸಂಸ್ಥೆಯ ನೌಕರರು ಪಟಗುಪ್ಪ ಸೇತುವೆ ಬಳಿ ತೆರಳಿದರು. ಶನಿವಾರ ಇಡೀ ದಿನ ಶೋಧ ಕಾರ್ಯ ನಡೆಸಿದರೂ ಪ್ರಕಾಶ್ ಅವರ ಸುಳಿವು ಸಿಗಲಿಲ್ಲ.

♦ ಎರಡನೇ ದಿನದ ಕಾರ್ಯಾಚರಣೆ

ಎರಡನೆ ದಿನವೂ ಶೋಧ ಕಾರ್ಯಾಚರಣೆ ನಡೆಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಪಟಗುಪ್ಪ ಸೇತುವೆ ಸುತ್ತಮುತ್ತಲು ಸಂಪೂರ್ಣವಾಗಿ ಶೋಧ ಮಾಡಿದರು. ಸ್ಥಳೀಯ ಮುಳುಗು ತಜ್ಞರು ಕಾರ್ಯಾಚರಣೆಗೆ ನೆರವಾದರು. ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಗಲಿಲ್ಲ.

AVvXsEjubsOilkhgq8SzYrg6f IdYVyFT33nAzTObPTO7g2mSz1bI1BgniDqmB4x0HK8nFq9AA8jkGiIzpjJBFT6QW sE542jUkz81YOwNkKrn9VhvNWib4U auKCyVAbPTmJGqoC1JFWnN355YeV 7vd8h okX5bUuHGgBqiG1kMPmUapD4rPa2q sp LbzqQ=s926

♦ ಶಾಸಕ ಹಾಲಪ್ಪ ಭೇಟಿ

ಪ್ರಕಾಶ್ ಅವರ ಶೋಧ ಕಾರ್ಯಾಚರಣೆ ಕುರಿತು ಪರಿಶೀಲನೆಗೆ ಶಾಸಕ ಹರತಾಳು ಹಾಲಪ್ಪ ಅವರು ಪಟಗುಪ್ಪ ಸೇತುವೆ ಬಳಿ ಭೇಟಿ ನೀಡಿದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು. ಅಲ್ಲದೆ NDRF ತಂಡ ಕರೆಯಿಸಿ ಶೋಧ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

AVvXsEg8qxdsCPClx28tX4hZtockPwCwSREcS2lVG1y xRYC eKTywPPFeOuB5vmp3LpWxorxU3q DZGcPmCprom8dHgynA V7fQE5rFsfayDbEjl5hRx3cpXCR9V kHKk9IGvele6t

♦ ಠಾಣೆ ಎದುರು ಸಿಬ್ಬಂದಿ ಪ್ರತಿಭಟನೆ

ಹೊಸನಗರ ಪೊಲೀಸ್ ಠಾಣೆ ಎದುರು ಪ್ರಕಾಶ್ ಟ್ರಾವೆಲ್ಸ್ ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು. ತಮ್ಮ ಸಂಸ್ಥೆ ಮಾಲೀಕರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಂತವರಲ್ಲ. ಅವರ ನಾಪತ್ತೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

♦ ಗೃಹ ಸಚಿವರಿಂದ ಫೋನ್ ಕರೆ

ಇನ್ನು, ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಶೋಧ ಕಾರ್ಯದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಅವರೊಂದಿಗೆ ಫೋನ್ ಮೂಲಕ ಮಾಹಿತಿ ಪಡೆದರು. ‘ಮುಳುಗು ತಜ್ಞರು, ಅಗತ್ಯ ಸಿಬ್ಬಂದಿ ಬಳಕೆ ಮಾಡಿಕೊಳ್ಳುವಂತೆ’ ಸೂಚನೆ ನೀಡಿದರು.

♦ ಮೂರನೆ ದಿನ ಕಾರ್ಯಾಚರಣೆ

ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ. ಪಟಗುಪ್ಪ ಸೇತುವೆಯಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕುಟುಂಬದವರು, ಆಪ್ತರು, ಪ್ರಕಾಶ್ ಟ್ರಾವೆಲ್ಸ್ ಸಿಬ್ಬಂದಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | BREAKING NEWS | ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶವವಾಗಿ ಪತ್ತೆ

AVvXsEjUn9R0ok4ZxpCnwApqSXTd nQHNDVAfBprPlpemlGOuWYmxGxtexdPHmOt7Ni3qpr7I6BC5jdPyqrfBOF uWOT8Mm7ensXDyVdNtEsxAmcszR2wjz 9n5Pr rtc73Zs9oUpnCK1Qep8wjB9enQwE4SdFT vARJEXtj82bMeU

AVvXsEiKq1plL4vaaqy v1qP bgIhqA6fZuGzJ5yOjpZyhUd3PZepD2Irzs5CgxngyKKWUvgDGozpHhGT 6CqPRuMRsqfN5d5yzRyYZ1fHhkSZF1hbvLilEH2F7pNHPtAFWTVR7nJWJcrJnZQDDEVwSC2bBKfJLEPsj AepC62OsVY8IpX3sJuc1ssRm27wuA=s926

AVvXsEhnY6FOXrIdcQTo2TwqPyFvAusXDsQcvnfUUuiVEJss23lvWbZSHSgpYhklaWU6iXsxxn F63LUmieRUAQ9QfSXYRg4CXMgGIGuZQT9PaL iZkyGP6FH98Q r6gF8g7Fzxc BokCMDA

ABOUT NEW DEC 2021 REPORT

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment