ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 16 JANUARY 2025
ಸಾಗರ : ಹುಲ್ಲು ಪಿಂಡಿ ಕಟ್ಟುವ ಯಂತ್ರದ (Machine) ಬಾಯಿಗೆ ಸಿಲುಕಿದ್ದ ಚಾಲಕನನ್ನು 13 ವರ್ಷದ ಬಾಲಕ ರಕ್ಷಿಸಿದ್ದು, ಆತನ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ತ್ಯಾಗರ್ತಿ ಸಮೀಪದ ಬಸವನಹೊಂಡ ಗ್ರಾಮದ ಕಲ್ಕೆರೆ ಗ್ರಾಮದ ರಾಮಚಂದ್ರ ಅವರ ಮನೆಯಲ್ಲಿ ಶಿಕಾರಿಪುರ ಮೂಲದ ಮದನ (28) ಯಂತ್ರದ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ರಾಮಚಂದ್ರ ಅವರ ಪುತ್ರ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮಧು ಅವರ ರಕ್ಷಣೆ ಮಾಡಿದ್ದಾನೆ.

ಶಿಕಾರಿಪುರ ಮೂಲದ ಮದನ ಬಾಡಿಗೆ ಯಂತ್ರ ತಂದು ರಾಮಚಂದ್ರ ಅವರ ಮನೆ ಅಂಗಳದಲ್ಲಿ ಹುಲ್ಲು ಪಿಂಡಿ ಕಟ್ಟುವ ಕಾರ್ಯ ನಡೆಸುತ್ತಿದ್ದ. ಬಾಲಕ ಮಧು ಅದನ್ನು ನೋಡುತ್ತಾ ನಿಂತಿದ್ದ. ಹುಲ್ಲನ್ನು ಯಂತ್ರದ ಕಡೆ ನೂಕುತ್ತಿದ್ದಾಗ ಚಾಲಕನ ಕೈ ಆಕಸ್ಮಿಕವಾಗಿ ಸಿಲುಕಿಕೊಂಡಿದ್ದು, ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಓಡಿ ಬಂದ ಮಧು, ಟ್ರ್ಯಾಕ್ಟರ್ನ ಎಂಜಿನ್ ಸ್ವಿಚ್ ಆಫ್ ಮಾಡಿದ್ದಾನೆ. ಹಾಗಾಗಿ ಮದನ್ ಸ್ವಲ್ಪದರಲ್ಲಿಯೇ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಷ್ಟರಲ್ಲೇ ಯಂತ್ರಕ್ಕೆ ಸಿಲುಕಿದ ಕೈ ಅರ್ಧ ಭಾಗ ಸುಲಿದು ಹೋಗಿತ್ತು. ಸ್ವಲ್ಪ ವಿಳಂಬವಾಗಿದ್ದರು ಚಾಲಕ ಮದನ್ ದೇಹ ಪೂರ್ತಿ ಯಂತ್ರದೊಳಕ್ಕೆ ಸೇರಿ ಜಜ್ಜಿಹೋಗುತ್ತಿತ್ತು.ಹುಲ್ಲು ಪಿಂಡಿ ಕಟ್ಟುವುದನ್ನು ನೋಡುತ್ತಿದ್ದ

ಮನೆಯವರು ಮತ್ತು ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ತೀವ್ರ ಗಾಯಗೊಂಡ ಚಾಲಕ ಮದನ್ನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರು ಖರೀದಿಸುವವರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಮೆಗಾ ಎಕ್ಸ್ಚೇಂಜ್ ಮೇಳ

ಇದನ್ನೂ ಓದಿ » ‘ಪೊಲೀಸರು ಕರ್ಮ ಅನುಭವಿಸುತ್ತಾರೆ, ಸರ್ಕಾರಕ್ಕೆ ಶಾಪ ತಟ್ಟುತ್ತೆʼ
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು















