SHIVAMOGGA LIVE NEWS | 7 DECEMBER 2023
HOSANAGARA : ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರು ಶ್ರೀಗಂಧ (Sandalwood) ಕಳ್ಳರನ್ನು ಬಂಧಿಸಿದ್ದಾರೆ. ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಆರ್ಎಫ್ಓ ಸಂಜಯ್ ಮಾರ್ಗದರ್ಶನಲ್ಲಿ ದಾಳಿ ನಡೆಸಲಾಗಿದೆ.
![]() |
ನಿವಣೆ ಪರಮೇಶ್ವರ, ಮಾನಿ ಗ್ರಾಮದ ಎಂ.ಕೆ.ಹರೀಶ್, ನಾಗರಕೊಡಿಗೆ ಚಿದಾನಂದ, ಅರುಣ್ಕುಮಾರ್ ಬಂಧಿತರು. ಹೊಸನಗರ ತಾಲೂಕಿನ ಹುಂಚ ಹೋಬಳಿ ತೊಗರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿತಲೆ ಮಾಡಿ ಸಾಗಣೆಗೆ ಯತ್ನಿಸಿದ್ದರು.
ಇದನ್ನೂ ಓದಿ- ಮುಷ್ಕರ ಮುಗಿಸಿ ಮನೆಗೆ ಮರಳಿದ ಅಂಗನವಾಡಿ ಕಾರ್ಯಕರ್ತೆಗೆ ಕಾದಿತ್ತು ಶಾಕ್
ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ. ಸೊನಲೆ ಡಿಆರ್ಎಫ್ಒ ನರೇಂದ್ರ, ಯಡೂರು ಪ್ರವೀಣ್, ನಗರ ಅಮೃತ್ ಸುಂಕದ್, ನಿಟ್ಟೂರು ಸತೀಶ್, ಕಸಬಾ ಯುವರಾಜ್, ಹಾಲೇಶ್, ಬೀಟ್ ಫಾರೆಸ್ಟರ್ಗಳಾದ ಮನೋಜ್, ಮನೋಜ್ ಕುಮಾರ್, ಯೋಗೀಶ್, ಶಶಿಕುಮಾರ್, ಜೆಸ್ಸಿ, ಸುಮಾ, ಚಾಲಕ ರಾಮು ಗಾಣಿಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200