SHIVAMOGGA LIVE NEWS | 7 AUGUST 2023
ಬೀರುವಿನಲ್ಲಿ ಇಟ್ಟಿದ್ದ ಲಕ್ಷ ಲಕ್ಷ ರೂ. ಕಣ್ಮರೆ
BHADRAVATHI : ಬೋರ್ ವೆಲ್ ಲಾರಿ ಏಜೆಂಟ್ ಒಬ್ಬರು ತಮ್ಮ ಮನೆಯ ಬೀರುವಿನಲ್ಲಿ ಇಟಿದ್ದ 3.15 ಲಕ್ಷ ರೂ. ಹಣ (Money) ಕಳ್ಳತನವಾಗಿದೆ. ಭದ್ರಾವತಿ ಹೊಸಮನೆ ಬಡಾವಣೆಯಲ್ಲಿರುವ ನೋಯಲ್ ಥಾಮ್ಸನ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಜು.30ರಂದು ಹಣವನ್ನು ಬೀರುವಿನಲ್ಲಿ ಇಟ್ಟು ಬೀಗ ಟೇಬಲ್ ಮೇಲೆ ಇರಿಸಿದ್ದರು. ಧರ್ಮಸ್ಥಳಕ್ಕೆ ತೆರಳಿದ್ದ ನೋಯಲ್ ಥಾಮ್ಸನ್ ಆ.1ರಂದ ರಾತ್ರಿ ಮನೆಗೆ ಮರಳಿದ್ದಾರೆ. ಬೀರು ತೆಗೆದಾಗ ಹಣ ಇರಲಿಲ್ಲ. ಮನೆಯಲ್ಲಿರುವವರನ್ನು ವಿಚಾರಿಸಿದಾಗ ಹಣ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಮೇಲೆ ಕಂಡಕ್ಟರ್ನಿಂದ ಹಲ್ಲೆ, ಕಾರಣವೇನು?
ಕಟ್ಟಿನಕಾರು ಬಳಿ ಬೈಕ್ಗೆ ಎದುರಿನಿಂದ ಬಂದ ಕಾರು ಡಿಕ್ಕಿ
SAGARA : ಬೈಕ್ಗೆ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಸವಾರರಿಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ (Kattinakaru) ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರರಾದ ಕೋಗಾರು ಗ್ರಾಮದ ಜೋಸೆಫ್ ಮತ್ತು ಚನ್ನಗೊಂಡದ ಜೀವೇಂದ್ರ ಗಾಯಗೊಂಡಿದ್ದಾರೆ. ಇಬ್ಬರು ಕಟ್ಟಿನಕಾರುವಿನಲ್ಲಿ ಗಾರೆ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದರು. ದೇವಿಕಾನು ಅಪ್ನಲ್ಲಿ ಕಾರು ಡಿಕ್ಕಿ ಹೊಡೆದಿದೆ. ಜೀವೇಂದ್ರ ಅವರ ಬಲಗಾಲಿಗೆ ಗಾಯವಾಗಿದೆ. ಜೋಸೆಫ್ ತಲೆಗೆ ಪೆಟ್ಟು ಬಿದ್ದಿದೆ. ಕೂಡಲೆ ಇಬ್ಬರಿಗು ಕಾರ್ಗಲ್ (Kargal) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗಾಂಜಾ ಸೇವಿಸಿದ್ದ ಬ್ಯಾಂಕ್ ಉದ್ಯೋಗಿ ಭದ್ರಾವತಿಯಲ್ಲಿ ಅರೆಸ್ಟ್ – 3 ಫಟಾಫಟ್ ಕ್ರೈಮ್ ನ್ಯೂಸ್
ರಿಪ್ಪನ್ಪೇಟೆ ಸುತ್ತಮುತ್ತ ರಬ್ಬರ್ ಶೀಟ್ ಕಳ್ಳತನ
RIPPONPETE : ಸುತ್ತಮುತ್ತಲ ವಿವಿಧೆಡೆ ಅಂದಾಜು 25 ಸಾವಿರ ಮೌಲ್ಯದ ರಬ್ಬರ್ ಶೀಟ್ಗಳ (Rubber Sheet Theft) ಕಳ್ಳತನವಾಗಿದೆ. ರಬ್ಬರ್ ಹಾಲು ತೆಗೆದು ಶೀಟ್ ಮಾಡಿ ಒಣ ಹಾಕಿದ್ದ ವೇಳೆ ಘಟನೆ ಸಂಭವಿಸಿದೆ. ಬೆಳಂದೂರಿನ ವೀರೇಶ್ ಎಂಬುವವರ ಮನೆ ಮುಂದೆ ಒಣ ಹಾಕಲಾಗಿದ್ದ 8 ಸಾವಿರ ರೂ. ಮೌಲ್ಯದ 105 ರಬ್ಬರ್ ಶೀಟ್, ಬಿ.ಟಿ.ಪ್ರಕಾಶ್ ಅವರಿಗೆ ಸೇರಿದ 7 ಸಾವಿರ ರೂ. ಮೌಲ್ಯದ ಶೀಟ್ಗಳು, ಗವಟೂರು ಮಲ್ಲಾಪುರದ ಅಲೆಕ್ಸ್ ಜಾರ್ಜ್ ಅವರಿಗೆ ಸೇರಿದ 6 ಸಾವಿರ ರೂ. ಮೌಲ್ಯದ ರಬ್ಬರ್ ಶೀಟ್ಗಳ ಕಳ್ಳತನ ಮಾಡಲಾಗಿದೆ. ಈ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200