ಹೊಸ ಬಟ್ಟೆ ಧರಿಸಿ, ಹೂವಿನ ಹಾರ ಹಾಕಿಕೊಂಡು ನೇಣಿಗೆ ಶರಣಾದ KSRTC ನೌಕರ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟೆಂಬರ್ 2021 KSRTC ಚಾಲಕರೊಬ್ಬರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರಳಿಗೆ ಹೂವಿನ ಹಾರ ಹಾಕಿಕೊಂಡು, ನೇಣಿಗೆ ಶರಣಾಗಿದ್ದಾರೆ. ಗಂಗಾಧರ್ (46), ಆತ್ಮಹತ್ಯೆ ಮಾಡಿಕೊಂಡವರು. ಭದ್ರಾವತಿಯ ಹೊಸಸಿದ್ಧಾಪುರದಲ್ಲಿ ಘಟನೆ ಸಂಭವಿಸಿದೆ. ಹೊಸಸಿದ್ಧಾಪುರದ ತಮ್ಮ ಮನೆಯ ಮಹಡಿಯ ಕೊಠಡಿಯಲ್ಲಿ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗಂಗಾಧರ್ ನೇಣು ಬಿಗಿದುಕೊಳ್ಳುವ ಮುನ್ನ ಹೊಸ ಬಟ್ಟೆ ಧರಿಸಿ, ಕೊರಳಿಗೆ ಹೂವಿನ ಹಾರವನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Read more