ಗುಂಡಿ ಬಿದ್ದ ರಸ್ತೆ ಮುಂದೆ ಬೈಕ್ ಉರುಳಿಸಿ, ಡಿಫರೆಂಟ್ ಪ್ರತಿಭಟನೆ ಮಾಡಿದ ಯುವಕರು

ಶಿವಮೊಗ್ಗ ಲೈವ್.ಕಾಂ | SAGARA | 10 ಅಕ್ಟೋಬರ್ 2019 ಇಲ್ಲಿ ಬಿದ್ದು ಗಾಯಗೊಂಡವರಿಗೆ ಲೆಕ್ಕವಿಲ್ಲ. ಜಗದ್ವಿಖ್ಯಾತ ಜೋಗ ಜಲಪಾತದ ಹಾದಿಯಲ್ಲಿ ಬರಿ ಗುಂಡಿಗಳೋ ಗುಂಡಿಗಳು.. ರಸ್ತೆ ಗುಂಡಿ ಮುಂದೆ ಯುವಕರ ಡಿಫರೆಂಟ್ ಪ್ರತಿಭಟನೆ. ಸಾಗರ ತಾಳಗುಪ್ಪ ನಡುವೆ ಗಾಳಿಪುರ ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಗುಂಡಿಗಳಾಗಿವೆ. ಇವುಗಳಿಂದಾಗಿ ಜಾರಿಬಿದ್ದು ಹಲವು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಗುಂಡಿಗಳಿಗೆ ಮುಕ್ತಿ ನೀಡುವಂತೆ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದರು ಪ್ರಯೋಜವಾಗಿಲ್ಲ. ಹಾಗಾಗಿ ಸ್ಥಳೀಯ ಯುವಕರು ಗುಂಡಿ ಮುಂದೆ ನಿಂತು … Read more

22 ವರ್ಷದ ಬಳಿಕ ಅತ್ಯಂತ ಶಕ್ತಿಶಾಲಿ ಪಚ್ಚೆಲಿಂಗದ ದರ್ಶನ, ಹರಿದು ಬಂತು ಭಕ್ತ ಸಾಗರ, ಈವರೆಗೆ ದರ್ಶನ ನಿಲ್ಲಿಸಿದ್ದೇಕೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SAGARA | 8 ಅಕ್ಟೋಬರ್ 2019 22 ವರ್ಷದ ಬಳಿಕ ಶಕ್ತಿಶಾಲಿ ಪಚ್ಚೆಲಿಂಗದ ಸಾರ್ವಜನಿಕ ದರ್ಶನ. ಅಪರೂಪದ ಲಿಂಗ ದರ್ಶನಕ್ಕೆ ಹರಿತು ಬಂದು ಭಕ್ತ ಸಾಗರ. ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠದಲ್ಲಿ ವಿಜಯ ದಶಮಿಯಂದು ಅಪರೂಪದ, ಶಕ್ತಿಶಾಲಿ ಪಚ್ಚೆ ಲಿಂಗದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 22 ವರ್ಷದ ಬಳಿಕ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದರಿಂದ ಮಠಕ್ಕೆ ಭಾರಿ ಭಕ್ತರು ಆಗಮಿಸುತ್ತಿದ್ದಾರೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಸಂಜೆವರೆಗೆ ನಡೆಯಲಿದೆ … Read more

ಸಿಗಂದೂರು ಲಾಂಚ್ ಬಳಿ ಕಳಸವಳ್ಳಿಯಲ್ಲಿನ ನಕಲಿ ರಸೀದಿ ಕೇಸ್, ಪಿಡಿಒ ವಿರುದ್ಧ ಕೇಸ್ ಕೈಬಿಡುವಂತೆ ಅಗ್ರಹ

ಶಿವಮೊಗ್ಗ ಲೈವ್.ಕಾಂ | SAGARA | 27 ಸೆಪ್ಟೆಂಬರ್ 2019 ಸಿಗಂದೂರು ಲಾಂಚ್ ಬಳಿ, ಕಳಸವಳ್ಳಿ ಗ್ರಾಮದಲ್ಲಿನ ನಕಲಿ ರಸೀದಿ ಪ್ರಕರಣದಲ್ಲಿ ತುಮರಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಇವತ್ತು ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅಧಿಕಾರಿಗಳು, ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಶಾಸಕರು, ಉಪವಿಭಾಗಾಧಿಕಾರಿ ಕಚೇರಿ ಮತ್ತು ತಾಲೂಕು ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು. ತುಮರಿ ಪ್ರಭಾರ ಪಿಡಿಒ ಇಮ್ತಿಯಾಜ್ ಪಾಷಾ … Read more

ಸಿಗಂದೂರು ಲಾಂಚ್ ಬಳಿ ನಕಲಿ ಟೋಲ್ ರಶೀದಿ, ಸರ್ಕಾರದ ಹಣ ಗುಳಂ, ಎಸಿಬಿ ತನಿಖೆ ಸಾಧ್ಯತೆ

Sigandur Launch with people 1

ಶಿವಮೊಗ್ಗ ಲೈವ್.ಕಾಂ | ಸಾಗರ | 27 ಸೆಪ್ಟೆಂಬರ್ 2019 ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ಲಾಂಚ್ ಟೋಲ್ ಮತ್ತು ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಬೇಕು ಎಂದು ಸಾಗರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಗಂದೂರಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಶರಾವತಿ ಹಿನ್ನೀರು ಭಾಗದಲ್ಲಿ ಕಳಸವಳ್ಳಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತಿತ್ತು. ಇದರಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ … Read more

ಸಾಗರ ಗಣಪತಿ ಕರೆಗೆ ಎಂಎಲ್ಎ ಭೇಟಿ, ಒತ್ತುವರಿ ತಡೆಗೆ ಕ್ರಮ, ಕೆರೆ ಒತ್ತುವರಿ ತಡೆಗೆ ಕೈಗೊಂಡ ಕ್ರಮವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಸಾಗರ | 26 ಸೆಪ್ಟೆಂಬರ್ 2019 ಸಾಗರದ ಗಣಪತಿ ಕೆರೆ ಕಾಮಗಾರಿ ಸ್ಥಳವನ್ನು ಶಾಸಕ ಹರತಾಳು ಹಾಲಪ್ಪ ಪರಿಶೀಲನೆ ನಡೆಸಿದರು. ಕೆರೆ ಭಾಗ ಒತ್ತುವರಿ ಆಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಗಣಪತಿ ಕೆರೆ ಸುತ್ತಲು ಡ್ರೈನೇಜ್ ತೆಗೆಸಲಾಗುತ್ತಿದೆ. ಕೊಳಚೆ ನೀರು ಗಣಪತಿ ಕೆರೆ ಸೇರಬಾರದು ಮತ್ತು ಕೆರೆ ಜಾಗ ಒತ್ತವರಿ ಮಾಡಬಾರದು ಅನ್ನುವ ಉದ್ದೇಶದಿಂದ ಡ್ರೈನೇಜ್ ತೆಗೆಸಲಾಗುತ್ತಿದೆ. ಈಗಾಗಲೆ ಒಂದು ಭಾಗದಲ್ಲಿ ಡ್ರೈನೇಜ್ ಕೆಲಸ ಪೂರ್ಣಗೊಂಡಿದೆ. ಮತ್ತೊಂದು ಭಾಗದಲ್ಲಿ … Read more

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಅಡಕೆ ಚೀಲಗಳು ಚೆಲ್ಲಾಪಿಲ್ಲಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019 ಅಡಕೆ ಚೀಲಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಯಾವುದೆ ಸಾವು, ನೋವಿನ ವರದಿಯಾಗಿಲ್ಲ. ಆನಂದಪುರದಿಂದ ಶಿಕಾರಿಪುರಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಭೈರಾಪುರ ಕ್ರಾಸ್’ನಲ್ಲಿ ಬೆಳಗ್ಗೆ ಘಟನೆ ನಡೆದಿದೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಅಡಕೆ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಅಜಾಗರುಕತೆಯ ಚಾಲನೆಯ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – … Read more

ಮನೆ ಬಾಗಿಲ ಬೀಗ ಒಡೆದು, ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಬಾಟಲಿ ಕದ್ದ ಕಳ್ಳ..!

theft case general image

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 21 ಸೆಪ್ಟೆಂಬರ್ 2019 ಸಾಗರ ತಾಲೂಕಿನ ಬಚ್ಚಗಾರ ಗ್ರಾಮದ ಮನೆಯೊಂದರಲ್ಲಿ ಕಳ್ಳನಿಗೆ ಒಡವೆ, ಹಣ ಸಿಗದ ಕಾರಣ ಮಾವಿನ ಮಿಡಿ ಉಪ್ಪಿನಕಾಯಿಯನ್ನೇ ಕದ್ದೊಯ್ದ ಕುತೂಹಲಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ. ಸಾಗರ-ಜೋಗಫಾಲ್ಸ್ ಮಾರ್ಗದಲ್ಲಿರುವ ಬಚ್ಚಗಾರು ಗ್ರಾಮದ ಶುಂಠಿ ಸತ್ಯನಾರಾಯಣಭಟ್ಟರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಏನೂ ಸಿಕ್ಕಿಲ್ಲ. ಆದರೆ, ಸುವಾಸನೆ ಬೀರುವ ಅಪ್ಪೆ ಮಾವಿನ ಮಿಡಿಯ ಉಪ್ಪಿನಕಾಯಿ ಕಂಡಿದೆ. ಅದರ ರುಚಿಯನ್ನು ಸವಿದ ಕಳ್ಳ ಬಾಟಲಿಯನ್ನೇ … Read more

ಬಾಗಿಲಿಗೆ ಹಾಕಿದ್ದ ಬೀಗ ಹಾಗೆ ಇದೆ, ಆದರೂ ಸರ್ಕಾರಿ ಕಚೇರಿ ಸಭಾಂಗಣದಲ್ಲಿದ್ದ ಸ್ಪೀಕರ್’ಗಳು ನಾಪತ್ತೆ, ಎಲ್ಲಿ ಗೊತ್ತಾ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019 ಹಾಕಿದ್ದ ಬೀಗ ಹಾಗೆ ಇದೆ. ಆದರು ಸಭಾಂಗಣದ ಒಳಗಿದ್ದ ಸ್ಪೀಕರ್’ಗಳು ನಾಪತ್ತೆಯಾಗಿವೆ. ಇದು ಸಾಗರ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ನಡೆದ ವಿಚಿತ್ರ ಕಳ್ಳತನ. ತಾಲೂಕು ಪಂಚಾಯಿತಿ ಸಭೆ ನಡೆಯುವ ಸಭಾಂಗಣದಲ್ಲಿ ಅಳವಡಿಸಿದ್ದ ಎರಡು ಸ್ಪೀಕರ್’ಗಳು ನಾಪತ್ತೆ ಆಗಿವೆ. ಸಭಾಂಗಣದ ಬಾಗಿಲಿಗೆ ಹಾಕಿದ್ದ ಬೀಗ ಹಾಗೆಯೆ ಇದೆ. ಬೀಗಿ ಒಡೆಯದೆ ಸ್ಪೀಕರ್’ಗಳು ಕಳ್ಳತನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ದೂರು ನೀಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿರ್ಧರಿಸಿದ್ದಾರೆ. … Read more

ಸಿಗಂದೂರು ಲಾಂಚ್’ಗೆ ತೆರಳುವ ಟೋಲ್’ನಲ್ಲಿ ನಕಲಿ ರಶೀದಿ ಪುಸ್ತಕ, ಪಿಡಿಒ ಸೇರಿ ಮೂವರ ವಿರುದ್ಧ ಎಫ್ಐಆರ್

Sigandur-Launch-General-Image

ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019 ಟೋಲ್’ಗೇಟ್ ಶುಲ್ಕ ಸಂಗ್ರಹಿಸಲು ನಕಲಿ ರಶೀದಿ ಪುಸ್ತಕ ಬಳಸಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತುಮರಿ ಗ್ರಾಮ ಪಂಚಾಯಿತಿ ಪಿಡಿಒ ಇಮ್ತಿಯಾಜ್ ಪಾಷಾ, ಟೋಲ್’ಗೇಟ್ ಸಿಬ್ಬಂದಿಗಳಾದ ಮಧುಕುಮಾರ್ ಮತ್ತು ಪವನ್ ಮೇಲೆ ಎಫ್ಐಆರ್ ದಾಖಲಾಗಿದೆ. ಏನಿದು ಪ್ರಕರಣ? ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಸಿಗಂದೂರು ಲಾಂಚ್’ಗೆ ತೆರಳುವ ಕಳಸವಳ್ಳಿ ಟೋಲ್’ಗೇಟ್’ನಲ್ಲಿ ನಕಲಿ … Read more

ಸಿಗಂದೂರಿಗೆ ತೆರಳುತ್ತಿದ್ದ ಲಾಂಚುಗಳ ಮುಖಾಮುಖಿ ಡಿಕ್ಕಿ, ಶರಾವತಿ ಹೊಳೆ ಮಧ್ಯೆ ತಪ್ಪಿದ ಭಾರಿ ದುರಂತ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 11 ಸೆಪ್ಟೆಂಬರ್ 2019 ಸಿಗಂದೂರಿಗೆ ತೆರಳುತ್ತಿದ್ದ ಎರಡು ಲಾಂಚ್‌ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಶರಾವತಿ ಹೊಳೆ ಮಧ್ಯದಲ್ಲಿ ಘಟನೆ ಸಂಭವಿಸಿದ್ದು, ಸ್ವಲ್ಪದರಲ್ಲೆ ಭಾರಿ ಅನಾಹುತ ತಪ್ಪಿದೆ. ಶರಾವತಿ – 1 ಮತ್ತು ಶರಾವತಿ – 2 ಲಾಂಚ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ‌. ಒಂದು ಲಾಂಚ್ ಹೊಳೆಬಾಗಿಲಿನಿಂದ ಕಳಸವಳ್ಳಿಗೆ ತೆರಳುತ್ತಿತ್ತು. ಮತ್ತೊಂದು ಲಾಂಚ್ ಕಳಸವಳ್ಳಿಯಿಂದ ಹೊಳೆಬಾಗಿಲು ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕರ ಅಜಾಗರುಕತೆಯಿಂದಾಗಿ ಘಟನೆ ಸಂಭವಿಸಿದೆ. ಎರಡು ಲಾಂಚ್’ನಲ್ಲಿ ಸುಮಾರು … Read more