ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 27 SEPTEMBER 2024 : ಹಣದ ಪಡೆದು ಜಾಮೀನು (Bail) ನೀಡಲು ಬಂದಿದ್ದ ಮಹಿಳೆ ಸೇರಿ ಇಬ್ಬರ ವಿರುದ್ಧ ನ್ಯಾಯಾಧೀಶರ ಸೂಚನೆ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣವೊಂದರಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನೀಡಲು ಬೆಂಗಳೂರಿನ ಗಂಗಮ್ಮ ಎಂಬುವವರು ಬಂದಿದ್ದರು. ಆರೋಪಿ ತನಗೆ ಪರಿಚಯ ಇದ್ದಾರೆ ಎಂದು ತಿಳಿಸಿದ್ದರು. ಪ್ರಶ್ನಿಸಿದಾಗ ಗಂಗಮ್ಮಳಿಗು, ಆರೋಪಿಗು ಪರಿಯವಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಲ್ಲದೆ ಜಾಮೀನು ನೀಡಿದರೆ 5 ಸಾವಿರ ರೂ. ಹಣ ನೀಡುವುದಾಗಿ ಮಾಮು ಎಂಬಾತ ತಿಳಿಸಿದ್ದ ಎಂದು ನ್ಯಾಯಾಲಯದಲ್ಲಿ ಗಂಗಮ್ಮ ಒಪ್ಪಿಕೊಂಡಿದ್ದಾರೆ.

ಪರಿಚಯ ಇಲ್ಲದಿದ್ದರು ಪರಿಚಯವಿದೆ ಎಂದು, ಹಣದ ಆಮಿಷಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಹಾಗಾಗಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆದೇಶಿಸಿದರು. ಅದರಂತೆ ನ್ಯಾಯಾಲಯದ ಹಿರಿಯ ಶಿರಸ್ತೆದಾರ್ ಅವರ ದೂರಿನ ಮೇರೆಗೆ ಗಂಗಮ್ಮ ಮತ್ತು ಮಾಮು ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ರೈಲ್ವೆ ಕೋಚಿಂಗ್ ಟರ್ಮಿನಲ್ಗೆ ಮಿನಿಸ್ಟರ್ ಭೇಟಿ, ಯಾವಾಗ ಮುಗಿಯುತ್ತೆ ಕಾಮಗಾರಿ?
LATEST NEWS
- ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು















