ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಫೆಬ್ರವರಿ 2022
ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ.
ಉದ್ಯಮಿ ರಂಗನಾಥ ಎಂಬುವವರು ವಂಚನೆ ಒಳಗಾಗಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ಚಿಕ್ಕಣ್ಣ ಎಂಬಾತ ವಂಚನೆ ಮಾಡಿದ್ದಾನೆ. ಆತ ಆಂಧ್ರದ ಅನಂತಪುರ ಜಿಲ್ಲೆಯ ಹೇಮಾವತಿ ತಾಲೂಕಿನವನು.
ವಂಚನೆ ಆಗಿದ್ದು ಹೇಗೆ?
2019ರಲ್ಲಿ ರಂಗನಾಥ ಅವರಿಗೆ ಚಿಕ್ಕಣ್ಣ ಎಂಬುವವರ ಪರಿಚಯವಾಗಿತ್ತು. ರೈಲ್ವೆ ಇಲಾಖೆಯಲ್ಲಿ ಯಾವುದೆ ಕೆಲಸ ಬೇಕಿದ್ದರೂ ಕೊಡಿಸುವುದಾಗಿ ಚಿಕ್ಕಣ್ಣ ನಂಬಿಸಿದ್ದ. ಅದರಂತೆ ಇತ್ತೀಚೆಗೆ ರಂಗನಾಥ ಅವರು ಒಂದು ಕೆಲಸಕ್ಕಾಗಿ ಚಿಕ್ಕಣ್ಣನ ನೆರವು ಕೇಳಿದ್ದರು.
ಕೆಲಸ ಆಗಬೇಕಿದ್ದರೆ ಹಣ ಕೊಡಬೇಕು ಎಂದು ಚಿಕ್ಕಣ್ಣ ತಿಳಿಸಿದ್ದರಿಂದ ರಂಗನಾಥ ಅವರು ಹಣ ವರ್ಗಾಯಿಸಿದ್ದರು. ಒಟ್ಟು 87.53 ಲಕ್ಷ ರೂ. ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು.
ಅದರೆ ಚಿಕ್ಕಣ್ಣ ಕೆಲಸ ಮಾಡಿಕೊಡದ ಹಿನ್ನೆಲೆ ಹಣವನ್ನು ಹಿಂತಿರುಗಿಸುವಂತೆ ರಂಗನಾಥ ಅವರು ಒತ್ತಡ ಹೇರಿದ್ದಾರೆ. ಆಗ 16.90 ಲಕ್ಷ ರೂ. ಹಣವನ್ನು ಹಿಂತಿರುಗಿಸಿದ್ದಾನೆ.
ಉಳಿದ 70.63 ಲಕ್ಷ ರೂ. ಹಣ ಬಾಕಿ ಉಳಿಸಿಕೊಂಡಿದ್ದ ಚಿಕ್ಕಣ್ಣ, ದಿಢೀರನೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ರಂಗನಾಥ ಅವರು ದೂರು ನೀಡಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಸಾಗರದಲ್ಲಿ ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು ನಿಲುಗಡೆ ಸಮಯ ಹೆಚ್ಚಳ
About Shivamogga Live | Shimoga Police | Shimoga Live Whatsapp 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200