ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022
ಪೊಲೀಸರ ನಿರಂತರ ದಾಳಿ, ಮತ್ತಿನಲ್ಲಿರುವವರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದರಿಂದ ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಕಂಟ್ರೋಲ್’ಗೆ ಬಂದಿದೆ. ಎಲ್ಲೆಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ. ಅಷ್ಟೆ ಅಲ್ಲಾ, ಜಿಲ್ಲೆಗೆ ಗಾಂಜಾ ಸರಬರಾಜು ಪ್ರಮಾಣವು ಕುಸಿತ ಕಂಡಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರೆಸ್ ಟ್ರಸ್ಟ್’ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಗಾಂಜಾ ಮಾರಾಟ ಮತ್ತು ಸೇವನೆ ಪ್ರಮಾಣದಲ್ಲಿ ಕಡಿಮೆಯಾಗಿರುವ ಕುರಿತು ಮಾಹಿತಿ ನೀಡಿದರು.
ರಕ್ಷಣಾಧಿಕಾರಿ ಹೇಳಿದ್ದೇನು?
♦ ‘ಶಿವಮೊಗ್ಗದಲ್ಲಿ ಎಲ್ಲೆಂದರಲ್ಲಿ ಗಾಂಜಾ ಮಾರಾಟವಾಗುತ್ತಿತ್ತು. ಎಲ್ಲರಿಗೂ ಗಾಂಜಾ ಸಿಗುವ ಹಾಗೆ ಓಪನ್ ಮಾರ್ಕೆಟ್’ನಲ್ಲಿ ಲಭ್ಯವಿತ್ತು.’
♦ ‘ನಿರಂತರ ದಾಳಿಯಿಂದಾಗಿ ಗಾಂಜಾ ಮಾರಾಟ ಕಂಟ್ರೋಲ್’ಗೆ ಬಂದಿದೆ. ಓಪನ್ ಮಾರ್ಕೆಟ್’ನಲ್ಲಿ ಈಗ ಗಾಂಜಾ ಲಭ್ಯವಿಲ್ಲ. ಪರಿಚಿತರಿಗೆ ಮಾತ್ರ ಗಾಂಜಾ ಪೂರೈಕೆ ಮಾಡಲಾಗುತ್ತಿದೆ. ಫೋನ್ ಕರೆ ಮಾಡಿದವರಿಗಷ್ಟೆ ಗಾಂಜಾ ಸಿಗುತ್ತಿದೆ.’
♦ ‘ಮೊದಲು ಶಿವಮೊಗ್ಗ ಜಿಲ್ಲೆಗೆ 50 – 60 ಕೆ.ಜಿ.ಯಷ್ಟು ಗಾಂಜಾ ಬರುತ್ತಿತ್ತು. ಈಗ ಇದೆಲ್ಲ ಸಂಪೂರ್ಣ ಕಡಿತವಾಗಿದೆ. ಬಳ್ಳಾರಿ, ಚನ್ನಗಿರಿ, ತರೀಕೆರೆ ಮುಂತಾದ ಕಡೆಯಿಂದ ಒಂದು ಅಥವಾ ಎರಡು ಕೆ.ಜಿ.ಯಷ್ಟು ಗಾಂಜಾ ಮಾತ್ರ ಬರುತ್ತಿದೆ.’
ಇದನ್ನೂ ಓದಿ | ಗಾಜನೂರು ಸುತ್ತಮುತ್ತ ಪಾರ್ಟಿ ಮಾಡುವವರಿಗೆ ಕಾದಿದೆ ಶಾಕ್, ಖಡಕ್ ಕಾರ್ಯಾಚರಣೆಗೆ ರೆಡಿಯಾಗ್ತಿದೆ ಖಾಕಿ ಟೀಮ್
ಇದನ್ನೂ ಓದಿ | ‘ಜನರೊಂದಿಗೆ ಹೇಗೆ ವರ್ತಿಸಬೇಕು ಅನ್ನುವ ಕುರಿತು ಶಿವಮೊಗ್ಗ ಪೊಲೀಸರಿಗೆ ತರಬೇತಿ’
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200