ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಪೊಲೀಸರ ನಿರಂತರ ದಾಳಿ, ಮತ್ತಿನಲ್ಲಿರುವವರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದರಿಂದ ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಕಂಟ್ರೋಲ್’ಗೆ ಬಂದಿದೆ. ಎಲ್ಲೆಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ. ಅಷ್ಟೆ ಅಲ್ಲಾ, ಜಿಲ್ಲೆಗೆ ಗಾಂಜಾ ಸರಬರಾಜು ಪ್ರಮಾಣವು ಕುಸಿತ ಕಂಡಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರೆಸ್ ಟ್ರಸ್ಟ್’ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಗಾಂಜಾ ಮಾರಾಟ ಮತ್ತು ಸೇವನೆ ಪ್ರಮಾಣದಲ್ಲಿ ಕಡಿಮೆಯಾಗಿರುವ ಕುರಿತು ಮಾಹಿತಿ ನೀಡಿದರು.
ರಕ್ಷಣಾಧಿಕಾರಿ ಹೇಳಿದ್ದೇನು?
♦ ‘ಶಿವಮೊಗ್ಗದಲ್ಲಿ ಎಲ್ಲೆಂದರಲ್ಲಿ ಗಾಂಜಾ ಮಾರಾಟವಾಗುತ್ತಿತ್ತು. ಎಲ್ಲರಿಗೂ ಗಾಂಜಾ ಸಿಗುವ ಹಾಗೆ ಓಪನ್ ಮಾರ್ಕೆಟ್’ನಲ್ಲಿ ಲಭ್ಯವಿತ್ತು.’
♦ ‘ನಿರಂತರ ದಾಳಿಯಿಂದಾಗಿ ಗಾಂಜಾ ಮಾರಾಟ ಕಂಟ್ರೋಲ್’ಗೆ ಬಂದಿದೆ. ಓಪನ್ ಮಾರ್ಕೆಟ್’ನಲ್ಲಿ ಈಗ ಗಾಂಜಾ ಲಭ್ಯವಿಲ್ಲ. ಪರಿಚಿತರಿಗೆ ಮಾತ್ರ ಗಾಂಜಾ ಪೂರೈಕೆ ಮಾಡಲಾಗುತ್ತಿದೆ. ಫೋನ್ ಕರೆ ಮಾಡಿದವರಿಗಷ್ಟೆ ಗಾಂಜಾ ಸಿಗುತ್ತಿದೆ.’
♦ ‘ಮೊದಲು ಶಿವಮೊಗ್ಗ ಜಿಲ್ಲೆಗೆ 50 – 60 ಕೆ.ಜಿ.ಯಷ್ಟು ಗಾಂಜಾ ಬರುತ್ತಿತ್ತು. ಈಗ ಇದೆಲ್ಲ ಸಂಪೂರ್ಣ ಕಡಿತವಾಗಿದೆ. ಬಳ್ಳಾರಿ, ಚನ್ನಗಿರಿ, ತರೀಕೆರೆ ಮುಂತಾದ ಕಡೆಯಿಂದ ಒಂದು ಅಥವಾ ಎರಡು ಕೆ.ಜಿ.ಯಷ್ಟು ಗಾಂಜಾ ಮಾತ್ರ ಬರುತ್ತಿದೆ.’
ಇದನ್ನೂ ಓದಿ | ಗಾಜನೂರು ಸುತ್ತಮುತ್ತ ಪಾರ್ಟಿ ಮಾಡುವವರಿಗೆ ಕಾದಿದೆ ಶಾಕ್, ಖಡಕ್ ಕಾರ್ಯಾಚರಣೆಗೆ ರೆಡಿಯಾಗ್ತಿದೆ ಖಾಕಿ ಟೀಮ್
ಇದನ್ನೂ ಓದಿ | ‘ಜನರೊಂದಿಗೆ ಹೇಗೆ ವರ್ತಿಸಬೇಕು ಅನ್ನುವ ಕುರಿತು ಶಿವಮೊಗ್ಗ ಪೊಲೀಸರಿಗೆ ತರಬೇತಿ’
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು







