| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ: ಬಹು ವರ್ಷದ ಬೇಡಿಕೆಯಾಗಿದ್ದ ಪ್ರೀ ಪೇಯ್ಡ್ ಆಟೋ (Pre Paid) ವ್ಯವಸ್ಥೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಆರಂಭವಾಗಿದೆ. ಮೊದಲ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲು ಇಳಿದ ಪ್ರಯಾಣಿಕರು ಯಾವುದೇ ಕಿರಿಕಿರಿ ಇಲ್ಲದೆ ಆಟೋದಲ್ಲಿ ನಿಗದಿತ ಸ್ಥಳಕ್ಕೆ ತಲುಪುತ್ತಿದ್ದಾರೆ.
ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಅಗತ್ಯತೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಪ್ರೀ ಪೇಯ್ಡ್ ವ್ಯವಸ್ಥೆ ಜಾರಿಯಾದ ಮೇಲೆ ಪ್ರಯಾಣಿಕರ ಅಭಿಪ್ರಾಯ ಸಹಿತ ವರದಿ ಪ್ರಕಟಿಸಲಾಯಿತು. ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಇದರ ವಿಶೇಷತೆ ಎನು? ಇದರ ಡಿಟೇಲ್ಸ್ ಇಲ್ಲಿದೆ.
ಇಲ್ಲಿದೆ ಪ್ರೀ ಪೇಯ್ಡ್ ಡಿಟೇಲ್ಸ್
ಶಿವಮೊಗ್ಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ಪ್ರೀ ಪೇಯ್ಡ್ ಆಟೋ ಕೌಂಟರ್ ಆರಂಭಿಸಲಾಗಿದೆ. ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕೌಂಟರ್ ತೆರೆದಿರಲಿದೆ. ಪ್ರಯಾಣಿಕರು ಈ ಕೌಂಟರ್ಗಳಲ್ಲಿ ಟೋಕನ್ ಪಡೆಯಬೇಕು. ಸದ್ಯಕ್ಕೆ ಈ ಟೋಕನ್ ವ್ಯವಸ್ಥೆ ಉಚಿತವಾಗಿದೆ.
ಪ್ರೀ ಪೇಯ್ಡ್ ಆಟೋ ಬುಕಿಂಗ್ ಮಾಡಲು ಪೊಲೀಸ್ ಸಿಬ್ಬಂದಿ ಮೊಬೈಲ್ ಫೋನ್ನಲ್ಲಿ ಸಿಂಪ್ಲಿ ಬುಕಿಂಗ್ ಅಪ್ಲಿಕೇಷನ್ ಬಳಕೆ ಮಾಡುತ್ತಿದೆ. ಪ್ರಯಾಣಿಕರು ತೆರಳಬೇಕಿರುವ ಬಡಾವಣೆ ಅಥವಾ ಸ್ಥಳದ ಹೆಸರು ನಮೂದಿಸಲಾಗುತ್ತದೆ.

ಆಟೋಗಳ ರಿಜಿಸ್ಟ್ರೇಷನ್ ನಂಬರ್ ಬದಲು ಸಂಚಾರ ಪೊಲೀಸರು ನೀಡಿರುವ SMG ನಂಬರ್ಗಳನ್ನು ಆಪ್ನಲ್ಲಿ ಅಪ್ಡೇಟ್ ಮಾಡಿ ಕ್ಲಿಕ್ ಮಾಡಿದರೆ, ರಶೀದಿ ಪ್ರಿಂಟ್ ಆಗಲಿದೆ.
ರಶೀದಿಯಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಮಾಹಿತಿ ಇರಲಿದೆ. ಪ್ರಯಾಣಿಕರು ತೆರಳಬೇಕಿರುವ ಸ್ಥಳ, ಅದಕ್ಕೆ ನಿಗದಿ ಆಗಿರುವ ದರ, ಆಟೋ SMG ನಂಬರ್, ಬುಕಿಂಗ್ ಸಮಯ, ಹೆಲ್ಪ್ ಲೈನ್ ನಂಬರ್, ರಾತ್ರಿ ವೇಳೆ ಒನ್ ಅಂಡ್ ಹಾಫ್ ದರ ನೀಡಬೇಕು ಸೇರಿದಂತೆ ವಿವಿಧ ಸಲಹೆ ಮತ್ತು ಮಾಹಿತಿ ಈ ರಶೀದಿಯಲ್ಲಿ ಇರಲಿದೆ.
ಪ್ರಯಾಣಿಕರು ತಾವು ತಿಳಿಸಿದ ಸ್ಥಳದಿಂದ 250 ಮೀಟರ್ ವ್ಯಾಪ್ತಿಯಲ್ಲಿ ಈ ದರ ಅನ್ವಯ ಆಗಲಿದೆ. ಉದಾಹರಣೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎಂದು ರಶೀದಿ ಪಡೆದವರು ಅದರ 250 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯೇ ಆಟೋದಿಂದ ಇಳಿದರು ರಶೀದಿಯಲ್ಲಿ ನಮೂದಿಸಿರುವ ದರವನ್ನು ನೀಡಬೇಕಾಗುತ್ತದೆ.
ಸದ್ಯ ಪ್ರೀ ಪ್ರೇಯ್ಡ್ ಆಟೋ ವ್ಯವಸ್ಥೆಯಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೊಂದೆಡೆ ಸಂಚಾರ ಪೊಲೀಸರು ರೈಲ್ವೆ ನಿಲ್ದಾಣದ ಮುಂಭಾಗ ಆಟೋಗಳಿಂದ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಪ್ರಯಾಣಿಕರು ಈಗ ಸುಲಭ ಮತ್ತು ಕಿರಿಕಿರಿ ಇಲ್ಲಿದೆ ನಿಲ್ದಾಣದ ಒಳಗೆ ಹೊರಗೆ ಹೋಗಿ ಬರಬಹುದಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ ಡಾ. ಧನಂಜಯ ಸರ್ಜಿ, ಏನದು?
Pre Paid Auto in Shimoga Railway Station
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
- ಶಿವಮೊಗ್ಗದಲ್ಲಿ ಬಸ್ ಹತ್ತಿ ಆಧಾರ್ ಕಾರ್ಡ್ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
![]()