ಹೊಂಬುಜದಲ್ಲಿ ದೇವಿಗೆ ಭತ್ತದ ಫಸಲು ಸಮರ್ಪಣೆ, ವಿಶೇಷ ಪೂಜೆ

271025-Special-Pooja-at-Hombuja-temple.webp

ರಿಪ್ಪನ್‌ಪೇಟೆ: ಹೊಂಬುಜ (Hombuja) ಜೈನಮಠದಲ್ಲಿ ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಪ್ರಯುಕ್ತ ಕ್ಷೇತ್ರದ ಕೃಷಿ ಭೂಮಿಯಲ್ಲಿ ಶಾಸ್ತೋಕ್ತವಾಗಿ ಪೂರ್ವಪರಂಪರೆಯಂತೆ ಹೊಸ ಭತ್ತದ ಪೈರು ಕಟಾವು ನೆರವೇರಿಸಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಸಮರ್ಪಿಸಲಾಯಿತು. ಇದೆ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ‍‍ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂತಾಯಿಯ ವರಪ್ರಸಾದ. ಭತ್ತ ಆಹಾರದ್ರವ್ಯವಾಗಿ ಬಳಸುವುದರಿಂದ ಅನ್ನಪ್ರಸಾದ ರೂಪವಾಗಿ ಶರೀರ ಪೋಷಣೆ ಆಗುತ್ತದೆ. ಭಕ್ತರಿಗೆ ನಿರಂತರ ಅನ್ನಪ್ರಸಾದ ಲಭಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮಹಾಮಾತೆ … Read more

ಹೊಂಬುಜದಲ್ಲಿ ವಿಜೃಂಭಣೆಯ ರಥೋತ್ಸವ, ಹೇಗಿತ್ತು ವೈಭವ?

Hombuja-temple-ratotsava-in-ripponpete

ರಿಪ್ಪನ್‌ಪೇಟೆ : ಹೊಂಬುಜ (Hombuja) ಕ್ಷೇತ್ರದ ಶ್ರೀ ಪದ್ಮಾವತಿ ದೇವಿ ಹಾಗೂ ಶ್ರೀ ಪಾರ್ಶ್ವನಾಥ ತೀರ್ಥಂಕರರ ವಾರ್ಷಿಕ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಶನಿವಾರ ಮುಂಜಾನೆಯಿಂದ ಕ್ಷೇತ್ರ ದೇವತೆಗಳಿಗೆ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ 12.53ಕ್ಕೆ ಶ್ರೀ ಪದ್ಮಾವತಿ ದೇವಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿ ಉತ್ಸವ ಮೂರ್ತಿಗಳ ಮಹಾರಥೋತ್ಸವ ನಡೆಯಿತು. ರಾಜ್ಯ ಹೊರರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ಭಾವಪರವಶರಾದರು. ಜಾತ್ರಾ ಮಹೋತ್ಸವದಲ್ಲಿ ಶ್ರೀ 108 ಕುಂಥುಸಾಗರ ಮಹಾರಾಜ್, ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ … Read more

ಹೊಂಬುಜದಲ್ಲಿ ಇಂದ್ರಧ್ವಜ ಮಹಾಮಂಡಲ, ಅಂಚೆ ಚೀಟಿ ಲೋಕಾರ್ಪಣೆ

Dr-Veerendra-Heggade-releases-stamp-at-hombuja-in-ripponpete

RIPPONPETE NEWS, 15 NOVEMBER 2024 : ಆಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ಪದಾರೋಹಣ ಶತಮಾನೋತ್ಸವದ ಸ್ಮರಣಾರ್ಥ, ಹೊಂಬುಜ ಜೈನಮಠದಲ್ಲಿ ಇಂದ್ರಧ್ವಜ ಮಹಾಮಂಡಲ ಧಾರ್ಮಿಕ ಕೈಂಕರ್ಯ ನಡೆಯಿತು. ಅಂಚೆ ಇಲಾಖೆಯ ವತಿಯಿಂದ ಶಾಂತಿಸಾಗರ ಮುನಿವರ್ಯರ ಭಾವಚಿತ್ರದ ಅಂಚೆ ಚೀಟಿ ಪ್ರಕಟಿಸಲಾಗಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಂಚೆ ಚೀಟಿ (Stamp) ಲೋಕಾರ್ಪಣೆಗೊಳಿಸಿದರು. ವಿಶ್ವದಲ್ಲಿ ಮಾನವತಾ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ, ಮನನ ಮಾಡುವಂತೆ ಮಾಡಿದ ಜೈನ ಧರ್ಮದ ಪ್ರಸಾರಕ ಶಾಂತಿಸಾಗರ ಮುನಿಮಹಾರಾಜರ ಜೀವನ ಕ್ರಮ ಸರ್ವಕಾಲಕ್ಕೂ ಪ್ರಸ್ತುತ. ಇಂದ್ರಧ್ವಜ ಮಹಾಮಂಡಲ … Read more

ಹೊಂಬುಜದಲ್ಲಿ ದೇವಿಗೆ ಚಿನ್ನದ ಸೀರೆ ಅರ್ಪಣೆ, ಲಕ್ಷ ದೀಪೋತ್ಸವ, ಹೇಗಿತ್ತು ವೈಭವ? ಹೇಗಿದೆ ಸೀರೆ?

041223-Golden-Saree-to-Hombuja-Padmavathi-temple-in-Ripponpete.webp

SHIVAMOGGA LIVE NEWS | 4 DECEMBER 2023 RIPPONPETE : ಇಲ್ಲಿನ ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ದೇವಿಗೆ ಭಕ್ತರು ಚಿನ್ನದ ಸೀರೆ (Gold saree) ಅರ್ಪಿಸಿದ್ದಾರೆ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇವಿಗೆ ವಿಶೇಷವಾದ ಸೀರೆ ಅರ್ಪಿಸಲಾಯಿತು. ವಿಶಿಷ್ಟ ವಿನ್ಯಾಸ ಆಕರ್ಷಕವಾಗಿರುವ ಚಿನ್ನದ ಸೀರೆಯನ್ನು (Gold saree) ರಾಜ್ಯದ ವಿವಿಧೆಡೆಯ ಭಕ್ತರು ಪದ್ಮಾವತಿ ದೇವಿಗೆ ಅರ್ಪಿಸಿದರು. ದೇವಿಗೆ ಸೀರೆ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇಗುಲದಲ್ಲಿ ಲಕ್ಷ ದೀಪೋತ್ಸವ ಶ್ರೀ … Read more

ಹೊಂಬುಜ ಮಠದಲ್ಲಿ ವಾರ್ಷಿಕ ಪೂಜಾ ಮಹೋತ್ಸವ, 108 ಕಳಾಶಾಭಿಷೇಕ

Devendra-Keerthi-Bhattaraka-Swamiji-Hombuja-Jain-temple-pooja

SHIVAMOGGA LIVE NEWS | 28 APRIL 2023 RIPPONPETE : ಹೊಂಬುಜ ಮಠದ (Hombuja) ಗುಡ್ಡದ ಬಸದಿ ತ್ರಿಕೂಟ ಜಿನಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನೆರವೇರಿಸಲಾಯಿತು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಾರ್ಶ್ವನಾಥ ಸ್ವಾಮಿ, ಶಾಂತಿನಾಥ ಸ್ವಾಮಿ, ಬಹುಬಲಿ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು 108 ಕಳಶಾಭಿಷೇಕ ನಡೆಯಿತು. ಇದೇ ವೇಳೆ ಧರಣೇಂದ್ರ ಯಕ್ಷ ಮತ್ತು ಪದ್ಮಾವತಿ ದೇವಿಯ ವಿಶೇಷ ಪೂಜೆ ನೆರವೇರಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಹೊಂಬುಜ (Hombuja) ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ … Read more

ಹೊಂಬುಜ ಜೈನಮಠದಲ್ಲಿ ಕೃತಕ ಕಾಲು ಜೋಡಣಾ ಶಿಬಿರ, ಹೆಸರು ನೋಂದಾಯಿಸಲು ಜ.5 ಕೊನೆ ದಿನ

Hombuja-Padmavathi-temple-humcha

SHIVAMOGGA LIVE NEWS | 3 JANUARY 2023 ರಿಪ್ಪನ್‌ ಪೇಟೆ: ಹೊಂಬುಜ ಜೈನಮಠದಲ್ಲಿ ಜ.6ರಂದು ಪಂಚಕಲ್ಯಾಣ ಪೂಜಾಮಹೋತ್ಸವ ಆಯೋಜಿಸಲಾಗಿದೆ. ಇದರ ಅಂಗವಾಗಿ ಶ್ರೀಮಠ, ಪದ್ಮಾವತಿ ಏಜುಕೇಷನ್ ಟ್ರಸ್ಟ್, ಆಲ್ ಇಂಡಿಯಾ ಯೂತ್ ಫೆಡರೇಷನ್‌, ಮಹಾವೀರ ಲಿಂಬ್‌ (limb) ಸೆಂಟರ್ ಹಾಗೂ ಹುಬ್ಬಳ್ಳಿ ಜೈನಧರ್ಮದ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿದೆ. ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಗಳ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ಆಯೋಜಿಸಲಾಗಿದೆ. ಶಿವಮೊಗ್ಗ ಹಾಗೂ … Read more

ಕೋಟೆ ಆಂಜನೇಯನ ದರ್ಶನ ಪಡೆದು ಪುನೀತರಾದ ಭಕ್ತರು, ಸಿಗಂದೂರು, ಹೊಂಬುಜದಲ್ಲೂ ದೇವಿಯ ದರ್ಶನ ಶುರು

020420 Ramanavami in Kote during Corona 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಜುಲೈ 2021 ಎರಡು ತಿಂಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು ಇವತ್ತಿನಿಂದ ಬಾಗಿಲು ತೆರೆದಿವೆ. ಬೆಳಗ್ಗೆಯಿಂದ ನಿರಂತರವಾಗಿ ಭಕ್ತರು ದೇವರ ದರ್ಶನಕ್ಕೆ ಭೇಟಿ ನೀಡುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಕೋವಿಡ್ ಪ್ರಕರಣಗಳು ಕಡಿಮೆಯಾದ ಹಿನ್ನೆಲೆ, ಸರ್ಕಾರ ದೇವಸ್ಥಾನಗಳ ಬಾಗಿಲು ತೆಗೆಯಲು ಅವಕಾಶ ನೀಡಿದೆ. ಶಿವಮೊಗ್ಗ ಸಿಟಿಯಲ್ಲಿ ಹೇಗಿದೆ ವ್ಯವಸ್ಥೆ? ಸರ್ಕಾರದ ಆದೇಶದ ಹಿನ್ನೆಲೆ ಶಿವಮೊಗ್ಗ ನಗರದ ಪ್ರಮುಖ ದೇವಸ್ಥಾನಗಳ ಬಾಗಿಲು ತೆಗೆಯಲಾಗಿದೆ. ಕೋಟೆ ಶ್ರೀ … Read more

ಹೊಂಬುಜದಲ್ಲಿ ಪ್ರವೇಶ ನಿಷೇಧ, ಆನ್ಲೈನ್ನಲ್ಲಿ ಪೂಜೆ ವೀಕ್ಷಣೆಗೆ ಅವಕಾಶ

161020 Hombuja Temple Hosanagara 1

ಶಿವಮೊಗ್ಗ ಲೈವ್.ಕಾಂ | HOMBUJA NEWS | 23 APRIL 2021 ಹೊಂಬುಜ ಜೈನ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೇ 4ರವರೆಗೆ ಮಠಕ್ಕೆ ಭಕ್ತರ ಪ್ರವೇಶ, ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಮಠದಲ್ಲಿ  ವಸತಿ, ಭೋಜನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಆನ್‍ಲೈನ್‍ ಮೂಲಕ ಅಭಿಷೇಕ ಮಾಡಿಸುವ ಅವಕಾಶವಿದೆ. ಫೇಸ್‍ಬುಕ್‍ನಲ್ಲಿ ಹೊಂಬುಜ ಪದ್ಮಾವತಿ ಪೇಜ್‍ ಮೂಲಕ ವೀಕ್ಷಿಸಬಹುದಾಗಿದೆ ಎಂದು ಮಠದ ಆಡಳಿತಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ … Read more