ರಿಪ್ಪನ್‌ಪೇಟೆ ಸೇರಿ ವಿವಿಧೆಡೆ ಡಿ.3ರಂದು ಇಡೀ ದಿನ ಕರೆಂಟ್‌ ಇರಲ್ಲ

POWER-CUT-UPDATE-NEWs ELECTRICITY

ರಿಪ್ಪನ್‌ಪೇಟೆ: ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಮೆಸ್ಕಾಂ ಶಾಖೆ ವ್ಯಾಪ್ತಿಯಲ್ಲಿ ಡಿ.3ರಂದು ಬೆಳಗ್ಗೆ 9.30ರಿಂದ ಸಂಜೆ 6 ರವರೆಗೆ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ರಿಪ್ಪನ್‌ಪೇಟೆ, ಹೆದ್ದಾರಿಪುರ, ಕೆಂಚನಾಲ, ಗರ್ತಿಕೆರೆ, ಬಾಳೂರು, ಬೆಳ್ಳೂರು, ಅರಸಾಳು, ಕೋಡೂರು, ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶ ಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ತಿಳಿಸಿದೆ. ಇದನ್ನೂ ಓದಿ » ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆಯ ಮಹಿಳೆಗೆ KFD ಪಾಸಿಟಿವ್‌, ಸರ್ವೇಕ್ಷಣಾಧಿಕಾರಿ ಏನಂದ್ರು? ಚಿಕಿತ್ಸೆಗೆ ಏನೆಲ್ಲ ವ್ಯವಸ್ಥೆಯಾಗಿದೆ?

MONKEY-FEVER-KFD-IN-SHIMOGA

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಮಂಗಳನ ಕಾಯಿಲೆ) ಆತಂಕ ಶುರುವಾಗಿದೆ. ಮಹಿಳೆಯೊಬ್ಬರಿಗೆ KFD ಪಾಸಿಟಿವ್‌ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸನಗರದ ಮಹಿಳೆಗೆ ಕೆಎಫ್‌ಡಿ ಕೆಎಫ್‌ಡಿ ಪತ್ತೆಗೆ ಪರೀಕ್ಷೆಗಳನ್ನು (TESTING) ನಡೆಸುತ್ತಿದ್ದಾಗ ಹೊಸನಗರದ 54 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಕೂಡಲೆ ಮಹಿಳೆಗೆ ಚಿಕಿತ್ಸೆ (TREATMENT) ಆರಂಭಿಸಲಾಗಿದೆ. ಸದ್ಯ ಅವರು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಎಷ್ಟಾಗಿತ್ತು ಪ್ರಕರಣ? ಸಾಮಾನ್ಯವಾಗಿ ಮಂಗನಕಾಯಿಲೆ ನವೆಂಬರ್‌ನಿಂದ ಜನವರಿವರೆಗೆ ಹರಡುತ್ತದೆ. ಕಳೆದ ವರ್ಷ ಕೆಎಫ್‌ಡಿಗೆ … Read more

ಶಿವಮೊಗ್ಗದಲ್ಲಿ ಚಳಿ ಜೋರು, ಎಲ್ಲೆಲ್ಲು ತಂಪು ತಂಪು ವಾತಾವರಣ, ತಾಲೂಕುಗಳಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗದಲ್ಲಿ ಥಂಡಿ ಜೋರಾಗಿದೆ. ದಟ್ಟ ಮಂಜು, ಮೈ ಕೊರೆಯುವ ಚಳಿ ಆವರಿಸಿದೆ. ಇದರ ಜೊತೆಗೆ ಬಿಸಿಲಿನ ಅಬ್ಬರವು ಜೋರಾಗಿದೆ. ಜಿಲ್ಲೆಯಲ್ಲಿ ಮತ್ತೆ ಚಳಿ ಹೆಚ್ಚಾಗಿದೆ. ಸಂಜೆಯಿಂದಲೆ ವಾತಾವರಣ ತಂಪೇರುತ್ತಿದ್ದು ಬೆಳಗ್ಗೆ ಬಹು ಹೊತ್ತಿನವರೆಗೆ ಇದೇ ವಾತಾವರಣ ಇರುತ್ತದೆ. ಇನ್ನ, ಬಿಸಿಲು ಕೂಡ ಜೊರಾಗಿದೆ. ಇದರಿಂದ ಮಧ್ಯಾಹ್ನದ ವೇಳೆ ಶಿವಮೊಗ್ಗ ನಗರದಲ್ಲಿ ಜನ ಸಂಚಾರವೇ ಕಡಿಮೆಯಾಗುತ್ತಿದೆ. ಇದನ್ನು ಓದಿ » ಶಿವಮೊಗ್ಗಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, VISLನಲ್ಲಿ ನಡೆಯಲಿದೆ ಮಹತ್ವದ ಮೀಟಿಂಗ್‌ ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? … Read more

ಹೊಸನಗರದಲ್ಲಿ ಯುವಕನನ್ನು ವಶಕ್ಕೆ ಪಡೆದ ಪೊಲೀಸರು, ವೈದ್ಯಕೀಯ ಪರೀಕ್ಷೆ ಬಳಿಕ ಅರೆಸ್ಟ್

Hosanagara-Police-Station-Board

ಹೊಸನಗರ: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು (Youth Arrest) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಆತನನ್ನು ಬಂದಿಸಿದ್ದಾರೆ. ಹೊಸನಗರ ಪೊಲೀಸರು ಗಸ್ತಿನಲ್ಲಿದ್ದಾಗ ತಾಲೂಕಿನ ಕಚ್ಚಿಗೆಬೈಲು ಗ್ರಾಮದಲ್ಲಿ ಸುಬ್ರಮಣ್ಯ(26) ಎಂಬಾತ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡುಬಂದಿದ್ದು, ವಿಚಾರಣೆ ಮಾಡಿದಾಗ ತಾನು ಗಾಂಜಾ ಸೇವಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಆಕ್ಟ್27(ಬಿ) ಅಡಿಯಲ್ಲಿ … Read more

ಸಾಗರ, ಹೊಸನಗರದ 10,377 ಎಕರೆ ಮಂಜೂರಾತಿ ರದ್ದುಪಡಿಸಿ ಅರಣ್ಯಕ್ಕೆ ಸೇರ್ಪಡೆಗೆ ಒತ್ತಾಯ

himoga-DC-office-and-Police-jeep-in-front-of-office

ಶಿವಮೊಗ್ಗ: ಸಾಗರ ಮತ್ತು ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಕೆಪಿಸಿಗೆ ಮಂಜೂರಾಗಿರುವ ಅರಣ್ಯ ಪ್ರದೇಶಗಳ ಮಂಜೂರಾತಿ ರದ್ದುಪಡಿಸಿ ಅರಣ್ಯಕ್ಕೆ (Forest) ಸೇರ್ಪಡೆ ಮಾಡುವಂತೆ ಜನಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾ‌ರ್ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಈ ಬಗ್ಗೆ ಮನವಿ ಸಲ್ಲಿಸಿ, 1984ರಲ್ಲಿ ಸಾಗರ ಉಪವಿಭಾಗಾಧಿಕಾರಿಗಳ ಆದೇಶದಂತೆ ಎರಡೂ ತಾಲೂಕುಗಳ ವ್ಯಾಪ್ತಿಯಲ್ಲಿ 10,377 ಎಕರೆ ಅಧಿಸೂಚಿತ ಅರಣ್ಯ ಭೂಮಿಯನ್ನು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ಮಂಜೂರು ಮಾಡಲಾಗಿದೆ. ಅಧಿಸೂಚಿತ ಅರಣ್ಯ ಪ್ರದೇಶವನ್ನು ವರ್ಗಾವಣೆ ಮಾಡುವ ಮುನ್ನ ಅರಣ್ಯ ಸಂರಕ್ಷಣಾ ಕಾಯಿದೆ ಅನ್ವಯ … Read more

ಒಣಗಿದ ಮರ ಬಿದ್ದು ಹಸು ಸಾವು

Tree-falls-at-hosanagara-cow-succumbed

ಹೊಸನಗರ: ಮೇಯುತ್ತಿದ್ದ ಹಸುವಿನ (Cow) ಮೇಲೆ ಒಣಗಿದ ಮರ ಬಿದ್ದು ಹಸು ಮೃತಪಟ್ಟಿದೆ. ಹೊಸನಗರ ತಾಲೂಕಿನ ಸಂಕೂರಿನಲ್ಲಿ ಘಟನೆ ಸಂಭವಿಸಿದೆ. ಸಂಕೂರು ಗ್ರಾಮದ ರೈತ ಮಹಿಳೆ ಪುಷ್ಪಾ ಎಂಬವರ ಹಸು ಮೃತಪಟ್ಟಿದ್ದು, ಅಂದಾಜು ₹ 30 ಸಾವಿರ ಮೌಲ್ಯದ್ದಾಗಿದೆ. ತಾಲ್ಲೂಕು ಆಡಳಿತ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ‌ಆಗ್ರಹಿಸಿದ್ದಾರೆ. ಇದನ್ನೂ ಓದಿ » ಮಹಿಳೆಗೆ ದುರ್ಗಿಗುಡಿಯ ವಶೀಕರಣ ಜ್ಯೋತಿಷಿ ಕೊಟ್ಟ ಮಡಿಕೆ, ಮನೆಯಲ್ಲಿ ತೆಗೆದಾಗ ಕಾದಿತ್ತು ಶಾಕ್‌

ಹೆದ್ದಾರಿ ಮಧ್ಯೆ ಅಡಿಕೆ ಸಸಿ ನೆಟ್ಟ ರೈತ, ಕಾರಣವೇನು?

Villager-plant-areca-Sappling-at-a-pot-hole-in-highway-at-hosanagara

ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಬೃಹತ್‌ ಗುಂಡಿಗಳನ್ನು (Pot Holes) ಮುಚ್ಚದ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಮತ್ತಿಮನೆ ಶ್ರೀಕಾಂತ್‌ ಎಂಬುವವರು ವಿಭಿನ್ನ ಪ್ರತಿಭಟಿನೆ ಆರಂಭಿಸಿದ್ದಾರೆ. ಪ್ರತಿ ಗುಂಡಿಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹೊಸನಗರ – ನಗರ ಮಾರ್ಗದಲ್ಲಿ ಭಾರಿ ಗಾತ್ರದ ಗುಂಡಿಗಳಾಗಿವೆ. ಇವುಗಳಿಂದ ನಿತ್ಯ ಒಂದಿಲ್ಲೊಂದು ಅಪಘಾತವಾಗುತ್ತಿವೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಮತ್ತಿಮನೆ ಶ್ರೀಕಾಂತ್‌ ಗುಂಡಿ ಮುಚ್ಚಿ, ಅಡಿಕೆ ಸಸಿ … Read more

ಖಾಸಗಿ ಬಸ್ಸಿಗೆ ಡಿಕ್ಕಿಯಾಗಿ ಶರಾವತಿ ಹಿನ್ನೀರಿನತ್ತ ಪಲ್ಟಿಯಾದ ಕಾರು, ವ್ಯಕ್ತಿ ಸಾವು, ಹೇಗಾಯ್ತು ಘಟನೆ?

Car-and-Bus-mishap-near-madodi-in-hosanagara-taluk

ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಕಾರು (Car) ಹಲವು ಬಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಮಡೋಡಿ ಎಂಬಲ್ಲಿ ಘಟನೆ ಸಂಭವಿಸಿದೆ. ಬಿ.ಕೆ.ಹರಿಭಟ್‌ (76) ಮೃತರು. ಇವರು ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಎಂಬುವವರ ಜೊತೆಗೆ ಆಲ್ಟೋ ಕಾರಿನಲ್ಲಿ ಹೊಸನಗರದ ನಿಟ್ಟೂರಿನಿಂದ ಮತ್ತಿಕೈ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ. ನಿಟ್ಟೂರು – ನಾಗೋಡಿ ಸಮೀಪದ ಮಡೋಡಿ ಗ್ರಾಮದ ಬಳಿ ಹರಿಭಟ್‌ ಅವರು … Read more

‘ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ, ಡಬಲ್‌ ಹಣ ಗಳಿಸಿ’, ನಂಬಿದ ಹೊಸನಗರದ ವ್ಯಕ್ತಿ, ಆಮೇಲೆ ಅಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ: ಚಿನ್ನ ಮತ್ತು ಬೆಳ್ಳಿ (Gold Silver) ಮೇಲೆ ₹3 ಲಕ್ಷ ಹೂಡಿಕೆ ಮಾಡಿದರೆ ₹3 ಲಕ್ಷ ಲಾಭ ಗಳಿಸಬಹುದು ಎಂದು ನಂಬಸಿ ಹೊಸನಗರ ಮೂಲದ ವ್ಯಕ್ತಿಯೊಬ್ಬರಿಗೆ ₹18.27 ಲಕ್ಷ ವಂಚಿಸಲಾಗಿದೆ. ಹೇಗಾಯ್ತು ವಂಚನೆ? ಚಿನ್ನ, ಬೆಳ್ಳಿ ಮೇಲೆ ಹಣ ಹೂಡಿಕೆ ಮಾಡಿ ಡಬಲ್‌ ಆದಾಯ ಗಳಿಸಬಹುದು ಎಂಬ ಮಾಹಿತಿ ಮತ್ತು ಲಿಂಕ್‌ ಇರುವ ಮೆಸೇಜ್‌ ಒಂದು, ಹೊಸನಗರ ಮೂಲದ ವ್ಯಕ್ತಿಯೊಬ್ಬರ ವಾಟ್ಸಪ್‌ಗೆ ಬಂದಿತ್ತು. ಇದನ್ನು ನಂಬಿದ ಅವರು ಹಣ ಹೂಡಿಕೆ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ … Read more

ಖಾಸಗಿ ಬಸ್‌, ಲಾರಿ ಡಿಕ್ಕಿ, ದಂಪತಿ, ಬಸ್‌ ಚಾಲಕನಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?

Lorry-and-Bus-Incident-at-Hosanagara-Nitturu

ಹೊಸನಗರ: ನಿಟ್ಟೂರು ಸಮೀಪದ ಗುರಟೆ ಗ್ರಾಮದ ಬಳಿ ಖಾಸಗಿ ಬಸ್‌ (Private Bus) ಮತ್ತು ಲಾರಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬಸ್‌ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌, ಹೊಸನಗರ ಕಡೆಯಿಂದ ಕಬ್ಬಿಣ ತುಂಬಿಕೊಂಡು ತೆರಳುತ್ತಿದ್ದ ಲಾರಿ ಮಧ್ಯೆ ಡಿಕ್ಕಿಯಾಗಿವೆ. ಘಟನೆಯಲ್ಲಿ ಚಾಲಕ ರಮೇಶ್‌ ಹಳೂರಿ ಮತ್ತು ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ದಂಪತಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ಸಿನಲ್ಲಿ 30ಕ್ಕೂ … Read more