ಚಿಕಿತ್ಸೆಗೆ ಬಂದಿದ್ದ ಚಿತ್ರದುರ್ಗದ ಮಹಿಳೆ ಸೇರಿ ಇಬ್ಬರು ರೋಗಿಗಳು ಶಿವಮೊಗ್ಗದಲ್ಲಿ ನಾಪತ್ತೆ

Doddapete-Police-Station-General-Image.

SHIVAMOGGA LIVE NEWS | 3 JANUARY 2023 SHIMOGA : ಎರಡು ಪ್ರತ್ಯೇಕ ಪ್ರಕರಣದಲ್ಲಿ ಚಿಕಿತ್ಸೆಗೆಂದು ಶಿವಮೊಗ್ಗದ ಎರಡು ಆಸ್ಪತ್ರೆಗೆ ಬಂದಿದ್ದ ಇಬ್ಬರು ರೋಗಿಗಳು ನಾಪತ್ತೆಯಾಗಿದ್ದಾರೆ (missing). ಈ ಸಂಬಂಧ ಎರಡು ದೂರು ದಾಖಲಾಗಿದೆ. ಪ್ರಕರಣ 1 – ಮಾನಸಿಕ ಅಸ್ವಸ್ಥೆ ನಾಪತ್ತೆ ಶಿವಮೊಗ್ಗ ಮಾನಸ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಚಿಗಳಿಕಟ್ಟೆ ಗ್ರಾಮದ ದುರ್ಗಮ್ಮ (50) ನಾಪತ್ತೆಯಾಗಿರುವ ಮಹಿಳೆ. ಚಿಕಿತ್ಸೆಗೆಂದು ಮಾನಸ ನರ್ಸಿಂಗ್ … Read more

ಕಾರು ಪಡೆದು 4 ತಿಂಗಳಾದ್ರು ವಾಪಸ್ ಕೊಡದ ಸ್ನೇಹಿತನ ಪುತ್ರ, ಮನೆ ಬಳಿ ಹೋದಾಗ ಮಾಲೀಕನಿಗೆ ಶಾಕ್

crime name image

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ತುರ್ತು ಕೆಲಸಕ್ಕೆ ಅಗತ್ಯವಿದೆ ಎಂದು ಕೃಷಿಕರೊಬ್ಬರಿಂದ ಕಾರು (car missing) ಪಡೆದು ನಾಲ್ಕು ತಿಂಗಳಾದರು ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ಸ್ನೇಹಿತನ ಮಗನ ವಿರುದ್ಧ ಆ ಕೃಷಿಕ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬಸವನಗೌಡ ಎಂಬುವವರು ತಮ್ಮ ಸ್ನೇಹಿತನ ಮಗ ರೋಹಿತ್ ಐಯ್ಯಂಗಾರ್ ಎಂಬುವವರಿಗೆ ವ್ಯಾಗನಾರ್ ಕಾರು ಕೊಟ್ಟಿದ್ದರು. (car missing) ಏನಿದು ಪ್ರಕರಣ? ರೋಹಿತ್ ಅಯ್ಯಂಗಾರ್ ಅವರ ತಂದೆ ಮತ್ತು ಬಸವನಗೌಡ ಅವರು ಸ್ನೇಹಿತರು. … Read more

ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ

bike theft reference image

SHIVAMOGGA LIVE NEWS | 4 NOVEMBER 2022 SHIMOGA | ಗಾಂಧಿ ಬಜಾರ್ ನಲ್ಲಿ  ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. (bike missing at gandhi bazaar) ಅಜಯ್ ಕುಮಾರ್ ಎಂಬುವವರಿಗೆ ಸೇರಿದ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿದೆ. ಕೆಲಸ ಮುಗಿಸಿ ಬಂದು ರಾತ್ರಿ 10.30ಕ್ಕೆ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಅಮೀರ್ ಅಹಮದ್ ಸರ್ಕಲ್ ನಲ್ಲಿ ವ್ಯಕ್ತಿಗೆ ಡಿಕ್ಕಿ ಹೊಡೆದು … Read more

ಶಿವಮೊಗ್ಗ ಸ್ಮಾರ್ಟ್ ಸಿಟಿ ಕೆಲಸಕ್ಕೆ ಬಂದಿದ್ದ ತೆಲಂಗಾಣದ ಯುವತಿ ನಾಪತ್ತೆ

Doddapete-Police-Station-General-Image.

SHIMOGA | ಸ್ಮಾರ್ಟ್ ಸಿಟಿ (SMART CITY) ಯೋಜನೆ ಅಡಿ ಕೆಲಸ ಮಾಡಲು ತಂದೆ ತಾಯಿ ಜೊತೆಗೆ ತೆಲಂಗಾಣ (TELENGANA) ರಾಜ್ಯದಿಂದ ಬಂದಿದ್ದ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಸಿರೀಷಾ (21) ನಾಪತ್ತೆಯಾದ ಯುವತಿ. ತೆಲಂಗಾಣ ರಾಜ್ಯದ ನಾಗರ ಕರ್ನೂಲ್ ಜಿಲ್ಲೆಯ ಆನಂದ್ ತಮ್ಮ ಪತ್ನಿ ಅಲಮೇಲಮ್ಮ ಮತ್ತು ಮಗಳು ಸಿರೀಷಾ ಜೊತೆಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು. 9 ತಿಂಗಳಿಂದ ಇಲ್ಲಿ ಸ್ಮಾರ್ಟ್ ಸಿಟಿ (SMART CITY) ಯೋಜನೆಯ ಕೆಲಸ ಮಾಡುತ್ತಿದ್ದರು. ಪೋಷಕರೊಂದಿಗೆ ಇದ್ದ ಸಿರೀಷಾ ಆಗಸ್ಟ್ 20ರಂದು ಹೊಸಮನೆ ಬಳಿ … Read more

ಸ್ವೀಟ್ ಖರೀದಿಸಿ ಹಣ ಕೊಡಲು ವ್ಯಾನಿಟಿ ಬ್ಯಾಗ್ ತೆಗೆದ ಮಹಿಳೆಗೆ ಕಾದಿತ್ತು ಶಾಕ್

KSRTC-Bus-After-Curfew-In-Shimoga-city

ಶಿವಮೊಗ್ಗ | ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್’ನಲ್ಲಿದ್ದ ಚಿನ್ನದ (GOLD) ನೆಕ್ಲೇಸ್ ಕಳ್ಳತನ ಮಾಡಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್’ನಲ್ಲಿ ಕೃತ್ಯ ನಡೆದಿದೆ. ಹರಿಹರದ ಜ್ಯೋತಿ ಕಲಾ ಎಂಬುವವರಿಗೆ ಸೇರಿದ 47 ಗ್ರಾಂನ 1.80 ಲಕ್ಷ ರೂ. ಮೌಲ್ಯದ ನೆಕ್ಲೇಸ್ ಕಳ್ಳತನವಾಗಿದೆ. ಹೇಗಾಯ್ತು ಘಟನೆ? ಚಿಕ್ಕಮಗಳೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಜ್ಯೋತಿ ಕಲಾ ಅವರು ಶಿವಮೊಗ್ಗಕ್ಕೆ ಬಂದಿದ್ದರು. KSRTC ಬಸ್’ನಲ್ಲಿ ಬಂದು ಶಿವಮೊಗ್ಗ ನಿಲ್ದಾಣದಲ್ಲಿ ಇಳಿದಿದ್ದರು. ಶಿವಮೊಗ್ಗದಲ್ಲಿರುವ ಅಣ್ಣನ ಮನೆಗೆ ಹೋಗಲು ನಿರ್ಧರಿಸಿ, ಸ್ವೀಟ್ ಖರೀದಿಸಲು ಬೇಕರಿಗೆ ಹೋಗಿದ್ದರು. ಸ್ವೀಟ್ ಖರೀದಿಸಿ … Read more

ಒಂದು ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ಶಿವಮೊಗ್ಗದಿಂದ ಹೊರಟ ಲಾರಿ ನಾಪತ್ತೆ

Areca-in-gunny-bag-APMC-Shimoga

SHIVAMOGGA LIVE NEWS | ARECA | 4 ಜೂನ್ 2022 ಶಿವಮೊಗ್ಗದಿಂದ ಗುಜರಾತ್ ರಾಜ್ಯದ ಅಹಮದಾಬಾದ್’ಗೆ 1.26 ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ಮಲೆನಾಡು ಅಡಕೆ ಮಾರಾಟಗಾರರ ಸಹಕಾರ ಸಂಘಕ್ಕೆ (ಮ್ಯಾಮ್ಕೋಸ್) ಸಂಬಂಧಿಸಿದ ಅಡಕೆ ನಾಪತ್ತೆಯಾಗಿದೆ. ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಗುಜರಾತ್’ನ ಅಹಮದಾಬಾದ್’ಗೆ ಅಡಕೆ ಕಳುಹಿಸಲಾಗಿತ್ತು. … Read more

ಶಿವಮೊಗ್ಗದಲ್ಲಿ ನಾಯಿ ಕದ್ದವರು ಕೆಲವೇ ಗಂಟೆಯಲ್ಲಿ ಅರೆಸ್ಟ್

061221 Dog Theft Found at Shimoga Jayanagara Police Station

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021 ವೈದ್ಯರೊಬ್ಬರ ಮನೆ ಕಾಂಪೌಂಡ್’ನಲ್ಲಿದ್ದ ನಾಯಿ ಮರಿ ಕಳ್ಳತನ ಮಾಡಿದ್ದವರನ್ನು, ಪೊಲೀಸರು ಬಂಧಿಸಿದ್ದಾರೆ. ನಾಯಿ ಕಳುವಾಗಿ 12 ಗಂಟೆಯೊಳಗೆ ನಾಯಿಯನ್ನು ಪತ್ತೆ ಮಾಡಲಾಗಿದೆ. ನಾಯಿ ಕದ್ದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಏನಿದು ಪ್ರಕರಣ? ರಾಜೇಂದ್ರ ನಗರದಲ್ಲಿರುವ ಡಾ.ಪರಮೇಶ್ವರ್ ಅವರು ಆರು ತಿಂಗಳ ಹಿಂದೆ ಬೀಗಲ್ ತಳಿಯ ನಾಯಿ ಮರಿ ಖರೀದಿಸಿದ್ದರು. ಭಾನುವಾರ ಮಧ್ಯಾಹ್ನ ಡಾ.ಪರಮೇಶ್ವರ್ ಮತ್ತು ಅವರು ಪತ್ನಿ ಮಲಗಿದ್ದರು. ನಾಯಿ ಮರಿ ಮನೆಯ ಕಾಂಪೌಂಡ್ ಒಳಗೆ … Read more

ಮನೆಯವರೆಲ್ಲ ಮಲಗಿದ್ದಾಗ ಮನೆ ಬಿಟ್ಟಳು ಕೆಲಸದಾಕೆ, ಸೂಟ್ ಕೇಸ್’ನಲ್ಲಿ ಹೊತ್ತೊಯ್ದದ್ದು ಬಟ್ಟೆ ಅಲ್ಲ

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021 ಮನೆ ಕೆಲಸಕ್ಕೆಂದು ಬಂದ ಮಹಿಳೆಯೊಬ್ಬರು ಮನೆಯವರೆಲ್ಲ ಮಲಗಿದ್ದಾಗ ಬೆಳ್ಳಿ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಶಿವಮೊಗ್ಗ ಗಾಂಧಿನಗರದ ನಾಗರತ್ನ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನಾಗರತ್ನ ಅವರ ಪತಿ ಅನಾರೋಗ್ಯಕ್ಕೀಡಾಗಿದ್ದಾರೆ. ಹಾಗಾಗಿ ಮನೆಯಲ್ಲಿ ಕೆಲಸಕ್ಕೆ ಮಹಿಳೆಯೊಬ್ಬರನ್ನು ನೇಮಿಸಲಾಗಿತ್ತು. ಆನ್’ಲೈನ್ ಮೂಲಕ ವ್ಯಕ್ತಿಯೊಬ್ಬರ ಮೂಲಕ ಚನ್ನಗಿರಿ ಮೂಲದ ಉಮಾ ಎಂಬುವವರನ್ನು ಕಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಸುಮಾರು 10 ದಿನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಉಮಾ, … Read more

ರಿಪ್ಪನ್ ಪೇಟೆ ಬಳಿ ಕಾಡಲ್ಲಿ ಯುವತಿ ಹತ್ಯೆ ಕೇಸ್, ಶಿವಮೊಗ್ಗದಲ್ಲಿ ಪ್ರಿಯಕರ ಸಾವು, ಘಟನೆಗೆ ಕಾರಣವಾಯ್ತಾ ಭದ್ರಾವತಿ ಯುವಕನ ಪರಿಚಯ?

270821 Ripponpete Murder Case Youth Dies at Mc Gann

ಶಿವಮೊಗ್ಗ ಲೈವ್.ಕಾಂ | RIPPONPETE / SHIMOGA NEWS | 27 ಆಗಸ್ಟ್ 2021 ನೇರಲಿಗೆ ಅರಣ್ಯ ಪ್ರದೇಶದಲ್ಲಿ ಯುವತಿ ಹತ್ಯೆ ಮಾಡಿ, ವಿಷ ಸೇವಿಸಿದ್ದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಕೊಲೆಗೈದು ಆತ್ಮಹತ್ಯೆಗೆ ಯತ್ನ ಶಿವಮೊಗ್ಗದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (22) ಎಂಬಾಕೆಯನ್ನು ಆಕೆಯ ಸ್ನೇಹಿತ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶಿವಮೂರ್ತಿ ಕೊಲೆ … Read more

ತುಂಗಾ ನದಿ ದಂಡೆ ಮೇಲೆ ಚಪ್ಪಲಿ ಬಿಟ್ಟು ಯುವಕ ನಾಪತ್ತೆ, ಎರಡು ದಿನದ ಬಳಿಕ ಶೋಧ ಕಾರ್ಯ ಅಂತ್ಯ

290721 Fire Department Operation at Tunga River Near Pillangere 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021 ತುಂಗಾ ನದಿಯಲ್ಲಿ ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ನಡೆಸುತ್ತಿದ್ದ ಶೋಧ ಕಾರ್ಯ ಅಂತ್ಯವಾಗಿದೆ. ಎರಡು ದಿನ ನಿರಂತರ ಶೋಧ ನಡೆಸಿದರೂ ಯುವಕನ ಸುಳಿವು ಸಿಕ್ಕಿಲ್ಲ. ಏನಿದು ಶೋಧ ಕಾರ್ಯ? ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಯುವಕನೊಬ್ಬ ಮುಳುಗಿದ್ದಾನೆ ಎಂದು ಹೇಳಲಾಗಿತ್ತು. ಈ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನ ಶೋಧ ಕಾರ್ಯಾಚರಣೆ ನಡೆಸಿದರು. ಎರಡು ದಿನದ ಕಾರ್ಯಾಚರಣೆ ಬುಧವಾರಕ್ಕೆ ಅಂತ್ಯವಾಯಿತು. ಶೋಧಕ್ಕೆ … Read more