ಶಿವಮೊಗ್ಗದಲ್ಲಿ ಬೆಳಗ್ಗೆ ದೇಗುಲಕ್ಕೆ ಬಂದ ಅರ್ಚಕರಿಗೆ ಕಾದಿತ್ತು ಆಘಾತ, ದೇವರ ವಿಗ್ರಹಗಳೇ ಮಾಯ, ಆಗಿದ್ದೇನು?

Police-Jeep-With-Light-New.

ಶಿವಮೊಗ್ಗ : ದೇವಸ್ಥಾನವೊಂದರ (Temple) ಬಾಗಿಲಿನ ಬೀಗ ಮುರಿದ ಕಳ್ಳರು ದೇವರ ಮೂರ್ತಿಗಳನ್ನೇ ಕದ್ದೊಯ್ದಿದ್ದಾರೆ. ಶಿವಮೊಗ್ಗ ನಗರದ ಆನಂದರಾವ್‌ ಬಡಾವಣೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಇದನ್ನೂ ಓದಿ » ಕಾಡು ಹಂದಿ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಅರಣ್ಯಾಧಿಕಾರಿಗಳು ದಾಳಿ ಬೆಳಗ್ಗೆ ಪೂಜೆಗೆಂದು ಅರ್ಚಕರು ದೇವಸ್ಥಾನಕ್ಕೆ ಬಂದಾಗ ಬಾಗಿಲಿಗೆ ಹಾಕಿದ್ದ ಬೀಗ ಮುರಿಯಲಾಗಿತ್ತು. ಒಳಗೆ ಹೋಗಿ ಪರಿಶೀಲಿಸಿದಾಗ ಹುಂಡಿ ಒಡೆದು ಸುಮಾರು 8 ಸಾವಿರ ರೂ. ಕಳ್ಳತನ ಮಾಡಲಾಗಿತ್ತು. ಇನ್ನು, ಒಳಗಿದ್ದ ಚೌಡೇಶ್ವರಿ ಮತ್ತು ಗಣಪತಿ ದೇವರ ಹಿತ್ತಾಳೆ … Read more

ದುರ್ಗಿಗುಡಿಯಲ್ಲಿ ವಿಜೃಂಭಣೆಯ ರಥೋತ್ಸವ, ರಣ ಬಿಸಿಲಲ್ಲೂ ಸೇರಿದ್ದರು ದೊಡ್ಡ ಸಂಖ್ಯೆಯ ಜನ

Durgigudi-Temple-Durgamma-Mariyamma-ratotsava

ಶಿವಮೊಗ್ಗ :  ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ (Temple) ವಿಶೇಷ ಪೂಜೆ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ದೇವರಿಗೆ ಕೈ ಮುಗಿದು ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದರು. ದುರ್ಗಿಗುಡಿಯ ದುರ್ಗಮ್ಮ ಮತ್ತು ಮರಿಯಮ್ಮ ದೇವಿ ದೇವಸ್ಥಾನದಿಂದ (Temple) ದುರ್ಗಿಗುಡಿ ಮುಖ್ಯರಸ್ತೆವರೆಗೆ ರಥೋತ್ಸವ ನಡೆಯಿತು. ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ರಥೋತ್ಸವಕ್ಕು ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ದುರ್ಗಿಗುಡಿಯ ವಿವಿಧೆಡೆ‌ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. … Read more

ಚಂದ್ರಗುತ್ತಿ ಅಭಿವೃದ್ಧಿಗೆ ಯೋಜನೆ ಸಿದ್ಧ, ಬಜೆಟ್‌ನಲ್ಲಿ ಮಹತ್ವದ ನಿರ್ಧಾರ ಪ್ರಕಟ, ಏನದು?

Chandragutti-Temple-Soraba.

ಬೆಂಗಳೂರು : ರೇಣುಕಾಂಬ ದೇವಸ್ಥಾನವಿರುವ ಸೊರಬ ತಾಲೂಕು ಚಂದ್ರಗುತ್ತಿಗೆ ಗ್ರಾಮದ ಅಭಿವೃದ್ಧಿಗೆ (Tourism) ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ, ಚಂದ್ರಗುತ್ತಿ ಗ್ರಾಮವನ್ನು ಧಾರ್ಮಿಕ ಮತ್ತು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ » ಸದ್ಯದಲ್ಲೇ ಶಿವಮೊಗ್ಗ ಕೋರ್ಟ್‌ ಕಲಾಪಗಳು ಯು ಟ್ಯೂಬ್‌ನಲ್ಲಿ ನೇರ ಪ್ರಸಾರ, ಯಾವಾಗ ಶುರು?

ಸಿಗಂದೂರು ಲಾಂಚ್‌, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್‌, ಕಾರಣವೇನು?

Sigandur-Launch-in-Sharavathi-River

ಸಾಗರ : ಸಿಗಂದೂರು ಲಾಂಚ್‌ಗೆ (Launch) ವಾಹನಗಳನ್ನು ಬಿಡುವ ವಿಚಾರದಲ್ಲಿ ಜಗಳವಾಗಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ನೇಮಿಸಿರುವ ಟಿಕೆಟ್ ಕಲೆಕ್ಟರ್ ಸೇರಿ ಹಲವರ ವಿರುದ್ಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೇಮಕವಾಗಿರುವ ಟಿಕೆಟ್ ಕಲೆಕ್ಟರ್ ಮತ್ತು 10-15 ಸಹಚರರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಗಲಾಟೆ ಆಗಿದ್ದೇಕೆ? ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಶಿವಪುರದ ನಿವಾಸಿ ಪ್ರಣತಿ, ತಂದೆ ಪ್ರಸನ್ನ, ತಾಯಿ ಪ್ರಭಾ, ಸಹೋದರ … Read more

ಶಿವಮೊಗ್ಗದಲ್ಲಿ ಮುಷ್ಟಿ ಅಕ್ಕಿ ಸಂಗ್ರಹ ಆರಂಭ, ಏನಿದು ಮುಷ್ಟಿ ಅಕ್ಕಿ?

Mushti-Akki-sangraha-by-KS-Eshwarappa-and-KE-Kantesh

SHIVAMOGGA LIVE NEWS, 18 DECEMBER 2024 ಶಿವಮೊಗ್ಗ : ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ವತಿಯಿಂದ ನಡೆಸಲಾಗುತ್ತಿರುವ ಮುಷ್ಟಿ ಅಕ್ಕಿ (Rice) ಸಂಗ್ರಹ ಅಭಿಯಾನಕ್ಕೆ ಬೊಮ್ಮನಕಟ್ಟೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು. ಪಾಪ ಕರ್ಮಗಳು ದೂರಾಗಬೇಕಿದ್ದರೆ ದಾನ ಮಾಡಬೇಕು. ಅನ್ನದಾನ ಅತ್ಯಂತ ಶ್ರೇಷ್ಠವಾದ್ದದ್ದು. ಇದು ಹಸಿವನ್ನು ನೀಗಿಸುವ ಶ್ರೇಷ್ಠ ಕಾರ್ಯ. ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನ ಯಶಸ್ವಿಯಾಗಲಿ. ಶ್ರೀ ಸಾಯಿನಾಥ ಸ್ವಾಮೀಜಿ, … Read more

ತೀರ್ಥಹಳ್ಳಿಯಲ್ಲಿ ದೇವಸ್ಥಾನದ ಬೀಗ ಒಡೆದು ಕಾಣಿಕ ಕಳ್ಳತನ

Maluru-Police-Station-in-Thirthahalli-taluk.webp

SHIVAMOGGA LIVE NEWS | 2 DECEMBER 2024 ತೀರ್ಥಹಳ್ಳಿ : ದೇವಸ್ಥಾನವೊಂದರ (Temple) ಬಾಗಿಲಿನ ಬೀಗ ಮುರಿದು ಹುಂಡಿಯಲ್ಲಿದ್ದ ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಮುಂಡುವಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಅರ್ಚಕ ಪ್ರಶಾಂತ್‌ ಅಡಿಗ ರಾತ್ರಿ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ದೇಗುಲದ ಬಳಿ ಆಗಮಿಸಿದಾಗ ದೇಗುಲದ ಮುಂದಿನ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹುಂಡಿಯ ಬೀಗವನ್ನು ಒಡೆಯಲಾಗಿತ್ತು. ಅದರಲ್ಲಿದ್ದ ಸುಮಾರು 15 … Read more

ಸಿಗಂದೂರು ಸೇತುವೆ, ಸಂಸದ ರಾಘವೇಂದ್ರ ಪ್ರಕಟಿಸಿದ ಫೋಟೊ ವೈರಲ್

Siganduru-Bridge-in-sagara-taluk

SHIMOGA NEWS, 13 OCTOBER 2024 : ಸಿಗಂದೂರು ಸೇತುವೆ ಕಾಮಗಾರಿಯ ಫೋಟೊ ಒಂದನ್ನು ಸಂಸದ ಬಿ.ವೈ.ರಾಘವೇಂದ್ರ ತಮ್ಮ ಸಾಮಾಜಿಕ ಜಲತಾಣದಲ್ಲಿ ಷೇರ್‌ ಮಾಡಿದ್ದಾರೆ. ಇದು ವೈರಲ್‌ (Viral) ಆಗಿದ್ದು ವಾಟ್ಸಪ್‌ ಸ್ಟೇಟಸ್‌ ಸೇರಿದಂತೆ ಹಲವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ರಾರಾಜಿಸುತ್ತಿದೆ. ಸಂಜೆ ಹೊತ್ತಲ್ಲಿ ಸೇತುವೆ ಕಾಮಗಾರಿಯ ಫೋಟೊ ಕ್ಲಿಕ್ಕಿಸಲಾಗಿದೆ. ಎರಡು ಪಿಲ್ಲರ್‌ಗಳ ಮೇಲೆ ಸೇತುವೆ, ಅದಕ್ಕೆ ಹಾಕಿರುವ ರೋಪ್‌ಗಳು ಕಾಣಿಸುತ್ತವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸೇತುವೆ ಯಾವ ರೀತಿ ಕಾಣಲಿದೆ ಎಂಬುದು ಈ ಫೋಟೊದಲ್ಲಿ ಕಾಣಿಸುತ್ತಿದೆ. … Read more

ಶಿವಮೊಗ್ಗದಲ್ಲಿ ಹರೋಹರ ಜಾತ್ರೆಗೆ ದಿನಾಂಕ ಫಿಕ್ಸ್‌, ಈ ಬಾರಿ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಬದಲಾವಣೆ

Harohara-Jathre-in-Shimoga-in-July-2024.

SHIVAMOGGA LIVE NEWS | 25 JULY 2024 ಶಿವಮೊಗ್ಗ ಲೈವ್.ಕಾಂ : ಗುಡ್ಡೇಕಲ್‌ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಆಡಿಕೃತ್ತಿಕೆ ಜಾತ್ರೆ (Aadi Krithigai Jathre) ಜುಲೈ 28 ಮತ್ತು 29ರಂದು ನಡೆಯಲಿದೆ. ಪ್ರತಿ ವರ್ಷದಂತೆ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಕಾವಡಿ ಹೊತ್ತು ಬರಲಿದ್ದಾರೆ. ಈ ಬಾರಿ ಭಕ್ತರು ದೇವಸ್ಥಾನಕ್ಕೆ ಬರುವ ಮತ್ತು ಹಿಂತಿರುಗುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ರಾಜಶೇಖರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ರಾಜಶೇಖರಪ್ಪ, ಆಡಿಕೃತ್ತಿಕೆ ಜಾತ್ರೆಗೆ ಬರುವ … Read more

ಮಳೆಯಲ್ಲೂ ಚಂದ್ರಗುತ್ತಿಯಲ್ಲಿ ಪೂಜೆ | ಕೂಡಲಿಯಲ್ಲಿ ಚಾತುರ್ಮಾಸ್ಯ ಆರಂಭ | ತೊಗರ್ಸಿ ಆಭರಣ ಸರ್ಕಾರದ ಸುಪರ್ದಿಗೆ

220724 chandragutti temple and kudli mutt

SHIVAMOGGA LIVE NEWS | 22 JULY 2024 SHIMOGA : ಹುಣ್ಣಿಮೆ ಹಿನ್ನೆಲೆ ಚಂದ್ರಗುತ್ತಿ ದೇವಸ್ಥಾನಕ್ಕೆ (Temple) ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದರು. ಕೂಡಲಿಯಲ್ಲಿ ಚಾತುರ್ಮಾಸ್ಯ ಆರಂಭ. ಇಲ್ಲಿದೆ ಫಟಾಫಟ್‌ ನ್ಯೂಸ್‌. ಇದನ್ನೂ ಓದಿ ⇓ ಸಾಗರದಲ್ಲಿ ಹೆಚ್ಚು ಮಳೆ, ಶಿವಮೊಗ್ಗದಲ್ಲಿ ಬಹಳ ಕಡಿಮೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

ಬೆಳಗ್ಗೆ ದೇಗುಲಕ್ಕೆ ಬಂದ ಅರ್ಚಕರಿಗೆ ಕಾದಿತ್ತು ಆಘಾತ, ವಿಷಯ ತಿಳಿದು ಕಮಿಟಿಯವರಿಗೆ ದಿಗ್ಭ್ರಮೆ, ಆಗಿದ್ದೇನು?

Crime-News-General-Image

SHIVAMOGGA LIVE NEWS | 10 JULY 2024 SHIMOGA : ದೇವಸ್ಥಾನದ (Temple) ಬಾಗಿಲನ್ನು ಮೀಟಿ ತೆಗೆದು ಹುಂಡಿ ಒಡೆದು ಕಾಣಿಕೆ ಹಣ ಕಳವು ಮಾಡಲಾಗಿದೆ. ಶಿವಮೊಗ್ಗ ತಾಲೂಕು ಆಲದಹಳ್ಳಿ ಶ್ರೀ ವೀರಭದ್ರೇಶ್ವರ ಮತ್ತು ಹಾಲಸ್ವಾಮಿ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ಅರ್ಚಕರು ಬೆಳಗ್ಗೆ ಪೂಜೆಗೆಂದು ದೇಗುಲಕ್ಕೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಹುಂಡಿ ಒಡೆದು ಸುಮಾರು 7500 ರೂ. ಕಾಣಿಕ ಹಣ, ದೇವರ ಕೊರಳಿನ 3 ಬೆಳ್ಳಿಯ ಕರಡಿಗೆ, ದೇವರ ಚಿನ್ನದ ತಾಳಿ, ಚಿನ್ನದ … Read more